ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಕ್ತಿ, ವ್ಯಾಪ್ತಿಯಲ್ಲಿ ಚೀನಾ ಮೀರಿಸಿ ಭಾರತ ಬೆಳೆಯಲಿ: ಭಾಗ್ವತ್

|
Google Oneindia Kannada News

ವಿಜಯದಶಮಿ ಉತ್ಸವ2020ರ ಅಂಗವಾಗಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು ನಾಗ್ಪುರದ ಕೇಂದ್ರ ಕಚೇರಿಯಲ್ಲಿ 50 ಸ್ವಯಂ ಸೇವಕರ ಸಮ್ಮುಖದಲ್ಲಿ ಭಾಷಣ ಮಾಡಿ ಶಕ್ತಿ, ವ್ಯಾಪ್ತಿಯಲ್ಲಿ ಚೀನಾ ದೇಶವನ್ನು ಮೀರಿಸಿ ಭಾರತ ಬೆಳೆಯಲಿ ಎಂದು ಆಶಯ ವ್ಯಕ್ತಪಡಿಸಿದರು. ಭಾಗ್ವತ್ ಅವರ ಭಾಷಣದ ಆಯ್ದಭಾಗ ಇಲ್ಲಿದೆ.... ಮಾಹಿತಿ ಕೃಪೆ: ಸಂವಾದ.ಆರ್ಗ್

ಈ ವರ್ಷದ ವಿಜಯದಶಮಿಯ ಸಂದರ್ಭ ನಮಗೆಲ್ಲರಿಗೂ ತಿಳಿದಿರುವಂತೆ ಸಂಭ್ರಮದ ಸಂಖ್ಯೆಯ ದೃಷ್ಟಿಯಿಂದ ಕಡಿಮೆಯಾಗಿದೆ. ಅದಕ್ಕೆ ಕಾರಣವೇನೆಂಬುದನ್ನೂ ನಾವು ಅರಿತಿದ್ದೇವೆ, ಕೊರೋನಾ ವೈರಾಣುವಿನ ಸಾಮೂಹಿಕ ಹರಡುವಿಕೆಯನ್ನು ತಡೆಯಲೋಸುಗ ಸಾಮಾಜಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲಾಗಿದೆ.

ಈ ವರ್ಷದ ಮಾರ್ಚಿ ತಿಂಗಳಿನಿಂದ ಕೊರೋನಾ ಸಾಂಕ್ರಾಮಿಕದ ಚರ್ಚೆ ವಿಶ್ವದೆಲ್ಲೆಡೆಯ ವಿದ್ಯಮಾನಗಳನ್ನು ಬದಿಗೊತ್ತಿದೆ. ಕಳೆದ ವರ್ಷದ ವಿಜಯದಶಮಿಯಿಂದ ಈ ವರ್ಷದ ವರೆಗೆ ಹಲವು ಗಮನಾರ್ಹ ಸಂಗತಿಗಳು ಘಟಿಸಿವೆ. 2019ರ ವಿಜಯದಶಮಿಗೆ ಮುನ್ನವೇ ವಿಧಿ 370ರ ರದ್ದತಿ ಸಾಂವಿಧಾನಿಕ ರೀತಿಯಲ್ಲಿ ನಡೆಯಿತು. ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯವು ದೀಪಾವಳಿಯ ಪರ್ವದ ನಂತರ 9ನೇ ನವೆಂಬರ್ 2019ರಂದು ರಾಮ ಜನ್ಮಭೂಮಿ ವಿವಾದದ ಕುರಿತಾಗಿ ಸ್ಪಷ್ಟವಾದ ಹಾಗೂ ಐತಿಹಾಸಿಕ ತೀರ್ಪುನ್ನು ನೀಡಿತು.

ನ್ಯಾಯಾಲಯದ ತೀರ್ಪಿಗಾಗಿ ಭಾರತೀಯರು ಸಂಯಮದಿಂದ ಕಾದು ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರದ ನಿರ್ಮಾಣಕ್ಕಾಗಿ ಭೂಮಿಪೂಜೆ, ಶಿಲಾನ್ಯಾಸದ ಸಮಾರಂಭವನ್ನು ಭಕ್ತಿ ಹಾಗೂ ಹಬ್ಬದ ಸಡಗರದೊಂದಿಗೆ ಸಂಭ್ರಮಿಸಿದ್ದು ಗೋಚರವಾಯಿತು. ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ)ಯನ್ನು ನ್ಯಾಯಯುತವಾಗಿ ಜಾರಿಗೆ ತರಲಾಯಿತು.

ಪೌರತ್ವ ಕಾಯಿದೆ ಧರ್ಮವನ್ನು ವಿರೋಧಿಸುವುದಿಲ್ಲ

ಪೌರತ್ವ ಕಾಯಿದೆ ಧರ್ಮವನ್ನು ವಿರೋಧಿಸುವುದಿಲ್ಲ

ನಮ್ಮ ನೆರೆಯ ದೇಶಗಳಲ್ಲಿ ನಮ್ಮ ಸಹೋದರ ಸಹೋದರಿಯರಿಗೆ ನೀಡಲಾಗುವ ಕಿರುಕುಳ, ಉಪದ್ರವಗಳಿಗೆ ಹೆದರಿ ನಮ್ಮ ದೇಶಕ್ಕೆ ವಲಸೆ ಬಂದು ಇಲ್ಲಿ ಆಶ್ರಯ ಪಡೆಯುವವರಿಗೆ ಪೌರತ್ವ ನೀಡುವ ಕಾರ್ಯಕ್ಕೆ ಈ ಕಾಯಿದೆಯಿಂದ ಸಾಧ್ಯವಾಯಿತು. ಈ ನೆರೆಯ ದೇಶಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುತ್ತಿರುವುದು ತಿಳಿದಿರುವ ವಿಷಯವೇ. ಪೌರತ್ವ ಕಾಯಿದೆಗೆ ಮಾಡಿರುವ ಈ ತಿದ್ದುಪಡಿ ಯಾವುದೇ ಧರ್ಮವನ್ನು ವಿರೋಧಿಸುವುದಿಲ್ಲ. ವಿದೇಶಿಗರಿಗೆ ನಮ್ಮ ಸಂವಿಧಾನದ ಅಡಿಯಲ್ಲಿ ನೀಡಲಾಗುವ ಪೌರತ್ವದಲ್ಲಿ ಯಾವುದೇ ಬದಲಾವಣೆಯನ್ನು ಈ ತಿದ್ದುಪಡಿಯಿಂದ ಮಾಡಲಾಗಿಲ್ಲ.

