ನೀತಿ ಆಯೋಗದ ಹೊಸ ಸಿಇಒ- ಪರಮೇಶ್ವರನ್ ಅಯ್ಯರ್
ನವದೆಹಲಿ, ಜೂನ್ 24: ನೀತಿ ಆಯೋಗಕ್ಕೆ ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ನೇಮಿಸಿ ಕೇಂದ್ರ ಸರ್ಕಾರ ಶುಕ್ರವಾರ(ಜೂನ್ 24) ರಂದು ಆದೇಶ ಹೊರಡಿಸಿದೆ. ಸರ್ಕಾರದ ಆದೇಶದ ಪ್ರಕಾರ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಾಜಿ ಕಾರ್ಯದರ್ಶಿ ಪರಮೇಶ್ವರನ್ ಅಯ್ಯರ್ ಅವರನ್ನು ನೀತಿ ಆಯೋಗದ ಹೊಸ ಸಿಇಒ ಆಗಿ ನೇಮಿಸಲಾಗಿದೆ.
ಕಳೆದ ವರ್ಷ ಜುಲೈನಲ್ಲಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅಯ್ಯರ್, ಉತ್ತರ ಪ್ರದೇಶ ಕೇಡರ್ನ 1981-ಬ್ಯಾಚ್ನ ಐಎಎಸ್ ಅಧಿಕಾರಿ ಮತ್ತು ಪ್ರಸಿದ್ಧ ನೈರ್ಮಲ್ಯ ತಜ್ಞರಾಗಿದ್ದಾರೆ. ನೀತಿ ಆಯೋಗದ ಹಾಲಿ ಸಿಇಒ ಅಮಿತಾಭ್ ಕಾಂತ್ ಜೂನ್ 30 ರಂದು ನಿವೃತ್ತರಾಗಲಿದ್ದಾರೆ. ಎರಡು ವರ್ಷಗಳವರೆಗೆ ಅಥವಾ ಮುಂದಿನ ಆದೇಶದವರೆಗೆ, ಯಾವುದು ಮೊದಲು ಆಗುತ್ತದೋ ಅದನ್ನು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಪರಮೇಶ್ವರನ್ ಅಯ್ಯರ್ ರನ್ನು ನೇಮಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸಿಬ್ಬಂದಿ ಸಚಿವಾಲಯದ ಆದೇಶವು ಅಯ್ಯರ್ ಅವರ ನೇಮಕಾತಿಯನ್ನು ಕಾಂತ್ಗೆ ಅನ್ವಯಿಸುವ ಅದೇ ನಿಯಮಗಳು ಮತ್ತು ಷರತ್ತುಗಳ ಮೇಲೆ ಮಾಡಲಾಗಿದೆ ಎಂದು ಹೇಳಿದೆ.
ಅಯ್ಯರ್ ಅವರು 2009 ರಲ್ಲಿ ಭಾರತೀಯ ಆಡಳಿತ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದರು. ಅವರು ವಿಶ್ವಸಂಸ್ಥೆಯಲ್ಲಿ ಹಿರಿಯ ಗ್ರಾಮೀಣ ನೀರು ನೈರ್ಮಲ್ಯ ತಜ್ಞರಾಗಿಯೂ ಕೆಲಸ ಮಾಡಿದ್ದರು.
Govt of India appoints IAS (Retd) Parameswaran Iyer as Chief Executive officer, NITI Aayog for a period of two years or until further orders pic.twitter.com/THy2KW2rNT
— ANI (@ANI) June 24, 2022
ನೀತಿ
ಆಯೋಗ
ಬಗ್ಗೆ:
ನೀತಿ
ಆಯೋಗ
ಅಥವಾ
ಭಾರತದ
ಬದಲಾವಣೆಗಾಗಿನ
ರಾಷ್ಟ್ರೀಯ
ಸಂಸ್ಥೆ
(ನ್ಯಾಷನಲ್
ಇನ್ಸ್ಟಿಟ್ಯೂಟಷನ್
ಫಾರ್
ಟ್ರಾನ್ಸ್
ಫಾರ್ಮಿಂಗ್
ಇಂಡಿಯಾ:NITI=National
Institution
for
Transforming
India)ವನ್ನು
ಭಾರತದ
ಯೋಜನಾ
ಆಯೋಗದ
ಬದಲಿಗೆ
ಜನವರಿ
2,
2015ರಲ್ಲಿ
ಸ್ಥಾಪಿಸಲಾಗಿದೆ.
