ವ್ಯರ್ಥ ಆರೋಪಗಳಿಲ್ಲ, ಕ್ಷುಲ್ಲಕ ರಾಜಕಾರಣವಿಲ್ಲ
ಬೆಂಗಳೂರು, ಜನವರಿ, 18: ಚಳಿಗಾಲ ಜೋರಾಗಿದ್ದರೂ ಸುದ್ದಿಗಳಿಗೆ ಬರಗಾಲವಿಲ್ಲ. ದೇಶ-ವಿದೇಶದಲ್ಲಿನ ಪ್ರಮುಖ ಘಟನಾವಳಿಗಳಿಗಳಿಗೆ ಕೊನೆಯಿಲ್ಲ. ಆದರೆ ರಾಜಕಾರಣದ ಸಂಗತಿಗಳಿಲ್ಲ. ವ್ಯರ್ಥ ಆರೋಪಗಳಿಲ್ಲ.
ಗಣರಾಜ್ಯೋತ್ಸವ ಸಮೀಪಿಸುತ್ತಿದೆ. ನವದೆಹಲಿಯಲ್ಲಿ ಪರೇಡ್ ನಡೆಸಿದ ಫ್ರೆಂಚ್ ಸೈನಿಕರು. ನವದೆಹಲಿಯಲ್ಲಿ ಮಕ್ಕಳೊಂದಿಗೆ ಬರೆತು ಕ್ರಿಕೆಟ್ ಆಡಿದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್. ಜೆರುಸಲೆಮ್ ನಲ್ಲಿ ಯಾದ್ ವಶಿಮ್ ನೆನಪಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದೇಶಾಂಗ ಸಚಿವೆ ಸಯಷ್ಮಾ ಸ್ವರಾಜ್.[ಚಿತ್ರಗಳು : ರಾಜಪಥ್ ನಲ್ಲಿ ಫ್ರಾನ್ಸ್ ಸೈನಿಕರ ತಾಲೀಮು]
ಮಾನ ನಷ್ಟ ಮೊಕದ್ದಮೆಯೊಂದಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ. 2015ರ ಶೌರ್ಯ ಪ್ರಶಸ್ತಿ ಪಡೆದ ಮಕ್ಕಳು. ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಶಾರುಖ್, ಸಲ್ಮಾನ್, ಆಲಿಯಾ ಭಟ್ ಝಲಕ್... ಇನ್ನಷ್ಟು ಚಿತ್ರಗಳನ್ನು ಸುದ್ದಿ ಸಮೇತ ನೋಡಿ....(ಪಿಟಿಐ ಚಿತ್ರಗಳು)
ಕರುಣಾನಿಧಿ ಪ್ರತ್ಯಕ್ಷ
ಮಾನ ನಷ್ಟ ಮೊಕದ್ದಮೆಯೊಂದಕ್ಕೆ ಸಂಬಂಧಿಸಿ ಚೆನ್ನೈ ನ್ಯಾಯಾಲಯಕ್ಕೆ ಹಾಜರಾದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ.
ಚಿಣ್ಣರೊಂದಿಗೆ ಸಚಿನ್
ಐಸಿಸಿ ಮುಖ್ಯ ಕಾರ್ಯದರ್ಶಿ ಡೇವಿಡ್ ರಿಚರ್ಡ್ ಸನ್ ಮತ್ತು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ನವದೆಹಲಿಯಲ್ಲಿ ನಡೆದ ಐಸಿಸಿ ಕ್ಯಾಂಪೇನ್ ನಲ್ಲಿ ಮಕ್ಕಳೊಂದಿಗೆ ಕಾಣಿಸಿಕೊಂಡರು.
ಶೌರ್ಯ ಪ್ರಶಸ್ತಿ
ನವದೆಹಲಿಯಲ್ಲಿ 2015 ರ ಶೌರ್ಯ ಪ್ರಶಸ್ತಿ ಪಡೆದ ಮಕ್ಕಳ ಸಂಭ್ರಮ. 2015ರ ಸಾಲಿನ ಶೌರ್ಯ ಪ್ರಶಸ್ತಿಯನ್ನು ಸೋಮವಾರ ವಿತರಣೆ ಮಾಡಲಾಯಿತು.
ಕಿಂಗ್ ಖಾನ್ ಕಮಾಲ್
ಮುಂಬೈ ನಲ್ಲಿ ನಡೆದ ಫಿಲ್ಮ್ ಫೇರ್ ಅವಾರ್ಡ್ ಕಾರ್ಯಕ್ರಮದಲ್ಲಿ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಮತ್ತು ಬಾಲಿವುಡ್ ಬೆಡಗಿ ಆಲಿಯಾ ಭಟ್ ನೃತ್ಯದ ಝಲಕ್.
ಪ್ರಶಸ್ತಿ ಸಂಭ್ರಮ
ಪ್ರಶಸ್ತಿ ಪಡೆದ ಸಂಭ್ರಮದಲ್ಲಿ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ, ನಟ ರಣವೀರ್ ಸಿಂಗ್.
ರೇಖಾರಿಂದ ಪ್ರಶಸ್ತಿ
ಬಾಲಿವುಡ್ ನ ಹಿರಿಯ ಕಲಾವಿದೆ ರೇಖಾ ಅವರಿಂದ ಪ್ರಶಸ್ತಿ ಸ್ವೀಕರಿಸಿದ ರಣವೀರ್ ಸಿಂಗ್.
ಆಶಾ ಭೋಸ್ಲೆ
ಪುಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನಲೆ ಗಾಯಕಿ ಆಶಾ ಭೋಸ್ಲೆ ಪಾಲ್ಗೊಂಡು ರಂಜಿಸಿದರು.
ಫ್ರೆಂಚ್ ಸೈನ್ಯದ ಪರೇಡ್
ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸಿರುವ ಫ್ರೆಂಚ್ ಸೈನಿಕರ ಪರೇಡ್.
ರೋಜರ್ ಫೇಡರರ್
ಮೆಲ್ಬೋರ್ನ್ ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ರೋಜರ್ ಫೆಡರರ್ ಆಟದ ಭಂಗಿ.
ಸುಷ್ಮಾ ಸ್ವರಾಜ್
ಜೆರುಸಲೆಮ್ ನಲ್ಲಿ ಯಾದ್ ವಶಿಮ್ ನೆನಪಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದೇಶಾಂಗ ಸಚಿವೆ ಸಯಷ್ಮಾ ಸ್ವರಾಜ್.