ಆದರೆ ಈ ಹೊಸ ಕಾನೂನನ್ನು ವಿರೋಧಿಸುವವರು ನಮ್ಮ ಮುಸಲ್ಮಾನ ಭ್ರಾತೃಗಳಲ್ಲಿ ವಿಷ ಬಿತ್ತುವ ಯೋಜನೆ ರೂಪಿಸಿ, ಮುಸಲ್ಮಾನ ಜನಸಂಖ್ಯೆಯನ್ನು ನಿಯಂತ್ರಿಸಲು ಈ ಕಾನೂನನ್ನು ರಚಿಸಲಾಗಿದೆ ಎಂಬ ಮಿಥ್ಯವನ್ನು ಸಾರಿದರು. ಪ್ರತಿಭಟನೆಯ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡುವ ಕಾರ್ಯದಲ್ಲಿ ಅವಕಾಶವಾದಿಗಳು ಈ ಸೂಕ್ಷ್ಮ ಪರಿಸ್ಥಿತಿಯನ್ನು ಬಳಸಿಕೊಂಡರು. ಇದರಿಂದಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ ಸಾಮಾಜಿಕ ಸ್ವಾಸ್ಥ್ಯಕ್ಕೂ ಅಪಾಯವುಂಟಾಯಿತು. ಈ ಸಮಸ್ಯೆಯ ಮೂಲವನ್ನು ಹುಡುಕಿ ಬಗೆಹರಿಸುವ ಮುನ್ನವೇ ಕೊರೋನಾ ಮಹಾಮಾರಿ ಒಳನುಸುಳಿ ಸಮಸ್ತ ನಿಯಂತ್ರಣ ತೆಗೆದುಕೊಂಡಿತು. ದಂಗೆಕೋರರು, ಅವಕಾಶವಾದಿಗಳು ಸಂಘರ್ಷದ ಕಿಚ್ಚನ್ನು ಹೊತ್ತಿಸಬೇಕೆಂದು ಹವಣಿಸುತ್ತಿದ್ದಾರೆ. ಸಾಮೂಹಿಕ ಪ್ರಜ್ಞೆಯಿಂದಾಗಿಯೋ ಅಥವಾ ಮಾಧ್ಯಮಗಳಲ್ಲಿ ಕರೋನಾದ ಅತಿಯಾದ ಚರ್ಚೆಗಳಿಂದಾಗಿ ಇಂತಹ ಚಟುವಟಿಕೆಗಳಿಗೆ ಉತ್ತೇಜನ ನೀಡುವಂತಹ ಸುದ್ದಿಗಳಿಗೆ ಪ್ರಾಮುಖ್ಯತೆ ಸಿಗುತ್ತಿಲ್ಲ.

ಕೊರೋನಾ ವಿಪತ್ತನ್ನು ಧೈರ್ಯವಾಗಿ ಎದುರಿ

ಕೊರೋನಾ ವಿಪತ್ತನ್ನು ಧೈರ್ಯವಾಗಿ ಎದುರಿ

ವಿಶ್ವದೆಲ್ಲೆಡೆ ಒಂದೇ ರೀತಿಯ ಸನ್ನಿವೇಶವಿದೆ. ಭಾರತ ಉಳಿದ ದೇಶಗಳ ತುಲನೆಯಲ್ಲಿ ಕೊರೋನಾ ವಿಪತ್ತನ್ನು ಧೈರ್ಯವಾಗಿ ಎದುರಿಸಿ ಸಮರ್ಥವಾಗಿ ಮುನ್ನುಗ್ಗುತ್ತಿದೆ. ಕೊರೋನಾವನ್ನು ನಾವು ದುರ್ಬಲಗೊಳಿಸಿದ್ದುದರ ಹಿಂದೆ ಹಾಗೂ ಇತರ ದೇಶಗಳು ಆ ಸಾಧನೆ ಮಾಡದ ಹಿಂದೆ ಹಲವು ಕಾರಣಗಳಿವೆ. ನಮ್ಮ ಸರ್ಕಾರಿ, ಆಡಳಿತ ವರ್ಗಗಳು ಪ್ರಾಮಾಣಿಕ ಪ್ರಯತ್ನವನ್ನು ಮುಂದಿಟ್ಟು ಕಾರ್ಯ ನಿರ್ವಹಿಸಿದವು. ನಾಗರಿಕರನ್ನು ಎಚ್ಚರಿಸುತ್ತಾ, ತುರ್ತು ನಿಗಾ ಘಟಕಗಳನ್ನು ರಚಿಸುತ್ತಾ ಸಮರ್ಥವಾಗಿ ಕೊರೋನಾ ನಿಯಂತ್ರಿಸುವ ಕಾರ್ಯವನ್ನು ನಿರ್ವಹಿಸಿದರು. ಮಾಧ್ಯಮದವರು ಈ ಸುದ್ದಿಯನ್ನು ಸದಾ ಬಿತ್ತರಿಸುತ್ತಿದ್ದರು.

ಜನಸಾಮಾನ್ಯರಿಗೆ ಇದರಿಂದಾಗಿ ಅಪಾರವಾದ ಭಯದ ವಾತಾವರಣ ಉಂಟಾಯಿತಾದರೂ ಸಮಾಜದ ನಿಯಮಗಳನ್ನು ಪಾಲಿಸುತ್ತಾ, ಸಂಯಮವನ್ನು ಕಾಪಾಡುತ್ತಾ, ಜಾಗರೂಕರಾಗತೊಡಗಿದರು. ಸರ್ಕಾರಿ ಸೇವೆಯಲ್ಲಿನ ಅಧಿಕಾರಿಗಳು, ಯಾವುದೇ ವೈದ್ಯಕೀಯ ಕ್ರಮವನ್ನು ಪಾಲಿಸುವ ವೈದ್ಯರು, ಆರಕ್ಷಕ ದಳದವರು, ಸ್ವಚ್ಛತಾಕರ್ಮಿಗಳು ತಮ್ಮ ಜವಾಬ್ದಾರಿಗಳನ್ನು ನಿಷ್ಠೆಯಿಂದ ಪಾಲಿಸಿ ರೋಗಿಗಳ ಸೇವೆಯಲ್ಲಿ ತೊಡಗಿದರು.

ಸಾಮಾಜಿಕ ಅಂತರವನ್ನು ತಮ್ಮ ಕುಟುಂಬದವರೊಂದಿಗೂ ಪಾಲಿಸುತ್ತಾ, ಕೊರೋನಾ ಯೋಧರು ತಮ್ಮ ಜೀವವನ್ನು ಒತ್ತೆ ಇಟ್ಟು, ವೈರಾಣು ಒಡ್ಡುವ ಜೀವ ಭಯವನ್ನು ಎದುರಿಸಿ, ಧೈರ್ಯವಾಗಿ ನಿಂತು ದಿನವಿಡೀ ಕಾರ್ಯ ನಿರ್ವಹಿಸಿದರು.

