Naba Kishore Das : ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
ಪೊಲೀಸ್ ಅಧಿಕಾರಿಯೊಬ್ಬರಿಂದ ಗುಂಡಿನ ದಾಳಿಗೆ ತುತ್ತಾಗಿದ್ದಒಡಿಶಾ ರಾಜ್ಯದ ಆರೋಗ್ಯ ಸಚಿವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ನವದೆಹಲಿ, ಜನವರಿ 29: ಪೊಲೀಸ್ ಅಧಿಕಾರಿಯೊಬ್ಬರಿಂದ ಗುಂಡಿನ ದಾಳಿಗೆ ತುತ್ತಾಗಿದ್ದ ಒಡಿಶಾ ರಾಜ್ಯದ ಆರೋಗ್ಯ ಸಚಿವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಒಡಿಶಾದ ಆರೋಗ್ಯ ಸಚಿವ ನಬಾ ಕಿಶೋರ್ ದಾಸ್ ಅವರ ಮೇಲೆ ಭಾನುವಾರ ಗುಂಡಿನ ದಾಳಿ ನಡೆದಿದೆ. ಬ್ರಜರಾಜ ನಗರದ ಗಾಂಧಿ ಚೌಕ್ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಝಾರ್ಸುಗುಡ ಜಿಲ್ಲೆ ವ್ಯಾಪ್ತಿಯ ಬ್ರಜರಾಜನಗರ ಬಳಿ ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ ನಡೆಸಿದ್ದರ ಬಗ್ಗೆ ಪಿಟಿಐ ವರದಿ ಮಾಡಿತ್ತು.
ತೀವ್ರ ರಕ್ತಸ್ರಾವವಾಗಿದ್ದ ಆರೋಗ್ಯ ಸಚಿವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಸಚಿವ ನಬಾ ಕಿಶೋರ್ ದಾಸ್ ಕೊನೆಯುಸಿರೆಳೆದರು.
ಘಟನೆ
ಹಿನ್ನೆಲೆ
ಒಡಿಶಾ
ರಾಜ್ಯದ
ಆರೋಗ್ಯ
ಸಚಿವರಾದ
ನಬಾ
ಕಿಸೋರ್
ದಾಸ್
ಅವರು
ಭಾನುವಾರ
ಕಾರ್ಯಕ್ರಮವೊಂದಕ್ಕೆ
ತೆರಳುತ್ತಿದ್ದರು.
ಈ
ವೇಳೆ
ಮಧ್ಯಾಹ್ನ
ಸುಮಾರು
1ಗಂಟೆಗೆ
ಜಾರ್ಸುಗುಡ
ಜಿಲ್ಲೆಯ
ಬ್ರಜರಾಜನಗರ
ಬಳಿಯ
ಗಾಂಧಿ
ಚೌಕ್ನಲ್ಲಿ
ಸಹಾಯಕ
ಸಬ್
ಇನ್ಸ್ಪೆಕ್ಟರ್
ಸಚಿವರ
ಮೇಲೆ
ಗುಂಡಿನ
ದಾಳಿ
ನಡೆಸಿದರು.
ಘಟನೆಯಲ್ಲಿ ಸಚಿವರ ಎದೆಗೆ ಗುಂಡು ತಗುಲಿದ್ದರಿಂದ ಅವರಿಗೆ ತೀವ್ರವಾಗಿ ರಕ್ತಸ್ರಾವವಾಯಿತು. ಕೂಡಲೇ ಅವರನ್ನು ಹತ್ತಿರದಲ್ಲಿದ್ದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದರು.
ಗುಂಡಿನ ದಾಳಿಯಲ್ಲಿ ಸಚಿವರ ಎದೆಗೆ ತೀವ್ರ ಗಾಯಗಳಾಗಿದ್ದವು. ಗಾಯ ಸರಿಪಡಿಸಲಾಗಲಿಲ್ಲ. ಹೃದಯ ಬಡಿತ ಸುಧಾರಿಸಲು ವೈದ್ಯರು ಸಾಕಷ್ಟು ಪ್ರಯತನ್ ಪಟ್ಟರು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆಸಿತಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ವೈದ್ಯರ ಸಕಲ ಪ್ರಯತ್ನಗಳೆಲ್ಲವು ವಿಫಲವಾದವು. ಸಚಿವರನ್ನು ಬದುಕುಳಿಸಲಾಗಲಿಲ್ಲ ಎಂದು ಅಪೋಲೋ ಆಸ್ಪತ್ರೆ ವೈದ್ಯರ ಹೇಳಿಕೆಯಲ್ಲಿ ತಿಳಿಸಲಾಗಿದೆ.