ಉಸ್ತಾದ್ ದಾಗರ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ
ನವದೆಹಲಿ, ಆಗಸ್ಟ್ 01: ಹೆಸರಾಂತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ಉಸ್ತಾದ್ ಹುಸ್ಸೇನ್ ಸಯೀದುದ್ದೀನ್ ದಾಗರ್ ಅವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.
ಉಸ್ತಾದ್ ಹುಸ್ಸೇನ್ ಸಯೀದುದ್ದೀನ್ ದಾಗರ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗಿತಕ್ಕೆ ಅವರು ನೀಡಿರುವ ಕೊಡುಗೆ ಪೀಳಿಗೆಗಳವರೆಗೆ ಸ್ಮರಿಸಲಾಗುತ್ತದೆ.
'ಉಸ್ತಾದ್
ಹುಸ್ಸೇನ್
ಸಯೀದುದ್ದೀನ್
ದಾಗರ್
ಅವರ
ಸಂಗೀತದಿಂದ
ಭಾರತ
ಮತ್ತು
ವಿಶ್ವದಾದ್ಯಂತ
ಜನ
ಉತ್ಸಾಹಭರಿತರಾಗಿದ್ದರು,
ಅವರು
ಸಂಗೀತೋತ್ಸಾಹಿಗಳಿಗೆ
ಸ್ಫೂರ್ತಿಯಾಗಿದ್ದರು'
ಎಂದು
ಪ್ರಧಾನಿ
ತಿಳಿಸಿದ್ದಾರೆ.
People across India & the world were enthralled by the music of Ustad Hussain Sayeeduddin Dagar, an inspiration for music enthusiasts: PM
— PMO India (@PMOIndia) July 31, 2017
ಕೆಲ
ದಿನಗಳಿಂದ
ಅನಾರೋಗ್ಯದಿಂದ
ಬಳಲುತ್ತಿದ್ದ
ಉಸ್ತಾದ್
ಹುಸ್ಸೇನ್
ಸಯೀದುದ್ದೀನ್
ದಾಗರ್(78)
ಅವರಿಗೆ
ಪುಣೆಯ
ಖಾಸಗಿ
ಆಸ್ಪತ್ರೆಯಲ್ಲಿ
ಚಿಕಿತ್ಸೆ
ನೀಡಲಾಗುತ್ತಿತ್ತು.
ಸೋಮವಾರ
ತಡರಾತ್ರಿ
12:30ರ
ಸುಮಾರಿಗೆ
ಚಿಕಿತ್ಸೆ
ಫಲಕಾರಿಯಾಗದೆ
ಅವರು
ಕೊನೆಯುಸಿರೆಳೆದರು.
Ustad Hussain Sayeeduddin Dagar’s demise is saddening. His contribution to Hindustani classical music will be remembered for generations: PM
— PMO India (@PMOIndia) July 31, 2017
ದ್ರುಪದ್ ಗಾಯನದಲ್ಲಿ ಖ್ಯಾತಿ ಗಳಿಸಿದ್ದ ಉಸ್ತಾದ್ ಸಯೀದುದ್ದೀನ್ ಅವರು1948ರಿಂದ ಅವರು ಪುಣೆಯಲ್ಲಿ ನೆಲೆಸಿದ್ದರು. ಉಸ್ತಾದ್ ಅವರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.