ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸೊಳ್ಳೆಗಳೇ ಭಾರತ ಬಿಟ್ಟು ತೊಲಗಿ! ಇದೆಂಥ ವಿಚಿತ್ರ ಕೇಸು ನೋಡಿ!
ನವದೆಹಲಿ, ಸೆಪ್ಟೆಂಬರ್ 23: ವಿಶ್ವದ ಅತ್ಯಂತ ಮಾರಕ ಕೀಟವಾದ ಸೊಳ್ಳೆಗಳನ್ನು ಭಾರತದಿಂದ ಹೊಡೆದೋಡಿಸಬೇಕು, ಅವುಗಳ ನಾಶಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಬೇಕೆಂದು ವ್ಯಕ್ತಿಯೊಬ್ಬ ಹೂಡಿದ್ದ ಮೊಕದ್ದಮೆಯನ್ನು ಸೆ.22 ರಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು!
ಡೆಂಗ್ಯೂ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳಿವು...
ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಇಬ್ಬರು ನ್ಯಾಯಮೂರ್ತಿಗಳ ದ್ವೀಸದಸ್ಯ ಪೀಠ, ದೇವರು ಮಾತ್ರ ಪರಿಹರಿಸಲು ಸಾಧ್ಯವಿರುವ ಸಮಸ್ಯೆಗಳನ್ನು ಪರಿಹರಿಸಲು ನಮ್ಮಿಂದ ಸಾಧ್ಯವಿಲ್ಲ" ಎಂದು ಉತ್ತರಿಸಿದೆ. ಧನೆಶ್ ಲೆಶ್ಧನ್ ಎಂಬುವವರು ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ವಹಿಸಬೇಕೆಂದು ಕೋರಿದ್ದರು!
ವಿಶ್ವ ಆರೋಗ್ಯ ಸಂಸ್ಥೆಯ ಲೆಕ್ಕಾಚಾರದ ಪ್ರಕಾರ ವರ್ಷವೊಂದಕ್ಕೆ 7,25,000 ಜನ ಸೊಳ್ಳೆಯಿಂದ ಬರುವ ರೋಗದಿಂದ ಸಾಯುತ್ತಿದ್ದಾರೆ. ಸೊಳ್ಳೆಗಳ ನಿರ್ಮೂಲನೆಗೆ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳುವುದಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಬೇಕೆಂದು ಅರ್ಜಿದಾರರು ಮನವಿಮಾಡಿಕೊಂಡಿದ್ದರು.
Comments
English summary
In a strange case a petitioner asked the government to be told to frame unified guidlines to abolish mosquitoes from India which cause mosquito-borne disease. "Only God can Do this" SC responses to this unusual petition