ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದಾವೂದ್, ಹಫೀಜ್ ರನ್ನು ಭಾರತಕ್ಕೆ ಕರೆ ತರುವ ಯತ್ನ ನಡೆದಿಲ್ಲ!
ಉಗ್ರ ಹಫೀಜ್ ಸಯೀದ್, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಇಬ್ಬರೂ ಪಾಕಿಸ್ತಾನದಲ್ಲಿ ನೆಲೆಸಿರುವುದು ಗೊತ್ತಿದ್ದರೂ,ಅವರನ್ನು ವಿಚಾರಣೆಗಾಗಿ ಭಾರತಕ್ಕೆ ಕರೆ ತರುವ ಪ್ರಯತ್ನ ನಡೆದಿಲ್ಲ ಎಂದು ವಿದೇಶಾಂಗ ಸಚಿವಾಲಯ ಒಪ್ಪಿಕೊಂಡಿದೆ.
ನವದೆಹಲಿ, ಮೇ 15: ಉಗ್ರ ಹಫೀಜ್ ಸಯೀದ್, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಇಬ್ಬರೂ ಪಾಕಿಸ್ತಾನದಲ್ಲಿ ನೆಲೆಸಿರುವುದು ಗೊತ್ತಿದ್ದರೂ,ಅವರನ್ನು ವಿಚಾರಣೆಗಾಗಿ ಭಾರತಕ್ಕೆ ಕರೆ ತರುವ ಪ್ರಯತ್ನ ನಡೆದಿಲ್ಲ ಎಂದು ವಿದೇಶಾಂಗ ಸಚಿವಾಲಯ ಒಪ್ಪಿಕೊಂಡಿದೆ.
ಈ ಕುರಿತಂತೆ ವಿದೇಶಾಂಗ ಸಚಿವಾಲಯಕ್ಕೆ ಯಾವುದೇ ಮನವಿ ಇಲ್ಲಿ ತನಕ ಬಂದಿಲ್ಲ ಎಂದು ಆರ್ ಟಿಐ ಅರ್ಜಿ ಮೂಲಕ ತಿಳಿದು ಬಂದಿದೆ.
ಉಗ್ರ ಹಫೀಜ್ ಸಯೀದ್ ಹಾಗೂ ದಾವೂದ್ ಇಬ್ರಾಹಿಂರನ್ನು ಭಾರತಕ್ಕೆ ಕರೆ ತಂದು ವಿಚಾರಣೆ ನಡೆಸುವುದಾಗಿ ಈ ಹಿಂದೆ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ್ದರು. ಈ ಕುರಿತಂತೆ ಸರ್ಕಾರ ಯಾವ ಕ್ರಮಕೈಗೊಂಡಿದೆ ಎಂದು ಪ್ರಶ್ನಿಸಿದ್ದ ಆರ್ ಟಿಐ ಅರ್ಜಿಗೆ ವಿದೇಶಾಂಗ ಸಚಿವಾಲಯ ಉತ್ತರಿಸಿದೆ.
ಮೋಸ್ಟ್ ವಾಂಟೆಂಡ್ ಕ್ರಿಮಿನಲ್ ಗಳನ್ನು ಗಡಿಪಾರು ಮಾಡುವ, ವಿಚಾರಣೆಗಾಗಿ ಇಲ್ಲಿಗೆ ಕರೆತರುವ ಯಾವುದೇ ರೀತಿಯ ಮನವಿಯನ್ನು ತನಿಖಾ ಸಂಸ್ಥೆಗಳು ಮಾಡಿಲ್ಲ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.
Comments
hafiz saeed dawood ibrahim terrorism pakistan india ಹಫೀಜ್ ಸಯೀದ್ ದಾವೂದ್ ಇಬ್ರಾಹಿಂ ಭಯೋತ್ಪಾದನೆ ಪಾಕಿಸ್ತಾನ ಭಾರತ
English summary
There has been no extradition request received by the Ministry of External Affairs where Dawood Ibrahim or Hafiz Saeed are concerned. The investigation agencies have not put forth any such request, the MEA has said while replying to an RTI query.
Story first published: Monday, May 15, 2017, 11:14 [IST]