ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶನಿವಾರ ಹಣ ವಿನಿಮಯದ ಅವಕಾಶ ಹಿರಿಯರಿಗೆ ಮಾತ್ರ!
ಪ್ರತಿದಿನ ಸರದಿಯ ಸಾಲು ತಗ್ಗುತ್ತಿಲ್ಲ, ಹಿರಿಯರ ಬವಣೆ ಕೂಡ ನಿಲ್ಲುತ್ತಿಲ್ಲ. ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲಬೇಕಾಗಿದ್ದರಿಂದ ಹಿರಿಯರನೇಕರು ಹಣ ವಿನಿಮಯ ಮಾಡಿಕೊಳ್ಳುವುದರಿಂದ ವಂಚಿತರಾಗುತ್ತಿದ್ದರು.
ನವದೆಹಲಿ, ನವೆಂಬರ್ 19 : ಶನಿವಾರ ದೇಶದಾದ್ಯಂತ ಬ್ಯಾಂಕ್ ಗಳಲ್ಲಿ ಹಣ ವಿನಿಮಯದ ಅವಕಾಶ ಹಿರಿಯ ನಾಗರಿಕರಿಗೆ ಮಾತ್ರ ಲಭಿಸಲಿದೆ. ಬ್ಯಾಂಕ್ ಗಳಲ್ಲಿ ಕ್ಯೂನಿಂತು ಹಣ ಪಡೆಯಲು ಹಿರಿಯರು ಕಷ್ಟಪಡುತ್ತಿರುವ ಸಮಯದಲ್ಲಿ ಈ ಕ್ರಮ ಸ್ವಾಗತಾರ್ಹ.
ಹೀಗಾಗಿ ಹಿರಿಯ ನಾಗರಿಕರಲ್ಲದವರು ಹಣ ವಿನಿಮಯಕ್ಕಾಗಿ ಶನಿವಾರ ಬ್ಯಾಂಕ್ ಮುಂದೆ ಕ್ಯೂ ನಿಲ್ಲುವ ಅಗತ್ಯವಿಲ್ಲ. ಭಾನುವಾರ ಮಾತ್ರ ಎಲ್ಲ ಬ್ಯಾಂಕುಗಳಿಗೆ ರಜಾ ಇರಲಿದೆ. [ನೋಟಿಗಾಗಿ ಸಾಲಿನಲ್ಲಿ ನಿಂತಾಗ ಮಾಡಬಹುದಾದ 12 ಕೆಲಸಗಳು]
ಪ್ರತಿದಿನ ಸರದಿಯ ಸಾಲು ತಗ್ಗುತ್ತಿಲ್ಲ, ಹಿರಿಯರ ಬವಣೆ ಕೂಡ ನಿಲ್ಲುತ್ತಿಲ್ಲ. ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲಬೇಕಾಗಿದ್ದರಿಂದ ಹಿರಿಯರನೇಕರು ಹಣ ವಿನಿಮಯ ಮಾಡಿಕೊಳ್ಳುವುದರಿಂದ ವಂಚಿತರಾಗುತ್ತಿದ್ದರು.
ಕೆಲ ದಿನಗಳಿಂದ ಬ್ಯಾಂಕ್ ಮುಂದೆ ಮೊದಲಿನಂಥ ರಶ್ ಕಡಿಮೆಯಾಗಿದ್ದರೂ ಜನರ ಸಂಕಷ್ಟ ಇನ್ನೂ ಕಡಿಮೆಯಾಗಿಲ್ಲ. ಈ ನಿಟ್ಟಿನಲ್ಲಿ ಇಂಡಿಯನ್ ಬ್ಯಾಂಕಿಂಗ್ ಅಸೋಸಿಯೇಷನ್ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಹಿರಿಯರಿಗೆ ವರದಾನವಾಗಲಿದೆ. [ಕಂತೆ ಕಂತೆ ನೋಟಿನ ಮಧ್ಯೆ ಹೃದಯ ಹಿಂಡಿದ ಚಿತ್ರ]
Comments
English summary
On Saturday all banks across the nation will only cater to senior citizens. This means that only senior citizens can exchange old notes for new ones tomorrow. This would be applicable to banks across the country. Banks would function as normal, but only senior citizens can exchange old currency.