ಸ್ವಚ್ಛತೆ, ನೈರ್ಮಲ್ಯ, ಆರೋಗ್ಯಕರ ಜೀವನಶೈಲಿ

ಸ್ವಚ್ಛತೆ, ನೈರ್ಮಲ್ಯ, ಆರೋಗ್ಯಕರ ಜೀವನಶೈಲಿ

ದೇಶದ ನಾಗರಿಕರು ತಮ್ಮ ಕೈಲಾದ ಸಹಾಯವನ್ನು ನೀಡಿದರು. ಸಮಾಜದಲ್ಲಿನ ತಮ್ಮ ಬಂಧುಗಳಿಗೆ ನೆರವಾಗಿ ನಿಂತರು. ಇಂತಹ ಕಠಿಣ ಸಮಯದಲ್ಲಿ ತಮ್ಮ ಅವಕಾಶಕ್ಕಾಗಿ ದುರ್ಬಲರನ್ನು ಶೋಷಿಸುವ ಘಟನೆಗಳು ಅಲ್ಲಲ್ಲಿ ನಡೆದವಾದರೂ, ಸರ್ಕಾರಿ ಆಡಳಿತಾತ್ಮಕ ಸಂಸ್ಥೆಗಳು ಮತ್ತು ಸಂಘ ಸಂಸ್ಥೆಗಳ ನಡುವಿನ ಭಾವಾತಿರೇಕತೆ, ಸಹಕಾರ ಮತ್ತು ಪರಸ್ಪರ ನಂಬಿಕೆಗಳು ಎದ್ದುತೋರುತ್ತಿದ್ದವು. ದೇಶದ ಮಾತೆಯರು ಸ್ವ-ಪ್ರೇರಣೆಯಿಂದ ಸಮಾಜದ ಕಾರ್ಯದಲ್ಲಿ ಧುಮುಕಿದರು. ಮಹಾಮಾರಿಯಿಂದಾಗಿ ಹಸಿವಿನಿಂದ ಬಳಲುತ್ತಿದ್ದವರು, ಕೆಲಸ ಕಳೆದುಕೊಂಡವರು, ಸ್ಥಳಾಂತರಗೊಂಡವರು ತಾಳ್ಮೆ ಸಹಿಷ್ಣುತೆಯನ್ನು ಮೆರೆದರು. ತಮ್ಮ ಸಮಸ್ಯೆಗಳನ್ನು ಬದಿಗೊತ್ತಿ, ಇತರರ ಸಮಸ್ಯೆಯನ್ನು ಬಗೆಹರಿಸುವವರು ಮುನ್ನೆಲೆಗೆ ಬಂದ ಎಷ್ಟೋ ನಿದರ್ಶನಗಳಿವೆ.

ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ತಲುಪಿಸುವುದು, ಅವರಿಗೆ ಆಹಾರ ವ್ಯವಸ್ಥೆ, ತಂಗಲು ವ್ಯವಸ್ಥೆ, ಆಹಾರ- ಔಷಧದ ಅವಶ್ಯಕತೆ ಇದ್ದವರಿಗೆ ಅದನ್ನು ಪೂರೈಸುವುದು ಸಾಗಿತು. ಏಕತೆ ಹಾಗೂ ಭಾವಾತಿರೇಕತೆಯ ಸಮರ್ಥ ಉದಾಹರಣೆಗಳನ್ನು ಇಂತಹ ಸೇವಾ ಕಾರ್ಯಗಳಲ್ಲಿ, ಸಮಾಜದ ಅತಿ ದೊಡ್ಡ ವಿಪತ್ತನ್ನು ಎದುರಿಸಲು ಎಲ್ಲರೂ ಮುಂದಾದರು. ಈ ಅವಧಿಯಲ್ಲಿ ನಮ್ಮ ಪಾರಂಪರಿಕ ಅಭ್ಯಾಸಗಳಾದ ಸ್ವಚ್ಛತೆ, ನೈರ್ಮಲ್ಯ, ಆರೋಗ್ಯಕರ ಜೀವನಶೈಲಿ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಆಯುರ್ವೇದ ವಿಜ್ಞಾನದ ಬಳಕೆ ಉಪಯುಕ್ತವೆಂದು ಸಾಬೀತಾದವು.

ತಾಳ್ಮೆ, ಸಾಮೂಹಿಕತೆ ಮತ್ತು ಆತ್ಮವಿಶ್ವಾಸಗಳ ಅನುಭವ

ತಾಳ್ಮೆ, ಸಾಮೂಹಿಕತೆ ಮತ್ತು ಆತ್ಮವಿಶ್ವಾಸಗಳ ಅನುಭವ

ಸಮಾಜದ ಏಕರೂಪತೆ ಮತ್ತು ಏಕತೆ, ಕಷ್ಟದ ಸಮಯದಲ್ಲಿ ಸಹಾನುಭೂತಿ ಮತ್ತು ಸಹಕಾರ; "ಸಾಮಾಜಿಕ ಬಂಡವಾಳ" ಎಂದು ಕರೆಯಲ್ಪಡುವ ಈ ಎಲ್ಲ ಅಂಶಗಳನ್ನು ಈ ಸಮಯದಲ್ಲಿ ಅನುಭವಿಸಿದಂತಾಗಿದೆ. ಇದು ನಮ್ಮ ಶತಮಾನಗಳಷ್ಟು ಹಳೆಯ ಸಾಂಸ್ಕೃತಿಕ ನೀತಿಯನ್ನು ಪ್ರತಿಬಿಂಬಿಸುತ್ತದೆ. ಅನೇಕರಿಗೆ, ಒಂದು ರೀತಿಯ ತಾಳ್ಮೆ, ಸಾಮೂಹಿಕತೆ ಮತ್ತು ಆತ್ಮವಿಶ್ವಾಸಗಳ ಅನುಭವ ಸ್ವಾತಂತ್ರ್ಯಾನಂತರದಲ್ಲಿ ಮೊದಲನೆಯದು. ಪರಿಚಿತ, ಅಪರಿಚಿತ ಸ್ವಯಂಸೇವಕರು, ಜೀವಂತವಾಗಿರುವವರು ಮತ್ತು ಸೇವೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದವರು, ವೈದ್ಯರು, ಸ್ವಚ್ಛತಾಕರ್ಮಿಗಳು ಮತ್ತು ಸಮಾಜದ ವಿವಿಧ ವರ್ಗದ ಎಲ್ಲರಿಗೂ ನಾನು ಗೌರವಯುತವಾಗಿ ನಮಸ್ಕರಿಸುತ್ತೇನೆ. ಅವರೆಲ್ಲರೂ ಶ್ಲಾಘನೆಗೆ ಪಾತ್ರರು. ಪ್ರಾಣ ತ್ಯಾಗ ಮಾಡಿದ ಪ್ರತಿಯೊಬ್ಬರಿಗೂ ನಮ್ಮ ಪ್ರಾಮಾಣಿಕ ಗೌರವ ಸಲ್ಲಿಸೋಣ.

