ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಕೆಟ್ ದೇವರಿಗೆ ಗುರುವಿನ ಆಶೀರ್ವಾದ, ಇನ್ನಷ್ಟು ಸುದ್ದಿಗಳು

By Madhusoodhan
|
Google Oneindia Kannada News

ನವದೆಹಲಿ,ಜುಲೈ,19: ದೇಶದಲ್ಲೆಡೆ ಗುರು ಪೂರ್ಣಿಮೆ ಸಂಭ್ರಮ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ತಮ್ಮ ಗುರು ರಮಾಕಾಂತ್ ಅಚ್ರೇಕರ್ ಅವರ ಆಶೀರ್ವಾದ ಪಡೆದರು. ದೇಶದ ವಿವಿಧೆಡೆ ಮಕ್ಕಳು ಗುರುವಿಗೆ ನಮಿಸಿದರು. ದೀಪ ಬೆಳಗಿ ಗುರುವಿನ ಮಹಿಮೆ ಕೊಂಡಾಡಿದರು. ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್ ನಲ್ಲಿ ದೇಶದ ಸಮಸ್ತ ನಾಗರಿಕರಿಗೆ ಗುರು ಪೂರ್ಣಿಮೆ ಶುಭಾಶಯ ಕೋರಿದ್ದಾರೆ.

ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕದ ಬಿಜೆಪಿ ಸಂಸದರು ನವದೆಹಲಿಯ ಗಾಂಧಿ ಪ್ರತಿಮೆ ಎದುರು ಭಿತ್ತಿ ಪತ್ರ ಹಿಡಿದು ಪ್ರತಿಭಟನೆ ನಡೆಸಿದರು [ಸಾಯಿಬಾಬಾ ಭಜನೆ, ದುರ್ಗಾದೇವಿ ಆರಾಧನೆ]

ನವದೆಹಲಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಿತು. ಪ್ರಧಾನಿ ನರೇಂದ್ರ ಮೋದಿ, ಸಚಿವರಾದ ಸುಷ್ಮಾ ಸ್ವರಾಜ್, ರಾಜ್ ನಾಥ್ ಸಿಂಗ್, ವೆಂಕಯ್ಯ ನಾಯ್ಡು, ಅನಂತ್ ಕುಮಾರ್ ಸೇರಿದಂತೆ ಬಿಜೆಪಿಯ ಘಟಾನುಘಟಿಗಳು ಭಾಗವಹಿಸಿದ್ದರು. ಇಡೀ ದಿನದ ಸುದ್ದಿಗಳನ್ನು ಚಿತ್ರಗಳ ಮೂಲಕ ಒಂದು ರೌಂಡ್ ಹಾಕಿಕೊಂಡು ಬನ್ನಿ...(ಪಿಟಿಐ ಚಿತ್ರಗಳು)

ಗುರುವಿನ ಆಶೀರ್ವಾದ

ಗುರುವಿನ ಆಶೀರ್ವಾದ

ಗುರು ಪೂರ್ಣಿಮೆ ಹಿನ್ನೆಲೆಯಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಗುರು ರಮಾಕಾಂತ್ ಅಚ್ರೇಕರ್ ಅವರ ಆಶೀರ್ವಾದ ಪಡೆದರು.

ಮಹಾರಾಜರಿಂದ ಗುರು ಪೂಜೆ

ಮಹಾರಾಜರಿಂದ ಗುರು ಪೂಜೆ

ಮೈಸೂರು ಮಹಾರಾಜ ಯದುವೀರ್ ಒಡೆಯರ್ ಗುರುವಿನ ಪಾದಪೂಜೆ ನೆರವೇರಿಸಿದರು.

ಗುರುವಿಗೆ ನಮನ

ಗುರುವಿಗೆ ನಮನ

ದೀಪಗಳನ್ನು ಬೆಳಗಿಸಿ ಗುರುವಿಗೆ ನಮಿಸಿದ ಮಕ್ಕಳು, ಮೊರಾದ್ ಬಾದ್ ಚಿತ್ರ.

