ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್ ದಾಳಿಗೆ 15 ವರ್ಷ, ರೂವಾರಿ ಅಜರ್ ಗೆ ಪಾಕ್ ಫುಡ್ಡು!

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಡಿಸೆಂಬರ್ 13: ಪ್ರಜಾಪ್ರಭುತ್ವದ ದೇವಾಲಯವಾದ ಸಂಸತ್ ಮೇಲೆ ದಾಳಿಯಾಗಿ ಡಿಸೆಂಬರ್ 13ಕ್ಕೆ ಹದಿನೈದು ವರ್ಷಗಳಾಯಿತು. ಭಾರತದ ಸಂಸತ್ ಮೇಲೆ ಜೈಶ್ ಇ ಮೊಹ್ಮದ್ ಸಂಘಟನೆಗೆ ಸೇರಿದ ಉಗ್ರರು ನಡೆಸಿದ ದಾಳಿಯ ಗಾಯಕ್ಕೆ ಮತ್ತೊಂದು ವಾರ್ಷಿಕವೂ ಸೇರಿಹೋಗಿದೆ.

ಅಂದಿನ ದಾಳಿಯ ಹಿಂದೆ ಇದ್ದ ಮಾಸ್ಟರ್ ಮೈಂಡ್ ಇನ್ನೂ ಪಾಕಿಸ್ತಾನದಲ್ಲಿ ಆರಾಮವಾಗಿ ಓಡಾಡಿಕೊಂಡು ಇದ್ದಾನೆ. ಕಂದಹಾರ್ ಗೆ ವಿಮಾನ ಅಪಹರಿಸಿ, ಉಗ್ರ ಮಸೂದ್ ಅಜರ್ ನ ಬಿಡುಗಡೆ ಮಾಡುವಂತೆ ಒತ್ತಡ ಹಾಕಿ, ಅದರಲ್ಲೂ ಸಫಲವೂ ಅಗಿದ್ದಾಯಿತು. ಆ ನಂತರವೇ ಜೈಶ್ ಇ ಮೊಹ್ಮದ್ ಎಂಬ ಉಗ್ರಸಂಘಟನೆ ವಿಷ ಬೀಜಾಂಕುರವಾಯಿತು.[ದೆಹಲಿ ವಿವಿ ಮಾಜಿ ಉಪನ್ಯಾಸಕ ಎಸ್ಎಆರ್ ಗಿಲಾನಿ ಬಂಧನ]

Parliament attack- Maulana Azhar is still Pakistan's blue eyed boy

ಅಜರ್ ನನ್ನು ಕಾನೂನು ಕಟ್ಟಳೆಯೊಳಗೆ ಎಳೆದು ತರ್ತೀವಿ ಎಂದು ಪರ್ವೇಜ್ ಮುಷರಫ್ ತಿಪ್ಪೆ ಸಾರಿಸಿದರೆ ವಿನಾ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಆದರೆ ಅಜರ್ ಮಾತ್ರ ಉಗ್ರ ಸಂಘಟನೆ ಆರಂಭಿಸಿ, ಭಾರತದ ಸಂಸತ್ ಮೇಲೆ ದಾಳಿ ಮಾಡಿಸಿಬಿಟ್ಟ. 2001ರ ಡಿಸೆಂಬರ್ 13ರಂದು ಜೈಶ್ ಇ ಮೊಹ್ಮದ್ ಉಗ್ರರು ಸಂಸತ್ ಸಮುಚ್ಚಯದಲ್ಲಿ ಗುಂಡು ಹಾರಿಸಿ, ಹನ್ನೆರಡು ಮಂದಿ ಸಾವಿಗೆ ಕಾರಣರಾದರು.

