ಶಾಂತಿದೂತ ನರೇಂದ್ರ ಮೋದಿ-ಜೀವನಚರಿತ್ರೆ ಲೋಕಾರ್ಪಣೆ
ನವದೆಹಲಿ, ಮೇ 31: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಾರ್ಷಿಕೋತ್ಸವ ಸಂಭ್ರಮವನ್ನು ಇನ್ನಷ್ಟು ಹೆಚ್ಚು ಮಾಡುವ ಸಂದರ್ಭ ಒದಗಿದೆ. ಪ್ರಧಾನಿ ಮೋದಿ ಅವರ ಕುರಿತ ಹೊಸ ಜೀವನಚರಿತ್ರೆ ಲೋಕಾರ್ಪಣೆಗೊಂಡಿದೆ.
Narendra Modi - Harbinger of Prosperity & Apostle of World Peace" ಹೆಸರಿನ ಜೀವನಚರಿತ್ರೆಯನ್ನು ಭಾರತೀಯ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ ಬಾಲಕೃಷ್ಣನ್ ಅವರು ಲೋಕಾರ್ಪಣೆ ಮಾಡಿದರು. 6 ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿ ಮೋದಿ ಅವರು ಕೈಗೊಂಡ ನಿರ್ಧಾರಗಳು, ಭಾರತಕ್ಕಾಗಿ ಕಂಡ ಕನಸುಗಳನ್ನು ಈ ಕೃತಿಯಲ್ಲಿ ದಾಖಲಿಸಲಾಗಿದೆ. ಮೋದಿ ಅವರ ಅಪರೂಪದ ಚಿತ್ರಗಳು, ಬಾಲ್ಯದ ಕಥೆಗಳು, ಕುತೂಹಲ ಅಂಕಿ ಅಂಶಗಳು ಈ ಕೃತಿಯಲ್ಲಿವೆ.
ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಬರೆದ ಪತ್ರದ ಸಾರಾಂಶ
ಕೊರೊನಾವೈರಸ್ ಸೋಂಕು ಹರಡದಂತೆ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಇಂಟರ್ನೆಟ್ ನಲ್ಲಿ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಯಿತು. ಅಂತಾರಾಷ್ಟ್ರೀಯ ಜ್ಯೂರಿಸ್ಟ್ ಕೌನ್ಸಿಲ್, ಭಾರತದ ಬಾರ್ ಅಸೋಸಿಯೇಷನ್ಸ್ ಮುಖ್ಯಸ್ಥ ಆದೀಶ್ ಸಿ ಅಗರ್ವಾಲ, ಅಮೆರಿಕದ ಕವಿ, ಸಾಹಿತಿ ಎಲಿಸಬೇತ್ ಹೊರನ್ ಅವರು ಈ ಕೃತಿಯನ್ನು ರಚಿಸಿದ್ದಾರೆ.
ಪ್ರಿಂಟ್ ಕಾಪಿ, ಇ ಬುಕ್ ಮಾದರಿಯಲಿ ಲಭ್ಯವಿರುವ ಈ ಕೃತಿ, ಇಂಗ್ಲೀಷ್, ಅರೇಬಿಕ್, ಡಚ್, ಫ್ರೆಂಚ್, ಜರ್ಮನ್, ಇಟಾಲಿಯನ್, ಫ್ರೆಂಚ್, ಜರ್ಮನ್, ಜಾಪನೀಸ್, ಮ್ಯಾಂಡ್ರೀನ್, ರಷ್ಯನ್ ಹಾಗೂ ಸ್ಪಾನೀಷ್ ಭಾಷೆಗಳಲ್ಲಿ ಲಭ್ಯವಿದೆ. ಭಾರತೀಯ ಭಾಷೆಗಳಾದ ಹಿಂದಿ, ಕನ್ನಡ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಮರಾಠಿ, ಪಂಜಾಬಿ, ತಮಿಳು, ತೆಲುಗು ಹಾಗೂ ಉರ್ದುವಿನಲ್ಲಿ ಲಭ್ಯವಿದೆ.