ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಗುಣಪಡಿಸಲು ನಿತ್ಯಾನಂದ ಸರಳ ಸೂತ್ರ!

|
Google Oneindia Kannada News

ಬೆಂಗಳೂರು, ಫೆಬ್ರವರಿ 06: ದೇಶ ಬಿಟ್ಟು ಪರಾರಿಯಾಗಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ವಿಶ್ವವನ್ನೇ ಆತಂಕಕ್ಕೆ ತಳ್ಳಿರುವ ಕೊರೊನಾ ವೈರಸ್ ಅನ್ನು ಮಣಿಸಲು ಸರಳ ಸೂತ್ರವೊಂದನ್ನು ಕಂಡುಹಿಡಿದಿದ್ದಾರೆ.

ಪಠಣ ಮಾಡಿ ಅದರಿಂದ ಧನಾತ್ಮಕ ಶಕ್ತಿ ಹುಟ್ಟುವಂತೆ ಮಾಡಿ ಆ ಮೂಲಕ ಕೊರೊನಾ ವೈರಸ್ ಅನ್ನು ವಿಶ್ವದಿಂದಲೇ ಹೊಡೆದೋಡಿಸುವುದಾಗಿ ನಿತ್ಯಾನಂದ ಹೇಳಿದ್ದಾರೆ.

ಸ್ವಯಂಘೋಷಿತ ದೇವಮಾನವ ನಿತ್ಯಾನಂದ ವಿದೇಶಕ್ಕೆ ಪರಾರಿಸ್ವಯಂಘೋಷಿತ ದೇವಮಾನವ ನಿತ್ಯಾನಂದ ವಿದೇಶಕ್ಕೆ ಪರಾರಿ

ನಿತ್ಯಾನಂದ ಅವರ ಅಧಿಕೃತ ಫೇಸ್‌ಬುಕ್ ಖಾತೆ 'ದಿ ಅವತಾರ್ ಕ್ಲಿಕ್ಸ್‌' ನಲ್ಲಿ ಈ ಬಗ್ಗೆ ವಿಡಿಯೋ ಪೋಸ್ಟ್ ಮಾಡಿರುವ ನಿತ್ಯಾನಂದ, 'ಓಂ ನಿತ್ಯಾನಂದ ಪರಮ ಶಿವೋಹಂ' ಎಂದು ಸತತ 48 ಗಂಟೆ ಪಠಣ ಮಾಡಿ ಧನಾತ್ಮಕ ಆಧ್ಯಾತ್ಮಿಕ ಶಕ್ತಿ ಉತ್ಪತ್ತಿಯಾಗುವಂತೆ ಮಾಡಿ ಅದರ ಮೂಲಕ ಕೊರೊನಾ ವೈರಸ್ ಅನ್ನು ಗುಣಪಡಿಸಬಹುದು ಎಂದು ವಿಡಿಯೋ ದಲ್ಲಿ ಹೇಳಿದ್ದಾರೆ.

Nithyananda Chalenge He Will Cure Coronavirus

ಫೆಬ್ರವರಿ 7 ಮತ್ತು ಅಂತರರಾಷ್ಟ್ರೀಯ ಸಮಯ 9 ಪಿ.ಎಂ ಗೆ ಪ್ರಾರಂಭವಾಗುವ ಪಠಣ ಫೆಬ್ರವರಿ 9 ರ ವರೆಗೆ ನಡೆಯಲಿದೆ. ಇದರಲ್ಲಿ ಸಕಲರೂ ಭಾಗವಹಿಸಿ ಎಂದು ನಿತ್ಯಾನಂದ ಕರೆ ನೀಡಿದ್ದಾರೆ.

ಅಪಹರಣ: ಸ್ವಾಮಿ ನಿತ್ಯಾನಂದ ವಿರುದ್ಧ ಎಫ್‌ಐಆರ್, ಶಿಷ್ಯೆಯರ ಬಂಧನಅಪಹರಣ: ಸ್ವಾಮಿ ನಿತ್ಯಾನಂದ ವಿರುದ್ಧ ಎಫ್‌ಐಆರ್, ಶಿಷ್ಯೆಯರ ಬಂಧನ

ನಿತ್ಯಾನಂದ ಗೆ ನೀಡಿದ್ದ ಜಾಮೀನನ್ನು ರದ್ದು ಮಾಡಲಾಗಿದ್ದು, ಅವರ ವಿರುದ್ಧ ಬ್ಲೂ ಕಾರ್ನರ್ ನೊಟೀಸ್ ಹೊರಡಿಸಲಾಗಿದೆ. ಪೊಲೀಸರು ನಿತ್ಯಾನಂದ ನನ್ನು ಬಂಧಿಸಲು ಹಲವು ಯತ್ನಗಳನ್ನು ಮಾಡಿದ್ದಾರೆ.

English summary
Nithyananda challenged he will cure coronavirus. He posted video and said Coronavirus can cure by chanting 'Om Nityananda paramashivoham'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X