ಸಿಬಿಐಗೆ ಒಪ್ಪಿಸಿ

ಸಿಬಿಐಗೆ ಒಪ್ಪಿಸಿ

ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕದ ಬಿಜೆಪಿ ಸಂಸದರು ನವದೆಹಲಿಯ ಗಾಂಧಿ ಪ್ರತಿಮೆ ಎದುರು ಭಿತ್ತಿ ಪತ್ರ ಹಿಡಿದು ಪ್ರತಿಭಟನೆ ನಡೆಸಿದರು .

ವಿದ್ಯಾರ್ಥಿಗಳೊಂದಿಗೆ ಮೋದಿ

ವಿದ್ಯಾರ್ಥಿಗಳೊಂದಿಗೆ ಮೋದಿ

ಉಪಗ್ರಹವೊಂದರ ನಿರ್ಮಾಣದಲ್ಲಿ ಕೈ ಜೋಡಿಸಿದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ.

ಇದ್ಯಾವ ನಡಿಗೆ?

ಇದ್ಯಾವ ನಡಿಗೆ?

ಸಂಸತ್ ಮಳೆಗಾಲದ ಅಧಿವೇಶನಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅನಂತ್ ಕುಮಾರ್.

ಕೇಂದ್ರ ಸಚಿವರ ಸಾಲು

ಕೇಂದ್ರ ಸಚಿವರ ಸಾಲು

ನವದೆಹಲಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಚಿವರಾದ ಸುಷ್ಮಾ ಸ್ವರಾಜ್, ರಾಜ್ ನಾಥ್ ಸಿಂಗ್, ವೆಂಕಯ್ಯ ನಾಯ್ಡು ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಿದ್ದರು.

ಮಲಾಲಾ ದರ್ಶನ

ಮಲಾಲಾ ದರ್ಶನ

ನೋಬೆಲ್ ಪುರಸ್ಕೃತ ಮಕ್ಕಳ ಹಕ್ಕು ಹೋರಾಟಗಾರ್ತಿ ಮಲಾಲಾ ಅಮೆರಿಕದ ಒಮಾಹಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು.

ಭಕ್ತ ಸಾಗರ

ಭಕ್ತ ಸಾಗರ

ಮಧುರೈನಲ್ಲಿ ನಡೆದ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತ ಸಮೂಹ.

ಬಾಲಿವುಡ್ ಝಲಕ್

ಬಾಲಿವುಡ್ ಝಲಕ್

ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ಬಾಲಿವುಡ್ ತಾರೆಗಳಾದ ಜಾಕ್ವೆಲಿನ್ ಫರ್ನಾಂಡೀಸ್, ಟೈಗರ್ ಮತ್ತು ಆಸ್ಪ್ರೇಲಿಯಾದ ನಟ ನಥನ್ ಜೋನ್ಸ್.

ರಿಯೋಗೆ ಗುಡ್ ಲಕ್ ಹೇಳಿ

ರಿಯೋಗೆ ಗುಡ್ ಲಕ್ ಹೇಳಿ

ರಿಯೋ ಒಲಿಳಪಿಕ್ಸ್ ಗೆ ತೆರಳಲಿರುವ ಭಾರತದ ಆಟಗಾರರಿಗೆ ಗುಡ್ ಲಕ್ ಹೇಳಿದ ಕೇಂದ್ರ ಕ್ರೀಢಾ ಸಚಿವ ವಿಜಯ್ ಘೋಯಲ್, ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್, ಬಾಲಿವುಡ್ ನಟ ಸಲ್ಮಾನ್ ಖಾನ್.

English summary
News In Pics: Karnataka BJP MPs shouts slogans at a protest demanding CBI probe into Deputy SP M K Ganapathi suicide case, during monsoon session of Parliament. Cricket legend Sachin Tendulkar seeks blessings of his Guru Ramakant Achrekar on the occasion of Guru Purnima in Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X