ಶ್ರೀಲಂಕಾ ತಮಿಳರ ರಕ್ಷಣೆಗೆ ಭಾರತ ಬದ್ಧ: ಮೋದಿ
ನವದೆಹಲಿ, ಮಾ. 14: ಶ್ರೀಲಂಕಾದ ಜಾಫ್ನಾದಲ್ಲಿರುವ ತಮಿಳರಿಗೆ ವಸತಿ ಕಲ್ಪಿಸಲು ಭಾರತ ಆರ್ಥಿಕ ನೆರವು ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಶ್ರೀಲಂಕಾ ಪ್ರವಾಸದಲ್ಲಿರುವ ಮೋದಿ ಶನಿವಾರ ಎಲ್ ಟಿಟಿಇ ಸಂಘಟನೆ ಕಾರಸ್ಥಾನವಾಗಿದ್ದ ಜಾಫ್ನಾಕ್ಕೆ ಭೇಟಿ ನೀಡಿದ್ದರು. ನಿರಾಶ್ರಿತರಿಗೆ ಸೂರು ಕಲ್ಪಿಸಲು ನಾವು ಬದ್ಧ. ಶ್ರೀಲಂಕಾ ಸರ್ಕಾರದೊಂದಿಗೆ ಸೇರಿ ಜಾಫ್ನಾದಲ್ಲಿ ಸುಮಾರು 27 ಸಾವಿರ ಮನೆಗಳ ನಿರ್ಮಾಣಕ್ಕೆ ಮುಂದಾಗಲಿದ್ದೇವೆ ಎಂದು ತಿಳಿಸಿದರು.
ಎಲ್ ಟಿಟಿಇ ಮುಖ್ಯಸ್ಥ ಪ್ರಭಾಕರನ್ ವೇಳೆಯಲ್ಲಿ ಜಾಫ್ನಾ ಎಲ್ ಟಿಟಿಇ ಸಂಘಟನೆಯ ರಾಜಧಾನಿಯಾಗಿತ್ತು. ಈಗಲೂ ಇಲ್ಲಿ ಸುಮಾರು 60 ಮಿಲಿಯನ್ ತಮಿಳರು ನಿರಾಶ್ರಿತರಾಗಿದ್ದು, ಶ್ರೀಲಂಕಾ ಸರ್ಕಾರ ಇಲ್ಲಿ ನಿರಾಶ್ರಿತ ಶಿಬಿರಗಳನ್ನು ನಡೆಸುತ್ತಿದೆ. 3 ರಾಷ್ಟ್ರಗಳ ಪ್ರವಾಸಲ್ಲಿರುವ ಮೋದಿ ಶನಿವಾರ ಜಾಫ್ನಾಕ್ಕೆ ಭೇಟಿ ನೀಡಿದರು. ಆ ಮೂಲಕ ಜಾಫ್ನಾಕ್ಕೆ ಭೇಟಿ ನೀಡಿದ ಮೊದಲ ಭಾರತ ಪ್ರಧಾನಿ ಎಂಬ ಖ್ಯಾತಿಗೂ ಪಾತ್ರರಾದರು.(ಪಿಟಿಐ ಚಿತ್ರಗಳು)
ದೇವಾಲಯದಲ್ಲಿ ಪೂಜೆ
ಶ್ರೀಲಂಕಾದ ಜಾಫ್ನಾದ ದೇವಾಲಯವೊಂದರಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ.
ರೈಲಿಗೆ ಚಾಲನೆ
ಶ್ರೀಲಂಕಾದ ತಲೈಮನ್ನಾರ್ ನಲ್ಲಿ ರೈಲಿಗೆ ಮೋದಿಯಿಂದ ಹಸಿರು ನಿಶಾನೆ
ಮೋದಿಗೆ ಸುಸ್ವಾಗತ
ಶ್ರೀಲಂಕಾದ ತಲೈಮನ್ನಾರ್ ನಲ್ಲಿ ಹೊಸ ರೈಲಿಗೆ ಚಾಲನೆ ನೀಡಲು ಆಗಮಿಸಿದ ಮೋದಿಗೆ ಆರತಿ ಬೆಳಗಿ ಸ್ವಾಗತ
ಮೋದಿ ಹೆಜ್ಜೆ
ಶ್ರೀಲಂಕಾದ ಅನುರಾಧಪುರದಲ್ಲಿರುವ ಭೋದಿ ವೃಕ್ಷದ ಬಳಿ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಜತೆ ಮೋದಿ ಹೆಜ್ಜೆ
ವೆಲ್ ಕಮ್
ಶ್ರೀಲಂಕಾದ ಸ್ಪೀಕರ್ ಚಮಲ್ ರಾಜಪಕ್ಷೆ ಅವರಿಂದ ಮೋದಿಗೆ ಸ್ವಾಗತ
ಸ್ವಾಗತ ನಿಮಗೆ
ಪ್ರಧಾನಿ ಮೋದಿ ಆಗಮನಕ್ಕೆ ಸ್ವಾಗತ ಕೋರಲು ಸಿದ್ಧರಾಗಿ ನಿಂತಿದ್ದ ಪುಟಾಣಿಗಳು