ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಮವಾರದ ದೇಶ-ವಿದೇಶ ಸುದ್ದಿಗಳ ಚಿತ್ರ ಸಂಪುಟ

|
Google Oneindia Kannada News

ನವದೆಹಲಿ, ಜು. 27: ಉತ್ತರ ಭಾರತದ ವಿವಿಧೆಡೆ ವರುಣನ ಆರ್ಭಟ ಮುಂದುವರಿದಿದೆ. ಅಹಮದಾಬಾದ್, ಪಶ್ಚಿಮ ಬಂಗಾಳ ಮತ್ತು ಜಮ್ಮು ಕಾಶ್ಮೀರದಲ್ಲಿ ಮಳೆ ಆರ್ಭಟಿಸುತ್ತಿದೆ. ಭೂ ಕುಸಿತದ ಪರಿಣಾಮ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ.

ಪ್ರೋ ಕಬಡ್ಡಿ ಪಂದ್ಯಾವಳಿಗೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು ಕ್ರೀಡಾಭಿಮಾನಿಗಳು ಪ್ರತಿಯೊಂದು ಪಂದ್ಯವನ್ನು ಆಸ್ವಾದಿಸುತ್ತಿದ್ದಾರೆ. ಬಾಲಿವುಡ್ ನಟರು, ಕ್ರೀಡಾಪಟುಗಳು, ರಾಜಕಾರಣಿಗಳು ಪಂದ್ಯದ ಸ್ವಾದ ಸವಿಯುತ್ತಿದ್ದಾರೆ.

ಸೋಮವಾರ ದೇಶ ಮತ್ತು ವಿದೇಶಗಳಲ್ಲಿ ನಡೆದ ಘಟನಾವಳಿಗಳ ಸುತ್ತ ಒಂದು ರೌಂಡ್ ಹಾಕಿ ಬರೋಣ. ದೇಶ ವಿದೇಶದ ಸುದ್ದಿಗಳನ್ನು ಚಿತ್ರಗಳಲ್ಲಿ ನೋಡಿ ಆಸ್ವಾದಿಸಿ...(ಪಿಟಿಐ ಚಿತ್ರಗಳು)

ಕಾವೇರಿದ ಪ್ರೋ ಕಬಡ್ಡಿ

ಕಾವೇರಿದ ಪ್ರೋ ಕಬಡ್ಡಿ

ಪ್ರೋ ಕಬಡ್ಡಿ ಪಂದ್ಯಗಳು ದೇಶದೆಲ್ಲೆಡೆ ಸಾಂಪ್ರದಾಯಿಕ ಕ್ರೇಜ್ ಹುಟ್ಟುಹಾಕಿದೆ. ಜೈಪುರದಲ್ಲಿ ನಡೆದ ಪಂದ್ಯದ ನಂತರ ಪ್ರಶಸ್ತಿ ವಿತರಣೆ ವೇಳೆ ಹಾಜರಿದ್ದ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ. ಲಲಿತ್ ಮೋದಿ ವಿವಾದಕ್ಕೆ ಸಂಬಂಧಿಸಿ ರಾಜೆ ರಾಜೀನಾಮೆ ನೀಡಬೇಕು ಎಂದು ವಿಪಕ್ಷಗಳು ಆಗ್ರಹಪಡಿಸುತ್ತಿವೆ.

ಅಂಗಳದಲ್ಲಿ ಬಾಲಿವುಡ್ ಜೋಡಿ

ಅಂಗಳದಲ್ಲಿ ಬಾಲಿವುಡ್ ಜೋಡಿ

ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದ ಮಾಲೀಕ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ದಂಪತಿ ಸಮೇತರಾಗಿ ಪ್ರೋ ಕಬಡ್ಡಿ ಪಂದ್ಯದ ವೇಳೆ ಕಾಣಿಸಿಕೊಂಡರು.

ಎಲ್ಲಿಗೆ ಪಯಣ

ಎಲ್ಲಿಗೆ ಪಯಣ

ಪಶ್ಚಿಮ ಬಂಗಾಳದಲ್ಲಿ ಮಳೆ ಆರ್ಭಟ ಮುಂದುವರಿದಿದ್ದು ನಾಗರಿಕರು ಸುರಕ್ಷಿತ ತಾಣ ಅರಸಿ ತೆರಳುತ್ತಿದ್ದಾಗ ಕಂಡು ಬಂದ ದೃಶ್ಯ

ವಾಟರ್ ನಲ್ಲಿ ಆಟೋ

ವಾಟರ್ ನಲ್ಲಿ ಆಟೋ

ಅಹಮದಾಬಾದ್ ನಲ್ಲೂ ಮಳೆ ಆರ್ಭಟಿಸುತ್ತಿದ್ದು ರಸ್ತೆ ಮಧ್ಯೆ ನೀರಿನಲ್ಲಿ ಸಿಕ್ಕಿಹಾಕಿಕೊಂಡ ಆಟೋಗಳು.

