ನೋಟ್ ಬ್ಯಾನ್ ಮೂಲಕ ದೇಶದ ಪ್ರಗತಿ ನಾಶ ಮಾಡಿದ ಮೋದಿ: ರಾಹುಲ್
ನವದೆಹಲಿ, ಜನವರಿ 06: ದೇಶದ ಪ್ರಗತಿಗೆ ಮಾರಕವಾದ ಅಪನಗದೀಕರಣ, ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೆ ತರುವ ಮೂಲಕ ಪ್ರಧಾನಿ ಮೋದಿ ಅವರು ತಮ್ಮ ಅಸಮರ್ಥ ಆಡಳಿತ, ಸರ್ವಾಧಿಕಾರಿ ಧೋರಣೆ ಮುಂದುವರೆಸಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ವಿವಿಧ ಮಾಧ್ಯಮಗಳಲ್ಲಿ ಮೋದಿ ಸರ್ಕಾರದ ಯೋಜನೆಗಳ ವೈಫಲ್ಯಗಳ ಬಗ್ಗೆ ಬಂದಿರುವ ವರದಿಗಳನ್ನು ರಾಹುಲ್ ಅವರು ಫೇಸ್ಬುಕ್, ಟ್ವೀಟ್ ಗಳ ಮೂಲಕ ಹಂಚಿಕೊಂಡಿದ್ದಾರೆ. ನಿರುದ್ಯೋಗ, ರೈತರ ಸಾಲಮನ್ನಾ, ಆರ್ಥಿಕ ಪ್ರಗತಿ ಇಳಿಕೆಯಾಗಿರುವ ಬಗ್ಗೆ ರಾಹುಲ್ ಟೀಕಿಸಿದ್ದಾರೆ.
ಪ್ರತಿಯೊಬ್ಬ ಭಾರತೀಯನು ಪ್ರಧಾನಿ ಮೋದಿಗೆ ಈ ಪ್ರಶ್ನೆಯನ್ನು ಕೇಳಬೇಕಿದೆ, ರಾಹುಲ್
ವೋಟ್ ಬ್ಯಾಂಕಿಗಾಗಿ ರೈತರಿಗೆ ಸಾಲಮನ್ನಾ ಮಾಡುವುದ ಸುಳ್ಳು ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ರೈತರ ಭರವಸೆ ಈಡೇರಿಸಿದೆ ಎಂದರು.
ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು. ಆದರೆ, 2018ರಲ್ಲಿ 1 ಕೋಟಿ 10 ಲಕ್ಷ ಉದ್ಯೋಗ ನಷ್ಟವಾಗಿರುವ ಮಾಹಿತಿ ಬಂದಿದೆ. ಅಂಬಾನಿ ಸೋದರರಿಗೆ ನೆರವಾಗುವುದು ಮೋದಿ ಅವರ ಉದ್ದೇಶವಾಗಿದೆ. ರಫೆಲ್ ಯುದ್ಧ ವಿಮಾನ ಖರೀದಿ ಬಗ್ಗೆ ಮೋದಿ ಇನ್ನು ಮಾತನಾಡಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.