ಪ್ರಸ್ತುತ ಸನ್ನಿವೇಶದಿಂದ ಹೊರಬರಲು ವಿಭಿನ್ನ ರೀತಿಯ ಸೇವಾ ಉಪಕ್ರಮಗಳ ಅಗತ್ಯವಿದೆ. ಶಿಕ್ಷಣ ಸಂಸ್ಥೆಗಳನ್ನು ಪುನರಾರಂಭಿಸುವುದು, ಶಿಕ್ಷಕರಿಗೆ ಸೂಕ್ತ ಪರಿಹಾರ ನೀಡುವುದು, ವಿದ್ಯಾರ್ಥಿಗಳನ್ನು ತಮ್ಮ ಶಾಲಾ ಕಾಲೇಜುಗಳಿಗೆ ಶುಲ್ಕವನ್ನು ಪಾವತಿಸಿ, ಕಳುಹಿಸುವುದು - ಈ ಕಾರ್ಯಗಳು ಪ್ರಯಾಸಕರವಾಗಿರುತ್ತವೆ. ಆದಾಯವೇ ನಿಂತುಹೋದ ಶಾಲೆಗಳಿಗೆ ತಮ್ಮ ಶಿಕ್ಷಕರಿಗೆ ಸಂಬಳ ಪಾವತಿಸಲು ಸಾಧ್ಯವಾಗುತ್ತಿಲ್ಲ. ಉದ್ಯೋಗ ಕಳೆದುಕೊಂಡ ಅಥವಾ ವ್ಯಾಪಾರ ವ್ಯವಹಾರಗಳನ್ನು ನಿಲ್ಲಿಸಿದ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಒದಗಿಸುವುದು ಕಷ್ಟ. ಶಾಲೆಗಳ ಪ್ರಾರಂಭ, ಶಿಕ್ಷಕರ ಸಂಬಳ ಮತ್ತು ವಿದ್ಯಾರ್ಥಿಗಳ ಶಿಕ್ಷಣವನ್ನು ಖಚಿತಪಡಿಸಿಕೊಳ್ಳಲು ನಾವು ಸೇವಾ ಯೋಜನೆಯನ್ನು ರೂಪಿಸಬೇಕಾಗುತ್ತದೆ. ಸ್ಥಳಾಂತರಗೊಂಡವರು ನಿರುದ್ಯೋಗಿಗಳಾಗಿದ್ದಾರೆ. ಪರ್ಯಾಯ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳುವುದು ಅವರಿಗೆ ಅನಿವಾರ್ಯವಾಗಿದೆ.

ಕೌಶಲ್ಯರಹಿತರಿಗೆ ತರಬೇತಿ ನೀಡುವುದು ಅತ್ಯಗತ್ಯ

ಕೌಶಲ್ಯರಹಿತರಿಗೆ ತರಬೇತಿ ನೀಡುವುದು ಅತ್ಯಗತ್ಯ

ನೂತನ ವಲಯದಲ್ಲಿ ಉದ್ಯೋಗ ಪಡೆಯುವುದು ಪೂರ್ವ ತರಬೇತಿಯನ್ನು ಕಡ್ಡಾಯಗೊಳಿಸುತ್ತದೆ. ಇಂದು ಸ್ಥಳಾಂತರಗೊಂಡವರು ಎದುರಿಸುತ್ತಿರುವ ಸಮಸ್ಯೆಗಳು ಇವು. ವಲಸೆ ಕಾರ್ಮಿಕರ ಸ್ಥಳಾಂತರದಿಂದಾಗಿ ಅಪೂರ್ಣವಾಗಿ ಉಳಿದ ಕಾರ್ಯವನ್ನು ಪೂರ್ಣಗೊಳಿಸಲು ಬದಲಿ ನೌಕರರನ್ನು ಹುಡುಕುವುದೂ ಒಂದು ಸವಾಲಾಗಿ ಪರಿಣಮಿಸುತ್ತಿದೆ. ಆದ್ದರಿಂದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮತ್ತು ಕೌಶಲ್ಯರಹಿತರಿಗೆ ತರಬೇತಿ ನೀಡುವುದು ಅತ್ಯಗತ್ಯ. ಕುಟುಂಬಗಳು ಅಂತಹ ಅಭಾವವನ್ನು ಎದುರಿಸುತ್ತಿರುವ ಸಂದರ್ಭಗಳಲ್ಲಿ, ಮನೆಗಳಲ್ಲಿ ಮಾನಸಿಕ ಒತ್ತಡವು ಹೆಚ್ಚಾಗುತ್ತದೆ. ಅಪರಾಧ, ಖಿನ್ನತೆ ಮತ್ತು ಆತ್ಮಹತ್ಯೆಯಂತಹ ನಕಾರಾತ್ಮಕ ನಿಲುವುಗಳನ್ನು ತಡೆಯಲು ಈ ಸಮಯದಲ್ಲಿ ವ್ಯಾಪಕವಾದ ಸಮಾಲೋಚನೆ ಮತ್ತು ಬೆಂಬಲ ಸೇವೆಗಳ ಅವಶ್ಯಕತೆಯಿದೆ.

ಜಗತ್ತಿಗೆ ವೈರಸ್ ಬಗ್ಗೆ ಸಂಪೂರ್ಣ ತಿಳುವಳಿಕೆ ಇಲ್ಲದಾಗಿದೆ. ಇದು ಟ್ರಾನ್ಸ್‌ಮ್ಯೂಟಬಲ್ ರೋಗಕಾರಕವಾಗಿದ್ದು, ವೇಗವಾಗಿ ಸಂವಹನಗೊಳ್ಳುತ್ತದೆ; ಆದರೆ ಅದರ ಉಗ್ರತೆ ಕಡಿಮೆಯಾಗುತ್ತಿದೆ - ಇಷ್ಟನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಆದ್ದರಿಂದ, ಈ ರೋಗಕಾರಕದಿಂದ ಹೆಚ್ಚು ಸಮಯ ಕಾಪಾಡಿಕೊಳ್ಳುವುದು ಅತ್ಯಗತ್ಯ. ಅದೇ ಸಮಯದಲ್ಲಿ, ಸಹಜೀವಿಗಳ ಮೇಲೆ ಅದು ನಡೆಸುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ದಾಳಿಗೆ ಪರಿಹಾರವನ್ನು ಕಂಡುಹಿಡಿಯುವ ಬಗ್ಗೆ ದೀರ್ಘಕಾಲೀನ ಗಮನವನ್ನು ಹರಿಸಬೇಕಿದೆ. ಭಯವು ನಮ್ಮನ್ನು ದುರ್ಬಲಗೊಳಿಸಲು ಬಿಡಬಾರದು, ನಾವು ಎಚ್ಚರಿಕೆಯಿಂದ ಮತ್ತು ಕಾರ್ಯತಂತ್ರ ರೂಪಿಸಿ ಮುಂದುವರೆಯಬೇಕಾಗಿದೆ. ಸಾಮಾಜಿಕ ಜೀವನವು ಸಾಮಾನ್ಯ ಸ್ಥಿತಿಗೆ ತಲುಪುವುದರೊಂದಿಗೆ, ಸಾಮಾಜಿಕ ನಿಯಮಗಳನ್ನು ಪಾಲಿಸುವುದು ಮತ್ತು ಇತರರನ್ನು ನಿಯಮಗಳಿಗೆ ಬದ್ಧರನ್ನಾಗಿಸಲು ಪ್ರೇರೇಪಿಸುವುದು ನಮ್ಮೆಲ್ಲರ ನೈತಿಕ ಜವಾಬ್ದಾರಿಯಾಗಿದೆ

