ಚಿತ್ರಗಳಲ್ಲಿ: ವೀರ ಸೇನಾನಿ ಭಗತ್ ಸಿಂಗ್ ಗೆ ನಮನ
ಬೆಂಗಳೂರು, ಮಾ. 23: ದೇಶಾದ್ಯಂತ ವೀರ ಸೇನಾನಿ ಭಗತ್ ಸಿಂಗ್ ಅವರ ಪುಣ್ಯಸ್ಮರಣೆ, ಭಗತ್ ಸಿಂಗ್ ಸ್ಮಾರಕಕ್ಕೆ ನಮಿಸಿದ ಪ್ರಧಾನಿ ನರೇಂದ್ರ ಮೋದಿ, ಕಾಶ್ಮೀರದ ಸ್ವಚ್ಛಂದ ಪರಿಸರದಲ್ಲಿ ವಿಹರಿಸುತ್ತಿರುವ ಜೋಡಿ...
ಕಾರ್ಯಕ್ರಮವೊಂದರಲ್ಲಿ ಕ್ಯಾಮರಾಕ್ಕೆ ಫೋಸು ನೀಡಿದ ಬಾಲಿವುಡ್ ಬೆಡಗಿಯರಾದ ದೀಪಿಕಾ ಪಡುಕೋಣೆ, ಕರೀನಾ ಕಪೂರ್, ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೆ ಅಭ್ಯಾಸ ನಡೆಸಿದ ಭಾರತ ಕ್ರಿಕೆಟ್ ತಂಡದ ಆಟಗಾರರು... ಮತ್ತಷ್ಟು ಸುದ್ದಿಗಳು ಚಿತ್ರಗಳಲ್ಲಿ..(ಪಿಟಿಐ ಚಿತ್ರಗಳು)
ಸೇನಾನಿಗೆ ಗೌರವ
ಬ್ರಿಟಿಷರ ಕುಣಿಕೆಗೆ 1931 ರ ಮಾರ್ಚ್ 23 ರಂದು ಕುತ್ತಿಗೆ ಒಡ್ಡಿದ ದೇಶಪ್ರೇಮಿ, ಹೋರಾಟಗಾರ ಭಗತ್ ಸಿಂಗ್ ಅವರಿಗೆ ಮೊಂಬತ್ತಿ ಬೆಳಗುವ ಮುಖೇನ ಮಕ್ಕಳು ಗೌರವ ಸಲ್ಲಿಸಿದರು.
ಪ್ರಧಾನಿ ನರೇಂದ್ರ ಮೋದಿ ಮಾತು
ದೇಶ ಪ್ರೇಮವನ್ನು ಪುಟಿದೆಬ್ಬಿಸುವ ಭಗತ್ ಸಿಂಗ್ ಪುಣ್ಯ ಸ್ಮರಣೆ ವೇಳೆ ಫಿರೋಜ್ ಪುರದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಭಗತ್ ಸಿಂಗ್ ದೇಶಪ್ರೇಮದ ಕತೆಯನ್ನು ಕೊಂಡಾಡಿದರು.
ನಿಮಗೆ ನಮನ
ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ಪುತ್ಥಳಿಗೆ ಹೂವಿನ ಮಾಲೆ ಹಾಕಿ ನಮನ ಸಲ್ಲಿಸಿದರು.
ಸ್ಮಾರಕಕ್ಕೆ ನಮನ
ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ರಾಷ್ಟ್ರೀಯ ಸ್ಮಾರಕಕ್ಕೆ ನಮನ ಸಲ್ಲಿಸಿದರು.
ನೃತ್ಯ ಸ್ವಾಗತ
ಊರಿಗೆ ಆಗಮಿಸಲಿದ್ದ ಬಿಜೆಪಿ ನಾಯಕ ಎಲ್ ಕೆ ಅಡ್ವಾನಿ ಅವರನ್ನು ಅಹಮದಾಬಾದ್ ನ ನಾಗರಿಕರು ತಮ್ಮ ಸಾಂಪ್ರದಾಯಿಕ ನೃತ್ಯಗಳ ಮುಖೇನ ಬರಮಾಡಿಕೊಂಡರು.
ಧರೆಗಿಳಿದ ಸ್ವರ್ಗ
ಪ್ರವಾಸಿಗರಿಗೆ ಶ್ರೀನಗರದ ವಾತಾವರಣ ಸ್ವರ್ಗದಂತೆ ಭಾಸವಾಗತೊಡಗಿದೆ. ಒಂದೆಡೆ ಹಚ್ಚ ಹಸರು, ಇನ್ನೊಂದೆಡೆ ಸೂರ್ಯನ ಕಿರಣಗಳು, ಮುತ್ತಿನಂತೆ ಮಿಂಚುವ ಹಿಮದ ನಡುವೆ ಜೋಡಿಯೊಂದು ಸಂಚಾರ ಮಾಡುತ್ತಿದ್ದ ಬಗೆ.
ಅಂತೂ ಸಿಬಿಐಗೆ
ಐಎಎಸ್ ಅಧಿಕಾರಿ ಡಿಕೆ ರವಿ ಪ್ರಕರಣವನ್ನು ಅಂತಿಮವಾಗಿ ಸಿಬಿಐಗೆ ಒಪ್ಪಿಸಲು ಕರ್ನಾಟಕ ರಾಜ್ಯ ಸರ್ಕಾರ ಕ್ರಮ ತೆಗೆದುಕೊಂಡಿದೆ. ವಿಧಾನಸೌಧದಲ್ಲಿ ಸೋಮವಾರ ಆಡಳಿತ ಮತ್ತು ವಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಪೂರ್ವ ಸಿದ್ಧತೆ
ಅಮೋಘ ಆಟ ಪ್ರದರ್ಶನ ನೀಡುತ್ತಾ ಬಂದಿರುವ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಸೆಮಿಫೈನಲ್ ಪಂದಕ್ಕೆ ಮುನ್ನ ಅಭ್ಯಾಸ ನಡೆಸಿದರು. ಸತತ ಏಳು ಪಂದ್ಯಗಳನ್ನು ಗೆದ್ದಿರುವ ಧೋನಿ ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ.
ದೀಪಿಕಾ ಪಡುಕೋಣೆ
ಮುಂಬೈ ನಲ್ಲಿ ನಡೆದ ಲಾಕ್ಮೆ ಫ್ಯಾಷನ್ ವೀಕ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಾಲಿವುಡ್ ತಾರೆ ದೀಪಿಕಾ ಪಡಿಕೋಣೆ ವಿಭಿನ್ನ ಡ್ರೆಸ್ ನಲ್ಲಿ ಮಿಂಚಿದರು.