ಪಾಕಿಸ್ತಾನದ ಕೃತ್ಯ ಕ್ರೂರ, ಅಮಾನವೀಯ; ಯೋಧರ ಶಿರಚ್ಛೇದಕ್ಕೆ ತೀವ್ರ ಖಂಡನೆ
"ನಾಗರೀಕತೆಯ ನಡವಳಿಕೆಗಳನ್ನು ಮೀರಿ ಸೈನಿಕರ ದೇಹಗಳ ಮೇಲೆ ಕ್ರೂರ, ಅಮಾನವೀಯ ನಡವಳಿಕೆಗಳನ್ನು ತೋರಲಾಗಿದೆ. ಇದನ್ನು ತೀವ್ರವಾಗಿ ಖಂಡಿಸಲಾಗಿದೆ,” ಎಂದು ಭಾರತೀಯ ಸೇನೆಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನವದೆಹಲಿ, ಮೇ 2: ಪಾಕಿಸ್ತಾನಿ ಸೈನಿಕರು ಭಾರತೀಯ ಸೈನಿಕರ ಶಿರಚ್ಛೇದ ಮಾಡಿದ ಒಂದು ದಿನದ ನಂತರ ಎರಡೂ ದೇಶದ ಮಿಲಿಟರಿ ಆಪರೇಷನ್ ಮುಖ್ಯಸ್ಥರ (ಡಿಜಿಎಂಒ) ನಡುವೆ ಕಾವೇರಿದ ಫೋನ್ ಸಂಭಾಷಣೆ ನಡೆದಿದೆ. ಈ ವೇಳೆ ಭಾರತದ ಮಿಲಿಟರಿ ಆಪರೇಷನ್ ಮುಖ್ಯಸ್ಥರು ಪಾಕಿಸ್ತಾನ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಪಾಕಿಸ್ತಾನ ಪಾಶವೀ ಕೃತ್ಯ ನಡೆಸಿದೆ, ಅಮಾನವೀಯ ಮತ್ತು ಅನಾಗರಿಕ ನಡವಳಿಕೆ ತೋರಿದೆ ಎಂದು ಭಾರತದ ಅಧಿಕಾರಿ ಪಾಕಿಸ್ತಾನ ಅಧಿಕಾರಿಯ ಮೇಲೆ ಹರಿಹಾಯ್ದಿದ್ದಾರೆ.[2 ತಲೆಗಳ ಬದಲಿಗೆ ಎಷ್ಟು ತಲೆ ಉರುಳಿಸುತ್ತೀರಿ? ಮೋದಿಗೆ ಕಪಿಲ್ ಪ್ರಶ್ನೆ]
"ನಾಗರೀಕತೆಯ ನಡವಳಿಕೆಗಳನ್ನು ಮೀರಿ ಸೈನಿಕರ ದೇಹಗಳ ಮೇಲೆ ಕ್ರೂರ, ಅಮಾನವೀಯ ನಡವಳಿಕೆಗಳನ್ನು ತೋರಲಾಗಿದೆ. ಇದನ್ನು ತೀವ್ರವಾಗಿ ಖಂಡಿಸಲಾಗಿದೆ," ಎಂದು ಭಾರತೀಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
22 ಸಿಖ್ ಇನ್ಫೆಂಟ್ರಿಯ ನಯೀಬ್ ಸುಬೇದಾರ್ ಪರಮ್ಜೀತ್ ಸಿಂಗ್ ಹಾಗೂ ಬಿಎಸ್ಎಫ್ ನ 200ನೇ ಬೆಟಾಲಿಯನ್ನಿನ ಪ್ರೇಮ್ ಸಾಗರ್ ರನ್ನು ಪಾಕಿಸ್ತಾನದ ಸೈನಿಕರು ಸೋಮವಾರ ಮುಂಜಾನೆ ಶಿರಚ್ಛೇದನ ಮಾಡಿದ್ದರು.[ಸೈನಿಕರ ಶಿರಚ್ಛೇದ: ಮೋದಿ 56 ಇಂಚು ಎದೆ ಪ್ರದರ್ಶಿಸುವುದು ಯಾವಾಗ?]
ಆದರೆ ಪಾಕಿಸ್ತಾನ ಮಾತ್ರ ನಾವು ಈ ರೀತಿಯ ಕೃತ್ಯ ನಡೆಸಿಲ್ಲ ಎಂದು ಪ್ರತಿಪಾದಿಸುತ್ತಲೇ ಬಂದಿದೆ.