ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ: ಸಂಸತ್ ಅಧಿವೇಶನ, ಹಾಕಿ ತಂಡದ ಸಂಭ್ರಮ

|
Google Oneindia Kannada News

ನವದೆಹಲಿ, ಮಾ, 16: ಲೋಕಸಭೆಯ ಬಜೆಟ್ ಅಧಿವೇಶನ ಮುಂದುವರಿದಿದ್ದು ಸೋಮವಾರ ಪ್ರಮುಖ ನಾಯಕರು ಕಲಾಪದಲ್ಲಿ ಪಾಲ್ಗೊಂಡಿದ್ದರು. ಪಾಕಿಸ್ತಾನದ ಕರಾಚಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿಗೆ ತುತ್ತಾಗಿ ಪ್ರಾಣ ಕಳೆದುಕೊಂಡ ಮಕ್ಕಳಿಗೆ ಮೊಂಬತ್ತಿ ಬೆಳಗಿ ಸಂತಾಪ ಸೂಚಿಸಲಾಯಿತು. ವಿದೇಶ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಕಲಾಪಕ್ಕೆ ಹಾಜರಾಗಿದ್ದರು.

ಬಜೆಟ್ ಅಧಿವೇಶನದಲ್ಲಿ ಹಾಜರಿದ್ದ ಪ್ರಧಾನಿ ನರೇಂದ್ರ ಮೋದಿ, ಅಧಿವೇಶನಕ್ಕೆ ಆಗಮಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಹಾಕಿ ಪ್ರಶಸ್ತಿ ಜಯಿಸಿದ ಭಾರತ ಮಹಿಳಾ ತಂಡದ ಸಂಭ್ರಮ.. ಭಾರತ ಸೇರಿದಂತೆ ಪ್ರಪಂಚದಾದ್ಯಂತ ಇಡೀ ದಿನದ ಮತ್ತಷ್ಟು ಸುದ್ದಿಗಳು ಚಿತ್ರಗಳಲ್ಲಿ....(ಪಿಟಿಐ ಚಿತ್ರಗಳು)

ಹಾಕಿ ತಂಡದ ಸಂಭ್ರಮ

ಹಾಕಿ ತಂಡದ ಸಂಭ್ರಮ

ಪೊಲೇಂಡ್ ಮಣಿಸಿ ವಿಶ್ವ ಹಾಕಿ ಲೀಗ್ ಪಂದ್ಯಾವಳಿಯಲ್ಲಿ ವಿಜಯಮಾಲೆ ಧರಿಸಿದ ಭಾರತದ ಮಹಿಳಾ ತಂಡದ ಆಟಗಾರ ಸಂಭ್ರಮ.

ವೆಂಕಯ್ಯ ನಾಯ್ಡು

ವೆಂಕಯ್ಯ ನಾಯ್ಡು

ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು.

ಪಾದಚಾರಿ ಮಾರ್ಗದಲ್ಲಿ ಕಾರು

ಪಾದಚಾರಿ ಮಾರ್ಗದಲ್ಲಿ ಕಾರು

ನವದೆಹಲಿಯ ಮೋಲ್ ಚಂದ್ ರಸ್ತೆಯ ಪಾದಚಾರಿ ಮಾರ್ಗದಲ್ಲಿಯೆ ಕಾರು ಪಾರ್ಕ್ ಮಾಡಲಾಗಿದ್ದು ಮಹಿಳೆಯೊಬ್ಬರು ಮಗುವನ್ನು ಎತ್ತಿಕೊಂಡು ದಾಟುತ್ತಿರುವುದು.

ನರೇಂದ್ರ ಮೋದಿ ಹಾಜರಿ

ನರೇಂದ್ರ ಮೋದಿ ಹಾಜರಿ

ವಿದೇಶ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಲೋಕಸಭೆ ಕಲಾಪದಲ್ಲಿ ಪಾಲ್ಗೊಂಡರು.