“ನ್ಯೂ-ನಾರ್ಮಲ್” ಎಂಬ ನುಡಿಗಟ್ಟು

“ನ್ಯೂ-ನಾರ್ಮಲ್” ಎಂಬ ನುಡಿಗಟ್ಟು

ಈ ಸಾಂಕ್ರಾಮಿಕ ರೋಗದ ವಿರುದ್ಧದ ಯುದ್ಧದಲ್ಲಿ ನಮ್ಮ ಸಮಾಜದ ಇತರ ಹಲವು ಅಂಶಗಳು ಸ್ಪಷ್ಟವಾಗಿ ಗೋಚರಿಸತೊಡಗಿದವು. ಪ್ರಪಂಚದಾದ್ಯಂತ ಆತ್ಮಾವಲೋಕನದ ಪರವಾದ ಬದಲಾವಣೆಯ ಪ್ರವೃತ್ತಿ ಆರಂಭಗೊಂಡಿದೆ. "ನ್ಯೂ-ನಾರ್ಮಲ್" ಎಂಬ ನುಡಿಗಟ್ಟು ಹೆಚ್ಚಾಗಿ ಸಂಭಾಷಣೆಗಳಲ್ಲಿ ಬರುತ್ತದೆ. ಕರೋನಾ ಸಾಂಕ್ರಾಮಿಕವು ಜೀವನವನ್ನು ಸಂಪೂರ್ಣ ಸ್ಥಗಿತಗೊಳಿಸಿದೆ, ಮನುಷ್ಯನು ಯಾಂತ್ರಿಕವಾಗಿ ನಡೆಸುತ್ತಿದ್ದ ಚಟುವಟಿಕೆ, ಜೀವನಶೈಲಿಯನ್ನು ಮೊಟಕುಗೊಳಿಸುವಂತೆ ಒತ್ತಾಯಿಸಿದೆ. ಆ ಚಟುವಟಿಕೆಗಳ ಯೋಗ್ಯತೆಯ ಮೌಲ್ಯಮಾಪನವು ಮಾನವ ಜೀವನದ ಮೇಲೆ ಆಕ್ರಮಣ ಮಾಡಿದ ಮೇಲ್ನೋಟದ ಆಚರಣೆಗಳು ಅನಗತ್ಯವೆಂದು ಸ್ಪಷ್ಟವಾಯಿತು.

ಅಗತ್ಯವಾದವುಗಳು ಮಾತ್ರ ಅವನ ಜೀವನಕ್ಕೆ ಹತ್ತಿರವಾಗತೊಡಗಿವೆ. ಇನ್ನು ಕೆಲವು ಚಟುವಟಿಕೆಗಳು ಸಂಪೂರ್ಣವಾಗಿ ಮಸುಕಾಗಲಿಲ್ಲವಾದರೂ ಕಡಿಮೆಯಾಗಿವೆ. ಲಾಕ್‌ಡೌನ್ ಮಾಡಿದ ಒಂದು ವಾರದೊಳಗೆ, ನಾವು ಉಸಿರಾಡುವ ಗಾಳಿಯ ಗುಣಮಟ್ಟದಲ್ಲಿ ಗಮನಾರ್ಹ ವ್ಯತ್ಯಾಸವನ್ನು ನಾವು ಗಮನಿಸಿದ್ದೇವೆ. ನದಿ, ಝರಿ ಮತ್ತು ಕೊಳಗಳಂತಹ ಜಲಮೂಲಗಳು ಶುದ್ಧ ನೀರನ್ನು ಒಯ್ಯಲಾರಂಭಿಸಿದವು. ನೆರೆಯ ಉದ್ಯಾನವನಗಳು ಮತ್ತು ನಗರ ಪ್ರದೇಶಗಳಲ್ಲಿ ಪಕ್ಷಿಗಳು ಮತ್ತು ಇತರ ಜೀವಿಗಳ ಇನಿ ದನಿ ಮಾನವರಿಗೆ ಸ್ಮರಣೆಯಾಗತೊಡಗಿದವು. ಸಂಪತ್ತನ್ನು ಒಟ್ಟುಗೂಡಿಸುವ ಮತ್ತು ಉಪಭೋಗದ ಭರಾಟೆಯಲ್ಲಿ, ನಾವು ಕೆಲವು ಮೂಲಭೂತ ಜೀವನ ಕಾರ್ಯಗಳಿಂದ ನಮ್ಮನ್ನು ನಾವು ದೂರ ಉಳಿಸಿಕೊಂಡಿದ್ದೆವು. ಅವು ನಮ್ಮ ಜೀವದಲ್ಲಿ ಮತ್ತೆ ಬಂದು ಅರ್ಥ , ಸಂತೋಷವನ್ನು ಸೇರಿಸಿವೆ.

ಪ್ರಕೃತಿಯೊಂದಿಗೆ ಸಾಮರಸ್ಯದ ಸಹಬಾಳ್ವೆ

ಪ್ರಕೃತಿಯೊಂದಿಗೆ ಸಾಮರಸ್ಯದ ಸಹಬಾಳ್ವೆ

ಕೆಲವು ಸದ್ಗುಣಗಳ ಮೌಲ್ಯವನ್ನು ನಾವು ಗಮನದಲ್ಲಿಟ್ಟುಕೊಂಡಿದ್ದೇವೆ. ಕರೋನಾ ಸಾಂಕ್ರಾಮಿಕವು ನಿಯಮಿತ-ಅನಿಯಮಿತ ಮತ್ತು ಶಾಶ್ವತ-ತಾತ್ಕಾಲಿಕಗಳ ಪ್ರತ್ಯೇಕಿಸುವ ಬುದ್ಧಿವಂತಿಕೆಯನ್ನು ಮನುಷ್ಯರಿಗೆ ನೀಡಿದೆ. ಅನೇಕ ಕುಟುಂಬಗಳಲ್ಲಿ ಪರಿವರ್ತನೆಯ ಮಾರ್ಗಗಳೊಂದಿಗೆ ಹೊಂದಿಕೆಯಾಗುವ ಸುಸ್ಥಿರ ಜೀವನಶೈಲಿಯನ್ನು ಸಕ್ರಿಯವಾಗಿ ಚರ್ಚಿಸುತ್ತಿರುವುದರಿಂದ, ಸಾಂಸ್ಕೃತಿಕ ನೀತಿಯ ಅರ್ಹತೆಯ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳುತ್ತಿದ್ದಾರೆ. ಕುಟುಂಬ ವ್ಯವಸ್ಥೆಗಳ ಮಹತ್ವ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದ ಸಹಬಾಳ್ವೆಯ ಅಗತ್ಯವನ್ನು ಮಾನವರು ಮತ್ತೊಮ್ಮೆ ಅರಿತುಕೊಂಡಿದ್ದಾರೆ.

