20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್: ಕೃಷಿ ಕ್ಷೇತ್ರಕ್ಕೆ ಮಹತ್ವದ ಘೋಷಣೆ.!
ನವದೆಹಲಿ, ಮೇ 13: ಕೋವಿಡ್-19 ವಿರುದ್ಧ ಹೋರಾಟ ನಡೆಸಲು 'ಆತ್ಮ ನಿರ್ಭರ್ ಭಾರತ' ಅಭಿಯಾನಕ್ಕೆ ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಭಾರತೀಯರಿಗೆ 20 ಲಕ್ಷ ಕೋಟಿ ರೂಪಾಯಿಯ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದರು.
ಬರೋಬ್ಬರಿ 20 ಲಕ್ಷ ಕೋಟಿ ರೂಪಾಯಿಯ ಆರ್ಥಿಕ ಪ್ಯಾಕೇಜ್ ನ ಮೊದಲ ಭಾಗದಲ್ಲಿ ಎಂ.ಎಸ್.ಎಂ.ಇ, ಇ.ಪಿ.ಎಫ್, ಎನ್.ಬಿ.ಎಫ್.ಸಿ, ಎಚ್.ಎಫ್.ಸಿ, ಎಂ.ಎಫ್.ಐ, ಡಿಸ್ಕಾಂಗಳಿಗೆ ವಿಶೇಷ ಕೊಡುಗೆ ಗಳನ್ನು ಮೇ 13 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅನೌನ್ಸ್ ಮಾಡಿದ್ದರು.
20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್: ದುಡಿಯುವ ಕೈಗಳಿಗೆ ಸಿಕ್ಕಿತೇ ಲಾಭ.?
ವಲಸೆ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಸಣ್ಣ ರೈತರ ಮೇಲೆ ಕೇಂದ್ರೀಕೃತವಾಗಿದ್ದ 20 ಲಕ್ಷ ಕೋಟಿ ರೂಪಾಯಿಯ ಆರ್ಥಿಕ ಪ್ಯಾಕೇಜ್ ನ ಎರಡನೇ ಕಂತಿನ ವಿವರಗಳನ್ನು ಮೇ 14 ರಂದು ನಿರ್ಮಲಾ ಸೀತಾರಾಮನ್ ನೀಡಿದ್ದರು.
20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್: ಯಾರಿಗೆ ಸಿಕ್ತು ಲಾಭದ ಪಾಲು.?
ಆರ್ಥಿಕ ಪ್ಯಾಕೇಜ್ ನ ಮೂರನೇ ಭಾಗದ ವಿವರಗಳನ್ನು ಇಂದು ಸಂಜೆ 4 ಗಂಟೆಗೆ ನಡೆದ ಸುದ್ಧಿಗೋಷ್ಠಿಯಲ್ಲಿ ನಿರ್ಮಲಾ ಸೀತಾರಾಮನ್ ನೀಡಿದರು. ಆರ್ಥಿಕ ಪ್ಯಾಕೇಜ್ ನ ಮೂರನೇ ಕಂತಿನಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ವಿಷಯಗಳಿಗೆ ಆದ್ಯತೆ ನೀಡಲಾಗಿದ್ದು, 11 ಮಹತ್ವದ ಘೋಷಣೆಗಳನ್ನು ಒಳಗೊಂಡಿದೆ.
1 ಲಕ್ಷ ಕೋಟಿ ರೂಪಾಯಿ ನೆರವು
*
ಕೃಷಿ
ಮೂಲ
ಸೌಕರ್ಯಕ್ಕೆ
(ಫಾರ್ಮ್
ಗೇಟ್
ಮತ್ತು
ಅಗ್ರಿಗೇಷನ್
ಪಾಯಿಂಟ್)
1
ಲಕ್ಷ
ಕೋಟಿ
ರೂಪಾಯಿ
ನೆರವು.
*
ಕೃಷಿ
ಅಭಿವೃದ್ಧಿಗೆ
ಆದ್ಯತೆ.
*
ಮೈಕ್ರೋ
ಫುಡ್
ಎಂಟರ್
ಪ್ರೈಸಸ್
ಗಳ
ರಚನೆಗಾಗಿ
10
ಸಾವಿರ
ಕೋಟಿ
ರೂಪಾಯಿ
ಮೀಸಲು.
*
ಪ್ರಧಾನಿಯ
'ವೋಕಲ್
ಫಾರ್
ಲೋಕಲ್'
ದೃಷ್ಟಿಕೋನ
ಜಾಗತಿಕ
ಮಟ್ಟಕ್ಕೆ
ತಲುಪಲು
ಉತ್ತೇಜನ.
*
ಆಯುರ್ವೇದ
ಉತ್ಪನ್ನಗಳ
ಸಾಗಾಟಕ್ಕೂ
ಹಣ
ಮೀಸಲು.