ಇದು
ಮುಖ್ಯವಾಗಿ
ಭಾರತದ
ಆರ್ಥಿಕ
ಬೆಳವಣಿಗೆಗೆ
ಸಹಕಾರಿಯಾಗಿ
ಕೇಂದ್ರ
ಮತ್ತು
ರಾಜ್ಯ
ಸರಕಾರಗಳ
ನೀತಿ
ರೂಪಣೆಯಲ್ಲಿ
ಬೌದ್ಧಿಕ
ಸಂಸ್ಥೆಯಾಗಿ
ಕಾರ್ಯನಿರ್ವಹಿಸುತ್ತದೆ
ಪ್ರಧಾನಿ ಅಧ್ಯಕ್ಷತೆಯ ನೀತಿ ಆಯೋಗದಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್ಗಳು ಇರುತ್ತಾರೆ.ಒಬ್ಬ ಉಪಾಧ್ಯಕ್ಷ,ಓರ್ವ ಕಾರ್ಯನಿರ್ವಹಣಾಧಿಕಾರಿ ಜತೆಗೆ,ವಿವಿಧ ಕ್ಷೇತ್ರಗಳಲ್ಲಿ ತಜ್ಞರಾಗಿರುವ ಐದು ಜನ ಖಾಯಂ ಸದಸ್ಯರು, ಇಬ್ಬರು ಅರೆಕಾಲಿಕ ಸದಸ್ಯರು ಹಾಗೂ ನಾಲ್ವರು ಕೇಂದ್ರ ಸಚಿವರು ಇರುತ್ತಾರೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಲ್ಲಾ ಮುಖ್ಯಮಂತ್ರಿಗಳು ಮತ್ತು ಲೆಫ್ಟಿನೆಂಟ್ ಗವರ್ನರ್ಗಳು ಆಡಳಿತದ ಸಮಿತಿ (ಕೌನ್ಸಿಲ್) ಸದಸ್ಯರಾಗಿರುತ್ತಾರೆ.
ದೇಶದ ಅಭಿವೃದ್ಧಿಗೆ ಪರಿಗಣಿಸಬೇಕಾದ ವಿಷಯಗಳು,ಕ್ಷೇತ್ರಗಳು ಮತ್ತು ತಂತ್ರಗಳ ಕುರಿತು ರಾಜ್ಯಗಳ ಸಲಹೆಯೊಂದಿಗೆ ನೀತಿ ರೂಪಿಸುವುದು ಇದರ ಪ್ರಮುಖ ಕೆಲಸ. ಕೇಂದ್ರ -ರಾಜ್ಯಗಳ ನೀತಿ ರೂಪಣೆ ವಿಷಯದಲ್ಲಿ "ಚಿಂತಕರ ಚಾವಡಿ"ಯ ಪಾತ್ರವಹಿಸಿ ಸಲಹೆ ಸೂಚನೆಗಳನ್ನು ನೀಡುವುದು,ತಳಮಟ್ಟದಿಂದಲೇ ಅಭಿವೃದ್ಧಿಯಾಗುವಂತೆ ನೋಡಿಕೊಳ್ಳುವುದು ಮತ್ತು ಅಭಿವೃದ್ಧಿಯ ಮೌಲ್ಯಮಾಪನ ಮಾಡುವುದು. (ಮಾಹಿತಿ ಕೃಪೆ: ಪಿಟಿಐ/ವಿಕಿಪೀಡಿಯಾ)