ಶುಕ್ರವಾರದ ಪ್ರಮುಖ ಸುದ್ದಿಗಳ ಚಿತ್ರ ಸಂಪುಟ
ನವದೆಹಲಿ, ಜುಲೈ 31 : ಶುಕ್ರವಾರ ದೇಶದೆಲ್ಲೆಡೆ ಗುರು ಪೂರ್ಣಿಮಾ ಸಂಭ್ರಮ. ಗುರುವಿನ ಗುಲಾಮನಾಗುವ ತನಕ ಮುಕ್ತಿ ಎಂದು ಗುರು ಅಚ್ರೇಕರ್ ಕಾಲಿಗೆರಗಿದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್, ಗುರು ಪೂರ್ಣಿಮಾ ಹಿನ್ನೆಲೆಯಲ್ಲಿ ಭಕ್ತಕೋಟಿಯಿಂದ ಹರಿದ್ವಾರದ ಗಂಗಾನದಿಯಲ್ಲಿ ಪವಿತ್ರ ಸ್ನಾನ. ಕೇಂದ್ರ ಕ್ರೀಡಾ ಸಚಿವರಿಂದ ಅರ್ಜುನ ಪ್ರಶಸ್ತಿ ಸ್ವೀಕರಿಸಿದ ಆಫ್ ಸ್ಪಿನ್ನರ್ ಆರ್. ಅಶ್ವಿನ್...
ಪುಣೆಯ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗವಹಿಸಿದ ರಾಹುಲ್ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ. ಮೈಸೂರಲ್ಲಿ ಸೆರೆ ಸಿಕ್ಕ ಚಿರತೆ, ಜಮ್ಮು ಕಾಶ್ಮೀರ ಬಂದ್ ಗೆ ವ್ಯಾಪಕ ಪ್ರತಿಕ್ರಿಯೆ ಸೇರಿದಂತೆ ದೇಶಾದ್ಯಂತ ನಡೆದ ಪ್ರಮುಖ ಸುದ್ದಿಗಳ ಮೇಲೆ ಚಿತ್ರ ನೋಟ ಇಲ್ಲಿದೆ.[ಪಿಟಿಐ ಚಿತ್ರಗಳು][ಭಾಳ ಒಳ್ಳೇಯವ್ರು ನಮ್ ಮಿಸ್ಸು, ಊರಿಗೆಲ್ಲಾ ಫೇಮಸ್ಸು]
ಗುರುವಿನ ಗುಲಾಮನಾಗುವ ತನಕ
ಗುರು ಪೂರ್ಣಿಮಾ ಹಿನ್ನೆಲೆಯಲ್ಲಿ ಗುರುವಿನ ಗುಲಾಮನಾಗುವ ತನಕ ಮುಕ್ತಿ ಎಂದು ಗುರು ರಮಾಕಾಂತ್ ಅಚ್ರೇಕರ್ ಕಾಲಿಗೆರಗಿದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್.
ಪವಿತ್ರ ಸ್ನಾನ
ಗುರು ಪೂರ್ಣಿಮಾ ಹಿನ್ನೆಲೆಯಲ್ಲಿ ಭಕ್ತಕೋಟಿಯಿಂದ ಹರಿದ್ವಾರದ ಗಂಗಾನದಿಯಲ್ಲಿ ಪವಿತ್ರ ಸ್ನಾನ.
ಅರ್ಜುನ ಪ್ರಶಸ್ತಿ ಪ್ರದಾನ
ಕೇಂದ್ರ ಕ್ರೀಡಾ ಸಚಿವ ಸರ್ಬಾನಂದ ಸೋನೋವಾಲ್ ಅವರಿಂದ ಅರ್ಜುನ ಪ್ರಶಸ್ತಿ ಸ್ವೀಕರಿಸಿದ ಆಫ್ ಸ್ಪಿನ್ನರ್ ಆರ್. ಅಶ್ವಿನ್.
ಬೋನಿಗೆ ಬಿದ್ದ ಚಿರತೆ
ಅರಣ್ಯ ಬಿಟ್ಟು ಮೈಸೂರು ನಗರಕ್ಕೆ ಲಗ್ಗೆ ಇಟ್ಟಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಹಿಡಿದು ಬೋನಿಗೆ ಸೇರಿಸಿದರು.
ವಜ್ರಕ್ಕಿಂತ ಹೊಳಪು
ಬೆಂಗಳೂರಿನ ವಜ್ರದ ಆಭರಣ ಮಳಿಗೆ ಉದ್ಘಾಟನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ನಟಿ ಚಿತ್ರಾಂಗದಾ ಸಿಂಗ್.