ಸ್ಮೃತಿ ಇರಾನಿ ಹೆಜ್ಜೆ

ಸ್ಮೃತಿ ಇರಾನಿ ಹೆಜ್ಜೆ

ಲೋಕಸಭೆ ಕಲಾಪಕ್ಕೆ ಹೆಜ್ಜೆ ಹಾಕಿದ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ. ಜೆಡಿಯು ಮುಖಂಡ ಶರದ್ ಯಾದವ್ ದಕ್ಷಿಣ ಭಾರತದ ಮಹಿಳೆಯರ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಇರಾನಿ ತೀವ್ರವಾಗಿ ಖಂಡಿಸಿದ್ದು ಯಾದವ್ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ.

ದೆಹಲಿಯಲ್ಲಿ ಮಾಯಾ

ದೆಹಲಿಯಲ್ಲಿ ಮಾಯಾ

ಬಜೆಟ್ ಅಧಿವೇಶನದ ವೇಳೆ ಸಂಸತ್ ಭವನದ ಹೊರಗೆ ಕಾಣಿಸಿಕೊಂಡ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ.

ಮಾತುಕತೆ

ಮಾತುಕತೆ

ಲೋಕ ಜನಶಕ್ತಿ ಪಕ್ಷದ ಸಂಸದ ಚೀರಾಗ್ ಪಾಸ್ವನ್ ಮತ್ತು ಬಿಜೆಪಿಯ ಸ್ವಾಮಿ ಆದಿತ್ಯನಾಥ್ ಸಂಸತ್ ಅಧಿವೇಶನಕ್ಕೂ ಮುನ್ನ ಚರ್ಚೆಯಲ್ಲಿ ತೊಡಗಿದ್ದರು.

ಹೊತ್ತಿ ಉರಿದ ಬೆಂಕಿ

ಹೊತ್ತಿ ಉರಿದ ಬೆಂಕಿ

ಹೈದ್ರಾಬಾದ್ ನಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿ ಗಿಡ ಮರಗಳನ್ನು ಆಹುತಿ ಪಡೆಯಿತು.

ಅನುಮಾನಾಸ್ಪದ ವ್ಯಕ್ತಿಗೆ ಥಳಿತ

ಅನುಮಾನಾಸ್ಪದ ವ್ಯಕ್ತಿಗೆ ಥಳಿತ

ಚರ್ಚ್ ಮೇಲೆ ಆತ್ಮಾಹುತಿ ಬಾಂಬ್ ದಾಳಿ ಮಾಡಲು ಯತ್ನಿಸಿದ್ದಾನೆ ಎಂದು ಆರೋಪಿಸಿ ಲಾಹೋರ್ ನಲ್ಲಿ ವ್ಯಕ್ತಿಯೊಬ್ಬನನ್ನು ಥಳಿಸಿದ ಸಾರ್ವಜನಿಕರು. ಜನರ ಆಕ್ರೋಶಕ್ಕೆ ತುತ್ತಾದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಬೆಲ್ ಗೋಪುರಕ್ಕೆ ಬೆಂಕಿ

ಬೆಲ್ ಗೋಪುರಕ್ಕೆ ಬೆಂಕಿ

ರಷ್ಯಾದ ಬೆಲ್ ಗೋಪುರದ ಸುತ್ತಲಿನ ಮರದ ವಸ್ತುಗಳಿಗೆ ಆಕಸ್ಮಿಕ ಬೆಂಕಿ ತಗುಲಿದ್ದು ಕೂಡಲೆ ಅಗ್ನಿಶಾಮಕದಳದವರು ಪರಿಸ್ಥಿತಿಯನ್ನು ಹತೋಟಿಗೆ ತಂದರು.

ಮೊಂಬತ್ತಿ ಬೆಳಗಿ ಸಂತಾಪ

ಮೊಂಬತ್ತಿ ಬೆಳಗಿ ಸಂತಾಪ

ಪಾಕಿಸ್ತಾನದ ಕರಾಚಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿಗೆ ತುತ್ತಾಗಿ ಪ್ರಾಣ ಕಳೆದುಕೊಂಡ ಮಕ್ಕಳಿಗೆ ಮೊಂಬತ್ತಿ ಬೆಳಗಿ ಸಂತಾಪ ಸೂಚಿಸಲಾಯಿತು.

English summary
News in Pics: Prime Minister Narendra Modi in the Lok Sabha in New Delhi on Monday, Indian players show victory sign during a group photograph after defeating Poland during the FIH hockey world league. And some more news in Photos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X