*
ಎಲ್ಲಾ
ದೇಶೀಯ
ಆಹಾರ
ಉತ್ಪನ್ನಗಳ
ಮಾರುಕಟ್ಟೆ
ವಿಸ್ತರಣೆಗೆ
ಒತ್ತು.
ರಾಗಿ ಬೆಳೆಗೆ ಜಾಗತಿಕ ಬ್ರ್ಯಾಂಡಿಂಗ್
*
ಸಾವಯವ
ಕೃಷಿ,
ಹರ್ಬಲ್
ಕೃಷಿಕರಿಗೆ
ನೆರವು.
*
ಸಾವಯವ
ಪದ್ಧತಿಯಲ್ಲಿ
ರಾಗಿ
ಬೆಳೆಯಲು
ಪ್ರೋತ್ಸಾಹ.
ಕರ್ನಾಟಕದ
ರಾಗಿ
ಬೆಳೆಗೆ
ಜಾಗತಿಕ
ಬ್ರ್ಯಾಂಡಿಂಗ್.
*
ಕೃಷಿ
ಉತ್ಪನ್ನಗಳ
ಬ್ರ್ಯಾಂಡಿಂಗ್
ಮತ್ತು
ಮಾರ್ಕೆಟಿಂಗ್
ಗೆ
ಆದ್ಯತೆ.
*
ಬ್ರ್ಯಾಂಡಿಂಗ್
ಮೂಲಕ
ಆಹಾರ
ಉತ್ಪನ್ನಗಳ
ಮಾರಾಟಕ್ಕೆ
ಹೆಚ್ಚಿನ
ಒತ್ತು.
20 ಸಾವಿರ ಕೋಟಿ ನೆರವು
*
ಸಾಗರ,
ಒಳನಾಡು
ಮೀನುಗಾರಿಕೆ
ಮತ್ತು
ಜಲಚರ
ಸಾಕಣೆ
ಚಟುವಟಿಕೆಗಳಿಗೆ
11
ಸಾವಿರ
ಕೋಟಿ
ರೂಪಾಯಿ.
*
ಮೀನು
ಸಾಕಣೆ,
ಕೋಲ್ಡ್
ಚೈನ್,
ಮಾರುಕಟ್ಟೆ
ಇತ್ಯಾದಿಗಳ
ಮೂಲ
ಸೌಕರ್ಯಕ್ಕಾಗಿ
9
ಸಾವಿರ
ಕೋಟಿ
ರೂಪಾಯಿ.
*
ಪ್ರಧಾನ
ಮಂತ್ರಿ
ಮತ್ಸ್ಯ
ಸಂಪದ
ಯೋಜನೆ
ಅಡಿಯಲ್ಲಿ
ಒಟ್ಟು
20
ಸಾವಿರ
ಕೋಟಿ
ರೂಪಾಯಿ
ನೆರವು.
*
ಮೀನುಗಾರಿಕೆ
ಉದ್ಯಮದಲ್ಲಿ
55
ಲಕ್ಷ
ಉದ್ಯೋಗ
ಸೃಷ್ಟಿ.
*
ಮೀನುಗಾರರಿಗೆ
ಹೊಸ
ಬೋಟ್,
ಉಪಕರಣ
ಖರೀದಿಗೆ
ಸಾಲ.
ಪಶುಗಳಿಗೆ ಲಸಿಕೆ
*
ಡೈರಿ
ಉತ್ಪನ್ನಗಳ
ಪ್ರೋತ್ಸಾಹಕ್ಕೆ
15
ಸಾವಿರ
ಕೋಟಿ
ರೂಪಾಯಿ.
*
ಎಲ್ಲಾ
ಪಶುಗಳಿಗೆ
100%
ರೋಗ
ನಿರೋಧಕ
ಲಸಿಕೆ.
ಈಗಾಗಲೇ
1.5
ಕೋಟಿ
ಜಾನುವಾರುಗಳಿಗೆ
ಲಸಿಕೆ
ಹಾಕಲಾಗಿದ್ದು,
53
ಕೋಟಿ
ಜಾನುವಾರುಗಳಿಗೆ
ಲಸಿಕೆ
ಹಾಕಲಾಗುವುದು.
ಲಸಿಕೆಗಾಗಿ
13,343
ಕೋಟಿ
ಮೀಸಲು.
*
ಪಶುಸಂಗೋಪನೆಯ
ಮೂಲ
ಸೌಕರ್ಯ
ಅಭಿವೃದ್ಧಿಗೆ
ಒತ್ತು.
*
ಮಿಲ್ಕ್
ಪೌಡರ್,
ಚೀಸ್,
ಕ್ರೀಮ್
ಉತ್ಪನ್ನಗಳ
ಗುಣಮಟ್ಟಕ್ಕೆ
ಆದ್ಯತೆ.