ಇತ್ತೀಚಿನವರೆಗೂ ವ್ಯಾಪಾರಿ ಶಕ್ತಿಗಳ ಆಧಾರದ ಮೇಲೆ ಜಗತ್ತನ್ನು ಸಂಯೋಜಿಸುವ ತತ್ತ್ವಶಾಸ್ತ್ರವು ಮಾನವನ ಕಲ್ಪನೆಯಲ್ಲಿ ಪ್ರಾಬಲ್ಯ ಸಾಧಿಸಿತ್ತು. ಆದರೆ ಇತ್ತೀಚಿನ ಘಟನೆಗಳೊಂದಿಗೆ, ಪ್ರತಿ ದೇಶದ ವಿಶಿಷ್ಟ ಸಾಮರ್ಥ್ಯ ಮತ್ತು ಸ್ವತ್ತುಗಳನ್ನು ಉತ್ತೇಜಿಸುವ ಮೂಲಕ ಜೀವನವನ್ನು ಕಾಪಾಡುವ ಮತ್ತು ಅಂತಾರಾಷ್ಟ್ರೀಯ ಸಹಕಾರವನ್ನು ಚಲಾಯಿಸುವ ಕಲ್ಪನೆಯು ಪ್ರಾರಂಭವಾಗಿದೆ. 'ಸ್ವದೇಶಿ' ಸಿದ್ಧಾಂತವು ಮತ್ತೊಮ್ಮೆ ಪ್ರಕಾಶಿಸುತ್ತಿದೆ. ಪ್ರಸ್ತುತ ಭಾರತೀಯ ಸನ್ನಿವೇಶದ ದೃಷ್ಟಿಯಿಂದ ಈ ಸಿದ್ಧಾಂತವು ಪುನರ್ ವ್ಯಾಖ್ಯಾನಿಸಲು ಮತ್ತು ನಮ್ಮ ಪೂರ್ವ ಮೌಲ್ಯ, ಸಂಪ್ರದಾಯಗಳಿಗೆ ನಮ್ಮನ್ನು ಕರೆದೊಯ್ಯುವ ಮಾರ್ಗಗಳನ್ನು ಪುನರ್ನಿರ್ಮಿಸುವ ಸಮಯ ಇದಾಗಿದೆ.

ರಾಕ್ಷಸೀ ಆಕಾಂಕ್ಷೆ ತಟಸ್ಥಗೊಳಿಸುವುದೇ ಏಕೈಕ ಮಾರ್ಗ

ರಾಕ್ಷಸೀ ಆಕಾಂಕ್ಷೆ ತಟಸ್ಥಗೊಳಿಸುವುದೇ ಏಕೈಕ ಮಾರ್ಗ

ಈ ಸಾಂಕ್ರಾಮಿಕ ರೋಗದ ಹರಡುವಿಕೆಯಲ್ಲಿ ಚೀನಾ ದೇಶದ ಪಾತ್ರದ ಬಗ್ಗೆ ಚರ್ಚೆಗಳು ಇವೆಯಾದರೂ ಭಾರತದ ಗಡಿಗಳಲ್ಲಿ ಭಯೋತ್ಪಾದನೆಯನ್ನು ಬಿಚ್ಚಿಡುವ ಮೂಲಕ ಮತ್ತು ನಮ್ಮ ಪ್ರದೇಶದ ಮೇಲೆ ಆಕ್ರಮಣ ಮಾಡುವ ಉತ್ಸಾಹಭರಿತ ಪ್ರಯತ್ನಗಳ ಮೂಲಕ ಅವರ ಸಂಪತ್ತನ್ನು ದುರುಪಯೋಗಪಡಿಸಿಕೊಳ್ಳುವುದು ಇಡೀ ಜಗತ್ತಿಗೆ ಚಿರಪರಿಚಿತವಾಗಿದೆ. ಭಾರತೀಯ ರಕ್ಷಣಾ ಪಡೆಗಳು, ಸರ್ಕಾರ ಮತ್ತು ಜನರು ಈ ದಾಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿದರು.

ಬಲವಾದ ನಿರ್ಣಯದ ಈ ಉದಾಹರಣೆ, ಸ್ವಾಭಿಮಾನ ಮತ್ತು ಧೈರ್ಯವನ್ನು ಚಲಾಯಿಸುವುದು ಚೀನಾವನ್ನು ದಿಗ್ಭ್ರಮೆಗೊಳಿಸಿದೆ. ನಾವು ಜಾಗರೂಕರಾಗಿರಬೇಕು ಮತ್ತು ದೃಢವಾಗಿರಬೇಕು. ಹಿಂದಿನಿಂದಲೂ ಸಹ, ಚೀನಾ ವಿಸ್ತರಣಾವಾದಿ ಮನೋಭಾವವನ್ನು ಮೈಗೂಡಿಸಿಕೊಂಡಿತ್ತು. ನಮ್ಮ ನೆರೆಹೊರೆಯವರೊಂದಿಗೆ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಸಹಕಾರಿ ಸಂಬಂಧಗಳನ್ನು ಭದ್ರಪಡಿಸುವಲ್ಲಿ, ಆರ್ಥಿಕವಾಗಿ, ಕಾರ್ಯತಂತ್ರ ರೂಪಿಸಿ ಚೀನಾಕ್ಕಿಂತ ಮೇಲೇರುವುದು ಹಾಗೂ ಅವರ ರಾಕ್ಷಸೀ ಆಕಾಂಕ್ಷೆಗಳನ್ನು ತಟಸ್ಥಗೊಳಿಸುವುದೇ ಏಕೈಕ ಮಾರ್ಗವಾಗಿದೆ.

ನೆರೆಯ ರಾಷ್ಟ್ರಗಳು ನಮ್ಮೊಂದಿಗೆ ಸ್ನೇಹ ಸಂಬಂಧ

ನೆರೆಯ ರಾಷ್ಟ್ರಗಳು ನಮ್ಮೊಂದಿಗೆ ಸ್ನೇಹ ಸಂಬಂಧ

ನಮ್ಮ ನಾಯಕರು ಪ್ರಸ್ತಾಪಿಸಿದ ನೀತಿಗಳು ಆ ಪರಿಧಿಯನ್ನು ಗುರುತಿಸುತ್ತಿವೆ. ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ ಮತ್ತು ಮ್ಯಾನ್ಮಾರ್ (ಬ್ರಹ್ಮದೇಶ) - ಹೆಚ್ಚಿನ ನೆರೆಯ ರಾಷ್ಟ್ರಗಳು ನಮ್ಮೊಂದಿಗೆ ಸ್ನೇಹ ಸಂಬಂಧವನ್ನು ಹಂಚಿಕೊಂಡಿವೆ ಮತ್ತು ನಮ್ಮೊಂದಿಗೆ ಮೌಲ್ಯಗಳು ಮತ್ತು ನೈತಿಕ ಸಂಹಿತೆಯ ವಿಷಯಗಳ ಬಗ್ಗೆ ಹೆಚ್ಚು ಕಡಿಮೆ ಹೊಂದಾಣಿಕೆ ಮಾಡಿಕೊಂಡಿವೆ. ಈ ದೇಶಗಳೊಂದಿಗೆ ನಮ್ಮ ಬಂಧುತ್ವವನ್ನು ವೃದ್ಧಿಗೊಳಿಸುವ ನಮ್ಮ ಪ್ರಯತ್ನಗಳನ್ನು ನಾವು ಈಗ ವೇಗಗೊಳಿಸಬೇಕು. ಅಭಿಪ್ರಾಯಗಳ ಭಿನ್ನಾಭಿಪ್ರಾಯಗಳು, ಸಂಘರ್ಷದ ಸಮಸ್ಯೆಗಳು ಮತ್ತು ಹಳೆಯ ವೈಮನಸ್ಸುಗಳನ್ನು ಶೀಘ್ರದಲ್ಲಿಯೇ ಇತ್ಯರ್ಥಪಡಿಸಬೇಕು.