ಸಂಸತ್ ಕಲಾಪ ಮುಂದೂಡಿದ ನಲವತ್ತು ನಿಮಿಷದ ನಂತರ ದಾಳಿ ನಡೆದಿತ್ತು. ಆ ವೇಳೆ ಎಲ್ಲ ಸಂಸದರು ಹಾಗೂ ಸಚಿವರು ಸಂಸತ್ ನ ಒಳಗೆ ಇದ್ದಿದ್ದರಿಂದ ಯಾರಿಗೇನೂ ತೊಂದರೆ ಆಗಲಿಲ್ಲ. ಒಂದು ಗಂಟೆಗಳ ಗುಂಡಿನ ಚಕಮಕಿ ನಂತರ ಉಗ್ರಗಾಮಿಗಳನ್ನು ಕೊಲ್ಲಲಾಯಿತು. ಈ ಸಂಬಂಧ ಅಫ್ಜಲ್ ಗುರು, ಶೌಕತ್ ಹುಸೇನ್, ಎಸ್ ಎಆರ್ ಗಿಲಾನಿ ಮತ್ತು ನವಜೋತ್ ಸಂಧುನನ್ನು ಬಂಧಿಸಲಾಯಿತು.[ಉಂಡ ಮನೆಗೆ 2 ಬಗೆದಿದ್ದ ಗುರು ಟೈಂ ಲೈನ್]

ಆ ಪೈಕಿ ಸಂಧುಗೆ ಒಂದು ಪ್ರಕರಣ ಬಿಟ್ಟು ಉಳಿದಿದ್ದರಲ್ಲಿ ಖುಲಾಸೆಯಾಯಿತು. ಉಳಿದವರಿಗೆ ಮರಣದಂಡನೆ ಘೋಷಿಸಲಾಯಿತು. ಅದರಲ್ಲಿ ಗಿಲಾನಿಗೆ ಖುಲಾಸೆಯಾದರೆ, ಹುಸೇನ್ ನ ಮರಣದಂಡನೆ ಶಿಕ್ಷೆಯು ಜೀವಾವಧಿ ಶಿಕ್ಷೆಯಾಗಿ ಬದಲಿಸಲಾಯಿತು. ಅಫ್ಜಲ್ ಗುರು ಮರಣದಂಡನೆ ಖಾತ್ರಿಯಾದರೆ, ಗಿಲಾನಿ ಖುಳಾಸೆ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು. ಫೆಬ್ರವರಿ 2012ರಲ್ಲಿ ಅಫ್ಜಲ್ ಗುರುವನ್ನು ನೇಣಿಗೇರಿಸಲಾಯಿತು.

ಹದಿನೈದು ವರ್ಷಗಳ ನಂತರ
ಆ ಹೇಯ ದಾಳಿ ನಡೆದು ಹದಿನೈದು ವರ್ಷಗಳ ನಂತರ ಕೂಡ ತುಂಬ ಬದಲಾಗಿಲ್ಲ. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನಾ ದಾಳಿಗಳು ಭಾರತದಲ್ಲಿ ಆಗುತ್ತಲೇ ಇವೆ. ಅಜರ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಭಾರತ ಸಲ್ಲಿಸಿದ ಮನವಿ ಪಾಕ್ ನಿಂದ ಯಾವ ಸ್ಪಂದನೆ ಇಲ್ಲ.[ಡಿ.13ರ ಸಂಸತ್ ದಾಳಿಯನ್ನು ಮರೆಯಲು ಸಾಧ್ಯವೇ?]

ಅಜರ್ ಇಂದಿಗೂ ಐಎಸ್ ಐ ಪಾಲಿಗೆ ನೆಚ್ಚಿನ ವ್ಯಕ್ತಿ. ನಗ್ರೋಟಾ, ಪಠಾಣ್ ಕೋಟ್ ದಾಳಿಯಲ್ಲಿ ಕೂಡ ಜೈಶ್ ಇ ಮೊಹ್ಮದ್ ಉಗ್ರರ ಕೈವಾಡ ಇತ್ತು. ಆ ದಾಳಿ ನಡೆದಿದ್ದು ಕೂಡ ಇದೇ ಅಜರ್ ಆದೇಶದಂತೆ. ಅಜರ್ ಮೇಲೆ ನಿಷೇಧ ಹೇರಬೇಕೆಂಬ ಭಾರತದ ಕೋರಿಕೆಗೆ ಚೀನಾ ಅಡ್ಡಗಾಲಾಗಿ ನಿಂತಿದೆ.

English summary
It has been 15 yhaers since the temple of democracy, the Parliament of India was attacked by the Jaish-e-Mohammad. Yet another anniversary is being observed today and the fact of the matter is that the man who masterminded the attack continues to walk scot free in Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X