ಅಟಾರಿ-ವಾಘಾ ಗಡಿಯಲ್ಲಿ ಸಿಹಿ ಹಂಚಿಕೊಳ್ಳದ ಇಂಡೋ-ಪಾಕ್ ಯೋಧರು!
ನವದೆಹಲಿ, ಜನವರಿ.26: ಭಾರತ-ಪಾಕಿಸ್ತಾನ ಗಡಿಯಲ್ಲಿ 71ನೇ ಗಣರಾಜ್ಯೋತ್ಸವ ದಿನ ಪ್ರತಿವರ್ಷಕ್ಕಿಂತ ಈ ವರ್ಷ ವಿಭಿನ್ನವಾಗಿತ್ತು. ಏಕೆಂದರೆ ಅಟಾರಿ ಹಾಗೂ ವಾಘಾ ಗಡಿಯಲ್ಲಿ ಇಂಡೋ-ಪಾಕಿಸ್ತಾನ ಯೋಧರು ಈ ವರ್ಷ ಸಿಹಿ ಹಂಚಿಕೊಳ್ಳಲಿಲ್ಲ.
ವಾಡಿಕೆಯಂತೆ ಸಿಹಿ ಹಂಚಿಕೊಳ್ಳುವ ಮೂಲಕ ಗಣರಾಜ್ಯೋತ್ಸವ ಸಂಭ್ರಮವನ್ನು ಆಚರಿಸಲು ಪಾಕಿಸ್ತಾನ್ ಯೋಧರಿಗೆ ಭಾರತವು ಸಂದೇಶ ರವಾನಿಸಿತ್ತು. ಆದರೆ, ಪಾಕಿಸ್ತಾನವು ಭಾರತದ ಸಂದೇಶವನ್ನು ತಿರಸ್ಕರಿಸಿದ್ದಾರೆ ಎಂದು ಬಿಎಸ್ಎಫ್ ಯೋಧರೊಬ್ಬರು ತಿಳಿಸಿದ್ದಾರೆ.
ಆರ್ಟಿಕಲ್ 370 ಬೆಂಬಲಿಸಿದರೆ ಕೇಸು ಕೈಬಿಡುವುದಾಗಿ ಆಮಿಷ: ಝಕೀರ್ ನಾಯ್ಕ್
ಪಾಕಿಸ್ತಾನದ ನಡೆಯಿಂದ ಈ ಬಾರಿ ಅಟಾರಿ ಹಾಗೂ ವಾಘಾ ಗಡಿಯಲ್ಲಿ ಯೋಧರು ಸಿಹಿ ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಬಿಎಸ್ಎಫ್ ಯೋಧರು ಮಾಹಿತಿ ನೀಡಿದ್ದಾರೆ. ಜಮ್ಮು-ಕಾಶ್ಮೀರಕ್ಕೆ 370ರ ಅಡಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಪಾಕಿಸ್ತಾನವು ಈ ನಡೆಯನ್ನು ಅನುಸರಿಸುತ್ತಿದೆ.
ಸಿಹಿ ಹಂಚಿಕೊಳ್ಳಲು ಪಾಕ್ ಹಿಂದೇಟು:
ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಪಾಕಿಸ್ತಾನ ಸೇನೆಯು ಭಾರತದ ಯೋಧರ ಜೊತೆ ಸಿಹಿ ಹಂಚಿಕೊಳ್ಳುವುದಕ್ಕೆ ನಿರಾಕರಿಸಿದೆ ಎಂದು ತಿಳಿದು ಬಂದಿದೆ. ಈ ಮೊದಲು ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ದೀಪಾವಳಿ, ಈದ್ ಮಿಲಾದ್ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಸಹೋರತ್ವದ ಸಂಕೇತವಾಗಿ ಅಟಾರಿ ಹಾಗೂ ವಾಘಾ ಗಡಿಯಲ್ಲಿ ಭಾರತೀಯ ಹಾಗೂ ಪಾಕಿಸ್ತಾನದ ಯೋಧರು ಸಿಹಿಯನ್ನು ಹಂಚಿಕೊಳ್ಳುತ್ತಿದ್ದರು.