ನಾವು ಎಲ್ಲರೊಂದಿಗೂ ಸ್ನೇಹದಿಂದಿರಲು ಉದ್ದೇಶಿಸಿಸುತ್ತೇವೆ. ಇದು ನಮ್ಮ ಸ್ವಭಾವ. ಆದರೆ ಅದನ್ನು ದೌರ್ಬಲ್ಯವೆಂದು ಪರಿಗಣಿಸಿ ವಿವೇಚನಾರಹಿತ ಶಕ್ತಿಯಿಂದ ನಮ್ಮನ್ನು ವಿಘಟಿಸುವ ಅಥವಾ ದುರ್ಬಲಗೊಳಿಸುವ ಪ್ರಯತ್ನಗಳು ಸ್ವೀಕಾರಾರ್ಹವಲ್ಲ. ನಮ್ಮ ವಿರೋಧಿಗಳು ಇದನ್ನು ಈಗ ತಿಳಿದುಕೊಳ್ಳಬೇಕು. ಭಾರತ ಮಾತೆಯ ಅವಿನಾಶಿ ದೇಶಭಕ್ತರು ಮತ್ತು ಅವರ ಅಸಾಧಾರಣ ಶೌರ್ಯ, ಸ್ವಾಭಿಮಾನದ ಪ್ರಜ್ಞೆ ಮತ್ತು ನಮ್ಮ ನಾಗರಿಕರ ಅದಮ್ಯ ನೈತಿಕತೆ, ತಾಳ್ಮೆ ಹೊಂದಿದ ನಾಯಕರ ಗುಣ ಚೀನಾಕ್ಕೆ ಬಲವಾದ ಹಾಗೂ ಸ್ಪಷ್ಟವಾದ ಸಂದೇಶವನ್ನು ಕಳುಹಿಸಿರುತ್ತದೆ. ಇದು ತನ್ನ ಮನೋಭಾವವನ್ನು ಸುಧಾರಿಸಿಕೊಳ್ಳಲು ಎಚ್ಚರಿಕೆಯ ಘಂಟೆ. ನಾವು ಜಾಗರೂಕರಾಗಿ, ದೃಢತೆ ಮತ್ತು ಸನ್ನದ್ಧತೆಯಿಂದ ಮುನ್ನುಗ್ಗುತ್ತೇವೆ ಎಂಬ ಸಂಕಲ್ಪವು ನಮ್ಮ ದೇಶವಾಸಿಗಳಲ್ಲಿ ಸ್ಪಷ್ಟವಾಗಿದೆ.

ಸಂಸ್ಥೆಗಳು ನಾಗರಿಕರ ಸಹಕಾರವನ್ನು ಪಡೆಯಬೇಕು

ಸಂಸ್ಥೆಗಳು ನಾಗರಿಕರ ಸಹಕಾರವನ್ನು ಪಡೆಯಬೇಕು

ದೇಶದ ಸುರಕ್ಷತೆ ಮತ್ತು ಸಾರ್ವಭೌಮತ್ವಕ್ಕೆ ಬಾಹ್ಯ ಬೆದರಿಕೆಗಳ ಬಗ್ಗೆ ನಮ್ಮ ಜಾಗರೂಕತೆಯಷ್ಟೇ ಸಾಲದು. ಕಳೆದ ವರ್ಷದ ಅನೇಕ ಆಂತರಿಕ ಘಟನೆಗಳ ವಿಶ್ಲೇಷಣೆ ಮತ್ತು ರಾಷ್ಟ್ರೀಯ ನಾಯಕತ್ವದ ಸಿದ್ಧತೆಯ ಬಗ್ಗೆಯೂ ಗಮನವಿರಿಸಬೇಕು. ಸರಕಾರದಿಂದ ಹೊರಗುಳಿದವರ ಅಧಿಕಾರದ ಹಪಾಹಪಿ, ರಾಜಕೀಯ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಅಂತರ್ಗತವಾಗಿರುತ್ತದೆ. ಆರೋಗ್ಯಕರ ಸ್ಪರ್ಧೆಯು ಎಂದಿಗೂ ಸ್ವಾಗತಾರ್ಹ. ಆದರೆ ದ್ವೇಷ, ಕಹಿಯಿಂದ ಸಾಮಾಜಿಕ ಸ್ವಾಸ್ಥ್ಯವನ್ನು ದುರ್ಬಲಗೊಳಿಸುವ ಸ್ಪರ್ಧೆಯು ಅನಗತ್ಯವಾಗಿರುತ್ತದೆ. ಪ್ರತಿಸ್ಪರ್ಧಿಗಳ ನಡುವಿನ ಬಿರುಕುಗಳಲ್ಲಿ ಅವಕಾಶವನ್ನು ನೋಡುವ ಪಕ್ಷಗಳು, ಭಾರತವನ್ನು ದುರ್ಬಲಗೊಳಿಸಲು ಮತ್ತು ಛಿದ್ರಗೊಳಿಸಲು ಬಯಸುತ್ತಿರುತ್ತವೆ.
ದೀರ್ಘಕಾಲದಿಂದಲೂ, ನಮ್ಮಲ್ಲಿನ ವೈವಿಧ್ಯತೆಯನ್ನು ಭಿನ್ನಾಭಿಪ್ರಾಯಗಳೆಂದು ಬಿಂಬಿಸುತ್ತಾ ಜನರನ್ನು ಪ್ರಚೋದನೆಗೆ ಎಡೆಮಾಡಿವೆ. ಇದರ ಪರಿಣಾಮವಾಗಿ ಭೀಕರ ಹೋರಾಟಗಳು ಭಾರತದಲ್ಲಿ ಸಕ್ರಿಯವಾಗಿವೆ. ನಮ್ಮಿಂದ ಈ ಅವಕಾಶ ಅವರಿಗೆ ಸಲ್ಲದು. ಅಪರಾಧ ಮತ್ತು ಹಿಂಸಾಚಾರದ ಘಟನೆಗಳನ್ನು ಕಡಿತಗೊಳಿಸುವ ಕ್ರಮಗಳು ಮತ್ತು ಅಪರಾಧ ಮತ್ತು ಹಿಂಸಾತ್ಮಕ ಪ್ರವೃತ್ತಿಗಳ ಮೇಲೆ ಸಂಪೂರ್ಣ ನಿಗ್ರಹದ ಪ್ರಯತ್ನಗಳ ಹೊರತಾಗಿಯೂ ಸಮಾಜದಲ್ಲಿ ಅಪರಾಧ ಮತ್ತು ಹಿಂಸಾಚಾರದ ಘಟನೆಗಳು ಮುಂದುವರಿದರೆ ಅಪರಾಧಿಗಳನ್ನು ತಕ್ಷಣ ಬಂಧಿಸಲು ಮತ್ತು ಕಠಿಣ ಶಿಕ್ಷೆ ವಿಧಿಸಲು ಸರ್ಕಾರಿ ಸಂಸ್ಥೆಗಳು ನಾಗರಿಕರ ಸಹಕಾರವನ್ನು ಪಡೆಯಬೇಕು.

