ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮುಸ್ಲಿಂ ಬಾಂಧವರಿಗೆ ಬಕ್ರೀದ್ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ
ನವದೆಹಲಿ, ಜುಲೈ 21: ಈದ್-ಅಲ್-ಅಧಾ ಅಥವಾ ಬಕ್ರೀದ್ ಹಬ್ಬ ಆಚರಿಸುವ ದೇಶದ ಮುಸ್ಲಿಂ ಬಾಂಧವರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಹಲವು ಗಣ್ಯ ನಾಯಕರು ಶುಭಾಶಯ ತಿಳಿಸಿದ್ದಾರೆ.
ಬಕ್ರೀದ್ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ "ಈದ್-ಉಲ್-ಅಧಾ ಶುಭಾಶಯಗಳು. ಈ ದಿನದಂದು ಸಾಮೂಹಿಕ ಸಹಾನುಭೂತಿ, ಸಾಮರಸ್ಯ ಮತ್ತು ಮತ್ತು ಅಂತರ್ಗತತೆಯ ಮನೋಭಾವ ಹೆಚ್ಚಿಸಲಿ," ಎಂದು ಹೇಳಿದ್ದಾರೆ.
"ದೇಶದ ಎಲ್ಲಾ ಸಹ ನಾಗರಿಕರಿಗೆ ಈದ್ ಮುಬಾರಕ್. ಈದ್-ಉಜ್-ಜುಹಾ ಪ್ರೀತಿ ಮತ್ತು ತ್ಯಾಗದ ಮನೋಭಾವವನ್ನು ವ್ಯಕ್ತಪಡಿಸಲು ಹಾಗೂ ಅಂತರ್ಗತ ಸಮಾಜದಲ್ಲಿ ಏಕತೆ ಮತ್ತು ಭ್ರಾತೃತ್ವಕ್ಕಾಗಿ ಒಟ್ಟಾಗಿ ಕೆಲಸ ಮಾಡುವ ಹಬ್ಬವಾಗಿದೆ. ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಲು ಮತ್ತು ಎಲ್ಲರ ಸಂತೋಷಕ್ಕಾಗಿ ಕೆಲಸ ಮಾಡುವುದಾಗಿ ನಾವು ಸಂಕಲ್ಪ ಮಾಡೋಣ," ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮೂಲಕ ದೇಶದ ಜನರಿಗೆ ಶುಭಾಶಯ ತಿಳಿಸಿದ್ದಾರೆ.
Recommended Video
ಗುಜರಾತ್
ಮಾದರಿಯಲ್ಲೇ
ಸಿಎಂ
ಪಟ್ಟದಿಂದ
ಯಡಿಯೂರಪ್ಪ
ಔಟ್
??
|
Oneindia
Kannada
Comments
narendra modi bakrid festival muslim coronavirus india ನರೇಂದ್ರ ಮೋದಿ ರಾಮನಾಥ್ ಕೋವಿಂದ್ ಬಕ್ರೀದ್ ಹಬ್ಬ ಮುಸ್ಲಿಂ ವೈರಸ್ ಭಾರತ
English summary
Eid Al-Adha 2021: PM Narendra Modi, President Ramnath Kovind And Other Political Leaders Extend Wishes On Bakrid to Indian citizens.
Story first published: Wednesday, July 21, 2021, 10:55 [IST]