ಈ 2 ಸಾವು ನಿಮ್ಮ ಕಣ್ಣಲ್ಲಿ ನೀರು ತರಿಸದೆ ಇರದು
ನವದೆಹಲಿ, ಮೇ. 04: ಈ ಎರಡು ಸಾವುಗಳು ಕಣ್ಣಲ್ಲಿ ನೀರು ತರಿಸದೇ ಇರಲಾರವು. ಬಾಲ ವೃದ್ಧಾಪ್ಯದಿಂದ ಬಳಲುತ್ತಿದ್ದ ಮುಂಬಯಿ ಕರೀಂ ನಗರದ ನಿಹಾಲ್ ಬಿತ್ಲಾ(15), ಕಿಡ್ನಿ ಸಂಬಂಧಿ ಮಾರಾಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದ ಹರ್ಯಾಣ ಮೂಲದ ಗಿರೀಶ್ ಶರ್ಮಾ ಪ್ರಪಂಚದ ತಮ್ಮ ತಿರುಗಾಟವನ್ನು ಮುಗಿಸಿದ್ದಾರೆ.
ಅಮಿತಾಬ್ ಬಚ್ಚನ್ ಅವರ "ಪಾ" ಚಿತ್ರ ನೋಡಿದವರಿಗೆ ಪ್ರೊಗೆರಿಯಾ (ಬಾಲ ವೃದ್ಧಾಪ್ಯ) ಕಾಯಿಲೆಯ ಬಗ್ಗೆ ಗೊತ್ತಿರುತ್ತದೆ. ಸೋಮವಾರವೇ ನಿಹಾಲ್ ಬಿತ್ಲಾ(15) ಸಾವನ್ನಪ್ಪಿದ್ದಾರೆ.[ಕ್ಯಾನ್ಸರ್ ವಿರುದ್ಧ ಗೆದ್ದು ಬರಲಿ ಬೆಂಗಳೂರಿನ ವಿಶಾಲ್]
ಮದುವೆ ಸಮಾರೊಂಭದಲ್ಲಿ ಭಾಗವಹಿಸಲು ನಿಹಾಲ್ ಬಿತ್ಲಾ ಕುಟುಂಬ ತೆಲಂಗಾಣಕ್ಕೆ ತೆರಳಿತ್ತು. ಈ ವೇಳೆ ಅಸ್ವಸ್ಥಗೊಂಡ ಬಿತ್ಲಾ ರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.[ಕ್ಯಾನ್ಸರ್ ಪೀಡಿತ ಬಾಲಕನಿಗೆ ಪೊಲೀಸ್ ಸಮವಸ್ತ್ರದ ಪುಳಕ]
ಇನ್ನೊಂದೆಡೆ ಮೂತ್ರಪಿಂಡದ ಸಮಸ್ಯೆ ಎದುರಿಸುತ್ತಿದ್ದ 10 ವರ್ಷದ ಬಾಲಕ ಆನಂದ್ ಶರ್ಮಾ ಸಹ ಸೋಮವಾರವೇ ಕೊನೆ ಉಸಿರು ಎಳೆದಿದ್ದಾನೆ. ಪೊಲೀಸ್ ಆಗಬೇಕು ಎಂದು ಕನಸು ಕಂಡಿದ್ದವನನ್ನು ಕಳೆದ ಏಪ್ರಿಲ್ 30 ರಂದು ಪೊಲೀಸ್ ಕಮಿಷನರ್ ಆಗಿ ಮಾಡಲಾಗಿತ್ತು.