ತೆಹೆಲ್ಕಾ: ಸಂಸ್ಥೆ ತೊರೆದ ಹಿರಿಯ ಸಂಪಾದಕಿ
ನವದೆಹಲಿ, ನ.26: ತೆಹಲ್ಕಾ ಸುದ್ದಿಸಂಸ್ಥೆ ಸ್ಥಾಪಕ ಹಾಗೂ ಮುಖ್ಯ ಸಂಪಾದಕ ತರುಣ್ ತೇಜಪಾಲ್ ತನ್ನ ಸಹದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೇಜಪಾಲ್ ಪರ ನಿಂತಿರುವ ಎಂಡಿ ಶೋಮಾ ಅವರ ನಿಲುವನ್ನು ಖಂಡಿಸಿ ತೆಹೆಲ್ಕಾ ಸಂಸ್ಥೆ ಹಿರಿಯ ಉದ್ಯೋಗಿಗಳು ಸಂಸ್ಥೆ ತೊರೆಯುತ್ತಿದ್ದಾರೆ.
ತೇಜಪಾಲ್
ಅವರಿಂದ
ಲೈಂಗಿಕ
ಕಿರುಕುಳ
ಅನುಭವಿಸಿದ
ಯುವತಿ
ತೆಹೆಲ್ಕಾ
ಸಂಸ್ಥೆ
ತೊರೆದ
ನಂತರ
ಸಾಲು
ಸಾಲು
ಹಿರಿಯ
ಪತ್ರಕರ್ತರು
ತೆಹೆಲ್ಕಾ
ಬಿಡುತ್ತಿದ್ದಾರೆ.
ಹಿರಿಯ
ಸಂಪಾದಕಿ
ರಾಣಾ
ಅಯೂಬ್
ಅವರು
ಮಂಗಳವಾರ(ನ.26)
ರಾಜೀನಾಮೆ
ನೀಡಿದ್ದಾರೆ.
ಇವರಿಗಿಂತ
ಮುಂಚೆ
ಸೌಗಾತ್
ದಾಸ್
ಗುಪ್ತಾ,ಅಯೇಷಾ
ಸಿದ್ದಿಕಾ,
ಜಾಯ್
ಮಜೂಂದಾರ್
ಹಾಗೂ
ರೇವತಿ
ಲಾಲ್
ಅವರು
ಸಂಸ್ಥೆ
ತೊರೆದಿದ್ದಾರೆ.
'ಈಗಾಗಲೇ
ಕ್ಷಮೆಯಾಚಿಸಿ,
ಸಂಸ್ಥೆ
ನಿಯಮದಂತೆ
ನಡೆದುಕೊಂಡಿದ್ದೇನೆ.
ಯಾವುದೇ
ರೀತಿಯ
ತನಿಖೆಗೆ
ಸಿದ್ಧ'
ಎಂದಿದ್ದ
ಆರೋಪಿ
ತರುಣ್
ತೇಜಪಾಲ್
ಅವರ
ಅರ್ಜಿ
ನಾಳೆ
ವಿಚಾರಣೆಗೆ
ಬರಲಿದೆ.
ಅಲ್ಲಿ
ತನಕ
ತರುಣ್
ಅವರನ್ನು
ಬಂಧಿಸದಂತೆ
ಕೋರ್ಟ್
ಆದೇಶಿಸಿದೆ.
ಗೋವಾ
ಪೊಲೀಸರು
ಐಪಿಸಿ
ಸೆಕ್ಷನ್
376(ಅತ್ಯಾಚಾರ)
ಹಾಗೂ
344
ಅನ್ವಯ
ಪ್ರಕರಣ
ದಾಖಲಿಸಿಕೊಂಡಿದ್ದು
ತನಿಖೆ
ಮುಂದುವರೆಸಿದ್ದಾರೆ.
In
view
of
the
present
controversy
I
thought
it
necessary
to
discontinue
my
association
with
tehelka.
(cont)
—
Rana
Ayyub
(@RanaAyyub)
November
26,
2013
ಗೋವಾದ ಹೋಟೆಲ್ ವೊಂದರಲ್ಲಿ ತರುಣ್ ಅವರು ಎರಡು ಬಾರಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳಾ ಸಹದ್ಯೋಗಿ ಆರೋಪಿಸಿದ್ದರು. ತರುಣ್ ಅವರ ಮೇಲೆ ಲೈಂಗಿಕ ಆರೋಪ ಕೇಳಿ ಬರುತ್ತಿದ್ದಂತೆ, ನೈತಿಕ ಹೊಣೆ ಹೊತ್ತು ಕ್ಷಮೆಯಾಚಿಸಿ, ತಮ್ಮ ಸಹ ಸಂಪಾದಕ ಸ್ಥಾನದಿಂದ ಆರು ತಿಂಗಳ ಕಾಲ ದೂರಸರಿದಿದ್ದರು.