ಒಲಿಂಪಿಕ್ಸ್ಗೆ ಆಯ್ಕೆಯಾದ ಭಾರತ ತಂಡಕ್ಕೆ ಗುಡ್ ಲಕ್ ಹೇಳಿ
ನವದೆಹಲಿ, ಜೂನ್, 12: ಮುಂಬರಲಿರುವ ರಿಯೋ ಒಲಿಂಪಿಕ್ಸ್ ಗೆ ಆಯ್ಕೆಯಾದ ಸಂಭ್ರಮದಲ್ಲಿ ಭಾರತದ ಪುರುಷ ಮತ್ತು ಮಹಿಳಾ ತಂಡದ ಆಟಗಾರರು ಮಂಗಳವಾರ ಗಮನ ಸೆಳೆದರು, ರಿಯೋ ಒಲಿಂಪಿಕ್ಸ್ ಗೆ ತಂಡ ತೆರಳಲಿದ್ದು ಈಗಲೇ ಗುಡ್ ಲಕ್ ಹೇಳೋಣ.. [ರಿಯೋ ಒಲಿಂಪಿಕ್ಸ್ ಗೆ ಹಾಕಿ ತಂಡ ಪ್ರಕಟ, ನಾಲ್ವರು ಕನ್ನಡಿಗರು]
ಜಮ್ಮು ಕಾಶ್ಮೀರದ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾಹಿತಿ ಪಡೆದಿದ್ದು ಉನ್ನತ ಮಟ್ಟದ ಸಭೆ ನಡೆಸಿ ಪರಿಹಾರ ಕ್ರಮದ ಸೂಚನೆ ನೀಡಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡಲು ನಾಗರಿಕರಲ್ಲಿ ಮನವಿ ಮಾಡಿದ್ದಾರೆ.
ಗೃಹ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಹನಕಾಸು ಸಚಿವ ಅರುಣ್ ಜೇಟ್ಲಿ, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಹಿರಿಯ ಭದ್ರತಾ ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಿದರು.[ಯುವಶಕ್ತಿ ಬಳಕೆ, ಭಯೋತ್ಪಾದನೆ ವಿರುದ್ಧ ಸಮರ ಗುರಿ: ಮೋದಿ]
ಬಾಲಿವುಡ್ ಚಿತ್ರ ಮೆಹಂಜೋದಾರೋದ ಪ್ರಮೋಷನ್ ನಲ್ಲಿ ಕಾಣಿಸಿಕೊಂಡ ನಟ ಹೃತಿಕ್ ರೋಶನ್ ಮತ್ತು ನಟಿ ಪೂಜಾ ಹೆಗಡೆ. ಇನ್ನಷ್ಟು ಸುದ್ದಿಗಳು ಚಿತ್ರಗಳಲ್ಲಿ(ಪಿಟಿಐ ಚಿತ್ರಗಳು)
ಸಂಭ್ರಮದ ಸೆಲ್ಫಿ
ರಿಯೋ ಒಲಿಂಪಿಕ್ಸ್ ಗೆ ಆಯ್ಕೆಯಾದ ಸಂಭ್ರಮದಲ್ಲಿ ಮಹಿಳಾ ತಂಡದ ಆಟಗಾರರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಗೆದ್ದು ಬರುತ್ತೇವೆ
ರಿಯೋ ಒಲಿಂಪಿಕ್ಸ್ ಗೆ ಆಯ್ಕೆಯಾದ ಸಂಭ್ರಮದಲ್ಲಿ ಭಾರತದ ಪುರುಷರ ತಂಡದ ವಿಶ್ವಾಸದ ನಗೆ.
ನರೇಂದ್ರ ಮೋದಿ ಚರ್ಚೆ
ಜಮ್ಮು ಕಾಶ್ಮೀರದ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾಹಿತಿ ಪಡೆದಿದ್ದು ಉನ್ನತ ಮಟ್ಟದ ಸಭೆ ನಡೆಸಿ ಗೃಹ ಸಚಿವ ರಾಜನಾಥ್ ಸಿಂಗ್ ಜತೆ ಚರ್ಚೆ ಮಾಡಿದರು.
ಒಬಾಮಾ ಯಾಕೆ ಹಿಂಗಾಡಿದ್ರು!
ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ಮುಂದಾದ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಕಂಡಿದ್ದು ಹೀಗೆ.
ಬಾಲಿವುಡ್ ಝಲಕ್
ಬಾಲಿವುಡ್ ಚಿತ್ರ ಮೆಹಂಜೋದಾರೋದ ಪ್ರಮೋಷನ್ ನಲ್ಲಿ ಕಾಣಿಸಿಕೊಂಡ ನಟ ಹೃತಿಕ್ ರೋಶನ್ ಮತ್ತು ನಟಿ ಪೂಜಾ ಹೆಗಡೆ.
ಮಳೆ ಅವಾಂತರ
ಮಹಾರಾಷ್ಟ್ರದಲ್ಲಿ ಸುರಿದ ಭಾರೀ ಮಳೆಗೆ ಸೋಲಾಪುರದ ಸಮೀಪ ಮುಳುಗಡೆಯಾಗಿರುವ ಪಂಚಗಂಗಾ ನದಿಯ ಸೇತುವೆ.
ದೇವಾಲಯ ಮುಳುಗಡೆ
ಮಹಾರಾಷ್ಟ್ರದಲ್ಲಿ ಮಳೆ ಅಬ್ಬರ ಮುಂದುವರಿದಿದ್ದು ಸೋಲ್ಲಾಪುರದ ಸಮೀಪ ಮುಳುಗಡೆಯಾದ ದೇವಾಲಯ.