ಮೊದಲು ದೇಶ ಸುತ್ತಿ ಎಂದು ಭಾರತೀಯರಿಗೆ ಕರೆ ನೀಡಿದ ಪ್ರಧಾನಿ ಮೋದಿ
ಕೇದಾರನಾಥ, ಮೇ 19: ಏಳು ಹಂತದ ಚುನಾವಣಾ ಪ್ರಚಾರ ಮುಗಿಸಿ ಕೇದಾರನಾಥ, ಬದರಿನಾಥ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಭಾರತೀಯರಗೆ ವಿಶೇಷ ಸಂದೇಶ ನೀಡಿದ್ದಾರೆ.
ವಿದೇಶಗಳಿಗೆ ಭಾರತೀಯ ಪ್ರವಾಸಕ್ಕೆ ಹೋಗುವುದಕ್ಕೆ ನನಗೆ ಆಕ್ಷೇಪವಿಲ್ಲ, ಆದರೆ ಮೊದಲು ಭಾರತದಲ್ಲಿನ ಪ್ರವಾಸಿತಾಣಗಳನ್ನು ವೀಕ್ಷಿಸಿ ಎಂದು ಮೋದಿ ಕರೆ ನೀಡಿದ್ದಾರೆ.
ಕೇದಾರನಾಥ ಗುಹೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ಯಾನ
ಚುನಾವಣಾ ಪ್ರಚಾರದ ಬಳಿಕ ಕೇದಾರನಾಥಕ್ಕೆ ಭೇಟಿ ನೀಡಿ ಧ್ಯಾನದಲ್ಲಿ ತೊಡಗಿಕೊಂಡಿದ್ದರು. ಇಂದು ಇನ್ನೊಂದು ಪವಿತ್ರ ಕ್ಷೇತ್ರ ಬದರಿನಾಥಕ್ಕೆ ಭೇಟಿ ನೀಡಲಿದ್ದಾರೆ.
PM Modi at Kedarnath says, "I want people of our nation to see the country. While, I don't have any objection to them travelling to foreign countries but they should also travel to see the different places in our country." pic.twitter.com/porDMyYlgx
— ANI (@ANI) May 19, 2019
ಮೋದಿ ಎರಡು ವರ್ಷದಲ್ಲಿ ನಾಲ್ಕು ಬಾರಿ ಶಿವ ದೇವಾಲಯಕ್ಕೆ ಬೇಟಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಉತ್ತರಖಂಡದ ಚಾರ್ ದಾಮ್ಗೂ ಕೂಡ ಭೇಟಿ ನೀಡುವ ಸಾಧ್ಯತೆ ಇದೆ. ಇಂದು ಅಂತಿಮ ಹಂತದ ಚುನಾವಣೆ ನಡೆಯುತ್ತಿದ್ದು, 918 ಅಭ್ಯರ್ಥಿಗಳ ಭವಿಷ್ಯವನ್ನು 10 ಕೋಟಿ ಮತದಾರರು ನಿರ್ಧರಿಸಲಿದ್ದಾರೆ.