ಉಗ್ರ ಮೊಹಮದ್ ನವೀದ್ ವಿರುದ್ಧ ಚಾರ್ಜ್ ಶೀಟ್
ಬೆಂಗಳೂರು, ಜನವರಿ 29 : ಜಮ್ಮು-ಕಾಶ್ಮೀರದ ಉದಾಮ್ಪುರದಲ್ಲಿ ನಡೆದ ಉಗ್ರರ ದಾಳಿ ಪ್ರಕರಣದ ಕುರಿತು ಎನ್ಐಎ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಜೀವಂತವಾಗಿ ಸೆರೆ ಸಿಕ್ಕ ಉಗ್ರ ಮೊಹಮದ್ ನವೀದ್ ದಾಳಿಯ ಪ್ರಮುಖ ಆರೋಪಿ ಎಂದು ಎನ್ಐಎ ಹೇಳಿದ್ದು, ಇತರ 8 ಜನರ ಹೆಸರನ್ನು ಆರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ.
2015ರ
ಆಗಸ್ಟ್
5ರಂದು
ಜಮ್ಮು
ಕಾಶ್ಮೀರದಲ್ಲಿ
ಬಿಎಸ್ಎಫ್
ಶಿಬಿರದ
ಮೇಲೆ
ಲಷ್ಕರ್
ಎ
ತೋಯ್ಬಾ
ಉಗ್ರರು
ದಾಳಿ
ಮಾಡಿದ್ದರು.
ಈ
ದಾಳಿಯಲ್ಲಿ
ಇಬ್ಬರು
ಯೋಧರು
ಸಾವನ್ನಪ್ಪಿದ್ದರು.
ಮೊಹಮದ್
ನವೀದ್
ಮತ್ತು
ಆತನ
ಸಹಚರನನ್ನು
ಸ್ಥಳೀಯರ
ನೆರವಿನಿಂದಾಗಿ
ಜೀವಂತವಾಗಿ
ಸೆರೆ
ಹಿಡಿಯಲಾಗಿತ್ತು.
[ಕಾಶ್ಮೀರದಲ್ಲಿ
ಜೀವಂತವಾಗಿ
ಸೆರೆ
ಸಿಕ್ಕ
ಉಗ್ರ]
ರಾಷ್ಟ್ರೀಯ ತನಿಖಾ ದಳ ಈ ಉಗ್ರರ ದಾಳಿಯ ತನಿಖೆ ನಡೆಸುತ್ತಿದ್ದು ಗುರುವಾರ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಈ ದಾಳಿ ಪ್ರಕರಣದಲ್ಲಿ ಮೊಹಮದ್ ನವೀದ್ ಮೊದಲ ಆರೋಪಿಯಾಗಿದ್ದು, ಇತರ 8 ಜನರು ಆರೋಪಿಗಳು ಎನ್ಐಎ ಉಲ್ಲೇಖಿಸಿದೆ. ದಾಳಿಯ ಬಗ್ಗೆ ತನಿಖೆ ಮುಂದುವರೆಯುತ್ತಿದೆ ಎಂದು ಕೋರ್ಟ್ಗೆ ತಿಳಿಸಿದೆ. ['ನಾನು ಕೊಲ್ಲಲು ಬಂದಿದ್ದೆ, ಸಾಯಲು ಅಲ್ಲ']
ಪಾಕಿಸ್ತಾನದ ಉಗ್ರ ಸಂಘಟನೆ ಲಷ್ಕರ್ ಎ ತೋಯ್ಬಾ ಈ ದಾಳಿ ನಡೆಸಿದೆ ಎಂದು ಎನ್ಐಎ ಚಾರ್ಜ್ ಶೀಟ್ನಲ್ಲಿ ಹೇಳಿದೆ. ಮೊಹಮದ್ ನವೀದ್ ಮತ್ತು ಇತರ ಉಗ್ರರು ಈ ದಾಳಿಯನ್ನು ನಡೆಸಲು ಗಡಿನುಸುಳಿ ಬಂದಿದ್ದರು. ಕಾಶ್ಮೀರದ ಸ್ಥಳೀಯರು ಇವರಿಗೆ ನೆರವು ನೀಡಿದ್ದರು ಎಂದು ಎನ್ಐಎ ಹೇಳಿದೆ. [ಸೆರೆಸಿಕ್ಕ ಉಗ್ರ ನವೀದ್ ಯಾರು?]
ಈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನವೀದ್ ಹಲವಾರು ಮಾಹಿತಿಗಳನ್ನು ನೀಡಿದ್ದಾನೆ. ಜಮ್ಮ ಮತ್ತು ಕಾಶ್ಮೀರದಲ್ಲಿ ದಾಳಿಗೆ ಸಹಕಾರ ನೀಡಿದ ಹಲವು ಆರೋಪಿಗಳನ್ನು ಬಂಧಿಸಿದ್ದೇವೆ. ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಎನ್ಐಎ ಚಾರ್ಜ್ಶೀಟ್ನಲ್ಲಿ ತಿಳಿಸಿದೆ.