ಉಗ್ರರನ್ನು ಬೂಟುಗಾಲಲ್ಲಿ ತುಳಿದ ಬೆಂಗಳೂರು ವಿದ್ಯಾರ್ಥಿಗಳು
ಪೇಶಾವರ, ಡಿ. 17: ಉಗ್ರರ ದಾಳಿಗೆ ಪಾಕಿಸ್ತಾನದಲ್ಲಿ ನೂರಾರು ಎಳೆ ಜೀವಗಳು ಬಲಿಯಾಗಿವೆ. ಪ್ರಪಂಚದಾದ್ಯಂತ ಕೃತ್ಯಕ್ಕೆ ಖಂಡನೆ ವ್ಯಕ್ತವಾಗಿದ್ದು ಮಕ್ಕಳ ಆತ್ಮಕ್ಕೆ ಶೃದ್ಧಾಂಜಲಿ ಸೂಚಿಸಲಾಗುತ್ತಿದೆ.
ಭಾರತದ ಜೈಪುರ, ಚೆನ್ನೈ, ನವದೆಹಲಿ, ಅಮೃತಸರ ಮತ್ತಿತರ ಕಡೆ ಮೊಂಬತ್ತಿ ಉರಿಸಿ ಸಂತಾಪ ಸೂಚಿಸಲಾಯಿತು. ಪಾಕಿಸ್ತಾನದ ಇಸ್ಲಾಮಾಬಾದ್ , ಕಾರಾಚಿಯಲ್ಲೂ ಮಕ್ಕಳು ನಾಗರಿಕರು ಶೃದ್ಧಾಂಜಲಿ ಸಲ್ಲಿಸಿದರು.[ಪಾಕಿಸ್ತಾನದಲ್ಲಿ ಉಗ್ರರ ದಾಳಿಗೆ ನೂರಾರು ಮಕ್ಕಳು ಬಲಿ]
ಉಗ್ರರ ಅಟ್ಟಹಾಸಕ್ಕೆ ನಲುಗಿರುವ ಪಾಕಿಸ್ತಾನದಲ್ಲಿ ಪರಿಸ್ಥಿತಿ ಸುಧಾರಿಸುವ ಲಕ್ಷಣ ಕಂಡುಬರುತ್ತಿಲ್ಲ. ಬುಧವಾರವೂ ಪೇಶಾವರದ ಸಮೀಪ ಉಗ್ರರು ದಾಳಿ ಮಾಡಿದ್ದಾರೆ. ಸುಮಾರು 140 ಕ್ಕೂ ಅಧಿಕ ಮಕ್ಕಳನ್ನು ಬಲಿ ತೆಗೆದುಕೊಂಡಿದ್ದ ಉಗ್ರರ ರಕ್ತ ದಾಹಕ್ಕೆ ಕೊನೆಯೆ ಇಲ್ಲವೇ? ಎಂಬ ಪ್ರಶ್ನೆ ಮೂಡಿದೆ.{ಪಿಟಿಐ ಚಿತ್ರಗಳು)
ಬುಧವಾರ ನಡೆದ ಮಕ್ಕಳ ಅಂತ್ಯಕ್ರಿಯೆಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು. ಒಂದೆರಡು ನಿಮಿಷ ಮೌನ ಆಚರಣೆ ಮಾಡಿ ಉಗ್ರರ ಕ್ರಮವನ್ನು ಖಂಡಿಸಲಾಯಿತು. ಶೃದ್ಧಾಂಜಲಿ ಸೂಚಿಸಿದ ಕೆಲ ಚಿತ್ರಗಳು....
ಭಯೋತ್ಪಾದಕರಿಗೆ ಬೂಟಿನ ಏಟು
ಉಗ್ರರ ಭಿತ್ತಿಪತ್ರದ ಮೇಲೆ ತಮ್ಮ ಬೂಟಿನ ಕಾಲಿಟ್ಟು ಆಕ್ರೋಶ ಹೊರಹಾಕಿದ ಬೆಂಗಳೂರು ವಿದ್ಯಾರ್ಥಿಗಳು.
ಮಕ್ಕಳಿಂದ ಶೃದ್ಧಾಂಜಲಿ.
ದೆಹಲಿಯ ವಿದ್ಯಾ ಬಾಲ ಭವನ ಶಾಲೆಯಲ್ಲಿ ಮಕ್ಕಳಿಂದ ಶೃದ್ಧಾಂಜಲಿ
ಅಮೃತಸರ
ಭಿತ್ತಿ ಪತ್ರಗಳನ್ನು ಹಿಡಿದು ಮೊಂಬತ್ತಿ ಬೆಳಗಿ ಶೃದ್ಧಾಂಜಲಿ ಸಲ್ಲಿಕೆ.
ಮೌನಾಚರಣೆ
ಜಾರ್ಖಂಡ್ ನ ಧನ್ ಬಾದ್ ದಲ್ಲಿ ಮೌನದ ಮೂಲಕ ಸಂತಾಪ ಸೂಚಿಸಿದ ಮಕ್ಕಳು.
ಮಕ್ಕಳ ಸ್ಥಿತಿ
ಉಗ್ರರ ದಾಳಿಯಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಚಿತ್ರ.
ಕರಾಚಿ
ಜೀವ ಕಳೆದುಕೊಂಡ ಕಂದಮ್ಮಗಳನ್ನು ಸ್ಮರಿಸಿದ ಮಕ್ಕಳು.
ಅಂತಿಮ ಯಾತ್ರೆ
ಪೇಶಾವರದಲ್ಲಿ ಉಗ್ರರ ದಾಳಿಗೆ ಜೀವ ಕಳೆದುಕೊಂಡ ಮಕ್ಕಳ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡ ಜನಸಮೂಹ.
ಇಸ್ಲಾಮಾಬಾದ್
ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪಾಕಿಸ್ತಾನ್ ಸಿವಿಲ್ ಸೊಸೈಟಿ ಸದಸ್ಯರು.
ಬೆಂಗಳೂರಲ್ಲಿ ಪ್ರತಿಭಟನೆ
ಉಗ್ರರ ಅಟ್ಟಹಾಸ ಖಂಡಿಸಿ ಬೆಂಗಳೂರಲ್ಲಿ ಪ್ರತಿಭಟನೆ ನಡೆಸಿದ ಮಕ್ಕಳು.