ಬರಿ ಅವಶೇಷ

ಬರಿ ಅವಶೇಷ

ಮುಂಬೈನ ಜನವಸತಿ ಪ್ರದೇಶವೊಂದರಲ್ಲಿ ಬಹುಮಹಡಿ ಕಟ್ಟಡವನ್ನು ನೆಲಸಮ ಮಾಡಿದ ನಂತರ ಕಂಡು ಬಂದ ದೃಶ್ಯ.

ಆನೆ ಸವಾರಿ

ಆನೆ ಸವಾರಿ

ಕೋಜಿಕೋಡ್ ನಲ್ಲಿ ನಡೆದ ಬೋಟ್ ರೇಸ್ ನಲ್ಲಿ ಜಯಗಳಿಸಿದ ನ್ಯೂಜಿಲೆಂಡ್ ಜೋಡಿ ಆನೆ ಮೇಲೆ ಏರಿ ತಮ್ಮ ಸಂಭ್ರಮ ಆಚರಿಸಿದ್ದು ಹೀಗೆ.

ಲಾಲು ಪ್ರಸಾದ್ ಗೆ ಧಿಕ್ಕಾರ

ಲಾಲು ಪ್ರಸಾದ್ ಗೆ ಧಿಕ್ಕಾರ

ಬಿಹಾರದಲ್ಲಿ ಆರ್ ಜೆಡಿ ಮತ್ತು ಲಾಲೂ ಪ್ರಸಾದ್ ಯಾದವ್ ವಿರುದ್ಧ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು ಸೋಮವಾರ ಕಂಡು ಬಂದ ದೃಶ್ಯ.

ಇದ್ಯಾವ ನೃತ್ಯ?

ಇದ್ಯಾವ ನೃತ್ಯ?

ಟೊರೊಂಟೋ ದಲ್ಲಿ ನಡೆಯುತ್ತಿದ್ದ ಪಾನ್ ಆಮ್ ಗೇಮ್ಸ್ ಸಮಾರೋಪದಲ್ಲಿ ಕಂಡುಬಂದ ನೃತ್ಯಕ್ಕೆ ನೀವೇ ಒಂದು ಹೆಸರು ಕೊಡಿ.

ಮಲಗು ಮಲಗು ಚಾರುಲತೆ

ಮಲಗು ಮಲಗು ಚಾರುಲತೆ

ಮೂರು ವಾರ ಪ್ರಾಯದ ಬಿಳಿ ಸಿಂಹದ ಮರಿಗಳ ಆರೈಕೆಯಲ್ಲಿ ತೊಡಗಿರುವ ತಾಯಿ ಸಿಂಹ ಬೊರ್ಸೆವ್ ನ ಪ್ರಾಣಿ ಸಂಗ್ರಹಾಲಯದಲ್ಲಿ ಕ್ಯಾಮರಾಕ್ಕೆ ಸೆರೆ ಸಿಕ್ಕಿದ್ದು ಹೀಗೆ.

ಕೃತಿ ಕರಬಂಧ ಕಮಾಲ್

ಕೃತಿ ಕರಬಂಧ ಕಮಾಲ್

ಬೆಂಗಳೂರಿನಲ್ಲಿ ಆಯೋಜಿಸಿದ್ದ ಫ್ಯಾಷನ್ ಶೋ ಒಂದರಲ್ಲಿ ಕಾಣಿಸಿಕೊಂಡ ಸ್ಯಾಂಡಲ್ ವುಡ್ ಬೆಡಗಿ ಕೃತಿ ಕರಬಂಧ ಸೀರೆ ಉಟ್ಟು ಮಾರ್ಜಾಲ ಹೆಜ್ಜೆ ಹಾಕಿದ ಪರಿ.

English summary
News in Pics: Rajasthan Chief Minister Vasundhara Raje during the Pro Kabaddi League matches of Patna Pirates and Jaipur Pink Panthers at Sawai Mansingh indoor stadium , in Jaipur. Villagers wade through the flooded water of Kunye river after the heavy rainfall in Birbhum district of West-Bengal. Here is some other news in Pics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X