ಔಷಧಿ ಸಸ್ಯಗಳ ಕೃಷಿ ಉತ್ತೇಜನಕ್ಕೆ 5 ಸಾವಿರ ಕೋಟಿ
*
ಔಷಧಿ
ಸಸ್ಯಗಳ
ಕೃಷಿ
ಉತ್ತೇಜನಕ್ಕೆ
4
ಸಾವಿರ
ಕೋಟಿ
ರೂಪಾಯಿ.
*
ಗಿಡಮೂಲಿಕೆ
ನೆಡಲು
ನೆರವು.
*
ಗಂಗಾ
ನದಿಯ
ದಡದಲ್ಲಿ
ಔಷಧೀಯ
ಸಸ್ಯಗಳ
ಕಾರಿಡಾರ್
ನಿರ್ಮಾಣ.
*
ಜೇನು
ಸಾಕಣೆಗಾಗಿ
500
ಕೋಟಿ
ರೂಪಾಯಿ
ಮೀಸಲು.
*
2
ಲಕ್ಷ
ಜೇನು
ಕೃಷಿಕರಿಗೆ
ಅನುಕೂಲ
ಮತ್ತು
ಗ್ರಾಮೀಣ
ಮಹಿಳೆಯರಿಗೆ
ಉದ್ಯೋಗ
ಸೃಷ್ಟಿ.
*
ಜೇನಿನಿಂದ
ಉತ್ಪಾದನೆಯಾಗುವ
ಮೇಣ
ರಫ್ತು
ಕಡಿತಕ್ಕೆ
ಯತ್ನ
ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ
*
ಟೊಮ್ಯಾಟೊ,
ಈರುಳ್ಳಿ,
ಆಲೂಗೆಡ್ಡೆ
ಬೆಳೆ
ಸಾಗಣೆ
ಮತ್ತು
ಸಂಸ್ಕರಣೆಗೆ
500
ಕೋಟಿ
ರೂಪಾಯಿ
ಮತ್ತು
ಸಾಗಾಟಕ್ಕೆ
50%
ಸಬ್ಸಿಡಿ.
*
ಅಗತ್ಯ
ವಸ್ತುಗಳ
ಕಾಯ್ದೆಗೆ
ತಿದ್ದುಪಡಿ
ತರಲು
ನಿರ್ಧಾರ.
*
ಎಣ್ಣೆ,
ಬೇಳೆ,
ಆಲೂಗೆಡ್ಡೆ,
ಈರುಳ್ಳಿ
ಸಂಗ್ರಹ
ಮೇಲಿನ
ನಿರ್ಬಂಧ
ರದ್ದು.
*
ರಾಷ್ಟ್ರೀಯ
ವಿಪತ್ತು,
ಬೆಲೆ
ಏರಿಕೆ,
ದರ
ಕುಸಿತ,
ಬರಗಾಲ
ಮುಂತಾದ
ಅಸಾಧಾರಣ
ಸಂದರ್ಭಗಳಲ್ಲಿ
ಶೇಖರಣಾ
ಮಿತಿ
ವಿಧಿಸಲಾಗುವುದು.
ಕೃಷಿ ಮಾರುಕಟ್ಟೆ ಸುಧಾರಣೆ
*
ಕೃಷಿ
ಮಾರುಕಟ್ಟೆಗಳಲ್ಲಿ
ಸುಧಾರಣೆ
ತರಲು
ಕೇಂದ್ರ
ಸರ್ಕಾರ
ನಿರ್ಧಾರ.
*
ರೈತರಿಗೆ
ತಮಗಿಷ್ಟವಾದ
ಮಾರುಕಟ್ಟೆಯಲ್ಲಿ
ತಮ್ಮ
ಉತ್ಪನ್ನ
ಮಾರಾಟಕ್ಕೆ
ಅವಕಾಶ.
*
ಇದರಿಂದ
ರೈತರಿಗೆ
ಉತ್ತಮ
ಆದಾಯ
ಸಿಗಲಿದೆ.
*
ಕೃಷಿ
ಉತ್ಪನ್ನಗಳ
ಅಂತಾರಾಜ್ಯ
ಮುಕ್ತ
ಮಾರಾಟಕ್ಕೆ
ಕೇಂದ್ರ
ಸರ್ಕಾರದಿಂದ
ಅವಕಾಶ.
*
ಇ-ಟ್ರೇಡಿಂಗ್
ಮೂಲಕ
ಕೃಷಿ
ಉತ್ಪನ್ನಗಳ
ಮಾರಾಟ
ಮಾಡಬಹುದು.
*
ರೈತರು
ಸಗಟು
ಬೆಲೆಗೆ
ಮಾರಾಟ
ಮಾಡಲು
ಕಾನೂನಿನ
ಸ್ವರೂಪ
ನೀಡಲಾಗುವುದು.