ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಚೆ ಇಲಾಖೆಯಿಂದ ನಿಮ್ಮ ಕೈಗೆ ಗಂಗಾಜಲ ವಿತರಣೆ

By Mahesh
|
Google Oneindia Kannada News

ನವದೆಹಲಿ, ಜುಲೈ 11: ಹಿಂದೂಗಳ ಪಾಲಿನ ಪವಿತ್ರ ಗಂಗಾಜಲವನ್ನು ದೇಶದ ಎಲ್ಲಾ ಭಾಗದ ಜನತೆಗೂ ಸುಲಭವಾಗಿ ದೊರಕುವಂತೆ ಮಾಡಲು ಕೇಂದ್ರ ಸರ್ಕಾರ, ಗಂಗಾಜಲ ಯೋಜನೆ ಆರಂಭಿಸಿದೆ.

ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು 'ಗಂಗಾಜಲ ಯೋಜನೆ'ಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸಚಿವ ಮನೋಜ್ ಸಿನ್ಹಾ ಉಪಸ್ಥಿತರಿದ್ದರು.[20 ಸಾವಿರ ಕೋಟಿ ರು. ಮೌಲ್ಯದ ನಮಾಮಿ ಗಂಗಾ ಯೋಜನೆಗೆ ಚಾಲನೆ]

Now, Indian Post To Deliver 'Gangajal'

ಭಾನುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಈ ಯೋಜನೆಯನ್ನು ಲೋಕಾರ್ಪಣೆ ಮಾಡೀ ಮಾತನಾಡಿದ ರವಿಶಂಕರ್ ಪ್ರಸಾದ್, 'ಪವಿತ್ರ ಸ್ಥಳಗಳಾದ ಗಂಗೋತ್ರಿ ಹಾಗೂ ಋಷಿಕೇಷದಲ್ಲಿ ದೊರೆಯುವ ಜಲವನ್ನು ಸೂಕ್ತ ರೀತಿಯಲ್ಲಿ ಪ್ಯಾಕ್ ಮಾಡಿ ವಿತರಿಸಲಾಗುವುದು, ಅತ್ಯಲ್ಪ ಬೆಲೆಗೆ ಗಂಗಾಜಲ ದೊರೆಯಲಿದೆ' ಎಂದರು.[ಮಾತಾ 'ಅಮ್ಮ' ಕಡೆಯಿಂದ ನೂರು ಕೋಟಿ!]

ಖಾಸಗಿ ಕಂಪನಿಗಳು ಇ ಮಾರುಕಟ್ಟೆಯಲ್ಲಿ ಗಂಗಾಜಲವನ್ನು ಮಾರಾಟ ಮಾಡುತ್ತಿರುವುದನ್ನು ಗಮನಿಸಿದ ಸರ್ಕಾರ ಈ ರೀತಿ ಮಾರುಕಟ್ಟೆ ತಂತ್ರ ಅನುಸರಿಸುತ್ತಿದೆ. ಅಂಚೆ ಇಲಾಖೆ ಸಹಯೋಗದೊಂದಿಗೆ ಗಂಗಾಜಲ ನೀಡಲಾಗುತ್ತಿದೆ.[ವಿಡಿಯೋ: ಗಂಗಾ ಶುದ್ಧೀಕರಣ ಯೋಜನೆಯ ಆಶಯ ಗೀತೆ]

ಗೋಮುಖದಲ್ಲಿ ಸಂಗ್ರಹಿಸಿರುವ ಗಂಗಾಜಲಕ್ಕೆ ಪ್ರತಿ ಲೀಟರ್​ಗೆ 299 ರೂ. ನಿಗದಿ ಮಾಡಿ ಮಾರಾಟಮಾಡಲಾಗುತ್ತಿದೆ. ಅಂಚೆ ಇಲಾಖೆಯಿಂದ ರವಾನೆಯಾಗುವ ಗಂಗಾಜಲದ ಬೆಲೆ ನಿಗದಿ ಮಾಡಿಲ್ಲ.

English summary
Now people can get 'Gangajal' -- holy water from the Ganga -- at all post offices across the country and if they want, they can even get it delivered to their doorsteps said Union Minister Ravi Shankar Prasad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X