ಸಾಂವಿಧಾನಿಕ ಮಿತಿಯಲ್ಲಿ ನಡೆದುಕೊಳ್ಳಬೇಕು

ಸಾಂವಿಧಾನಿಕ ಮಿತಿಯಲ್ಲಿ ನಡೆದುಕೊಳ್ಳಬೇಕು

ನಮ್ಮ ಕಾರ್ಯ ಚಟುವಟಿಕೆ, ವರ್ತನೆಗಳು ಇಂತಹ ಗುಂಪುಗಳಿಗೆ ಯಾವುದೇ ಅವಕಾಶಗಳನ್ನು ಸೃಷ್ಟಿಸುವುದಿಲ್ಲ ಎಂದು ನಾವು ನೋಡಿಕೊಳ್ಳಬೇಕಿದೆ. ಇದನ್ನು ಖಚಿತಪಡಿಸಿಕೊಳ್ಳಲು, ಸರ್ಕಾರದ ನಿರ್ಧಾರಗಳಿಗೆ ಅಥವಾ ಅಸಮಾಧಾನದ ಅಭಿವ್ಯಕ್ತಿಗಳಿಗೆ ನಮ್ಮ ಪ್ರತಿಕ್ರಿಯೆಗಳು ರಾಷ್ಟ್ರೀಯ ಏಕತೆಯನ್ನು ಗಮನದಲ್ಲಿಟ್ಟುಕೊಂಡಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನಾವು ಎಲ್ಲಾ ಧರ್ಮಗಳು, ಪ್ರದೇಶಗಳು, ಜಾತಿಗಳು ಮತ್ತು ಭಾಷಾ ಹಿನ್ನೆಲೆಯ ಜನರ ಬಗ್ಗೆಯೂ ಗೌರವ ಆದರ, ಸೂಕ್ಷ್ಮತೆಯ ಜೊತೆಗೆ, ಅವರೆಲ್ಲರೊಂದಿಗೆ ಸಾಂವಿಧಾನಿಕ ಮಿತಿಯಲ್ಲಿ ನಡೆದುಕೊಳ್ಳಬೇಕು.

ದುರದೃಷ್ಟವಶಾತ್, ನಮ್ಮ ಸಾಮಾಜಿಕ-ಸಾಂಸ್ಕೃತಿಕ ಮೌಲ್ಯಗಳನ್ನು ಅರಿಯದ ಅಥವಾ ತಪ್ಪಾಗಿ ಅರ್ಥೈಸಿಕೊಂಡವರು ತಮ್ಮನ್ನು ತಾವು ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಜಾತ್ಯತೀತತೆಯ ಠೇಕೆದಾರರು ಎಂದು ಹೇಳಿಕೊಳ್ಳುತ್ತಲೇ ನಮ್ಮ ದೇಶದ ಜನರನ್ನು ಮರುಳು ಮಾಡಿ ಗೊಂದಲಕ್ಕೀಡು ಮಾಡುತ್ತಿದ್ದಾರೆ. ಆಗಸ್ಟ್ 29, 1949 ರಲ್ಲಿ ಸಂವಿಧಾನ ಸಭೆಯ ಭಾಷಣದಲ್ಲಿ, ಪೂಜ್ಯ ಡಾ. ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅಂತಹ ಅಂಶಗಳ ಕ್ರಿಯೆಗಳನ್ನು ವಿವರಿಸಲು "ಅರಾಜಕತೆಯ ವ್ಯಾಕರಣ" (grammar of anarchy) ಎಂಬ ಪದವನ್ನು ಬಳಸಿದ್ದಾರೆ. ಅಂತಹ ಛದ್ಮವೇಷದ ವ್ಯಕ್ತಿ, ವ್ಯಕ್ತಿತ್ವಗಳನ್ನು ಗುರುತಿಸಿ ಮತ್ತು ಅವುಗಳ ಪ್ರಭಾವವನ್ನು ತಗ್ಗಿಸಿ ನಮ್ಮ ಸಹೋದರ ಸಹೋದರಿಯರನ್ನು ರಕ್ಷಿಸುವ ಅಗತ್ಯ ಇಂದು ನಮ್ಮ ಮುಂದಿದೆ.

Recommended Video

Corona ಓಡಿಸೋ ಸಮಯ ದೂರ ಇಲ್ಲಾ | Corona Vaccine | Oneindia Kannada
ಶೋಚನೀಯ ಪ್ರಯತ್ನಗಳು ನಡೆಯುತ್ತಿವೆ

ಶೋಚನೀಯ ಪ್ರಯತ್ನಗಳು ನಡೆಯುತ್ತಿವೆ

ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಮತ್ತು ಪರಿಶಿಷ್ಟ-ಜಾತಿ, ಪರಿಶಿಷ್ಟ-ಬುಡಕಟ್ಟು ಮತ್ತು ನಮ್ಮ ದೇಶದ ಅಲ್ಪಸಂಖ್ಯಾತರಲ್ಲಿ ದ್ವೇಷವನ್ನು ಉಂಟುಮಾಡುವ ಮೂಲಕ ಭಾರತದ ವೈವಿಧ್ಯತೆಯಲ್ಲಿನ ಏಕತೆಯನ್ನು ವಿಭಜಿಸುವ ಶೋಚನೀಯ ಪ್ರಯತ್ನಗಳು ನಡೆಯುತ್ತಿವೆ. ಈ ಪಿತೂರಿ ತಂಡದ ಸದಸ್ಯರು "ಭಾರತ್ ತೇರೆ ತುಕ್ಡೆ ಹೊಂಗೆ" (ಭಾರತವನ್ನು ತುಂಡರಿಸುತ್ತೇವೆ ) ಎಂಬ ಘೋಷಣೆಗಳನ್ನು ಪ್ರಚೋದಿಸಿ ಉತ್ತೇಜಿಸುತ್ತಿದ್ದಾರೆ.

ರಾಜಕೀಯ ಆಸಕ್ತಿ, ಪ್ರತ್ಯೇಕತಾವಾದಿ ಮತ್ತು ಮೂಲಭೂತವಾದಿ ಪ್ರವೃತ್ತಿಗಳು, ಭಾರತ ಮೇಲಿನ ದ್ವೇಷ ಮತ್ತು ಜಾಗತಿಕ ಪ್ರಾಬಲ್ಯದ ಅನ್ವೇಷಣೆಯ ಅಸಾಮಾನ್ಯ ಸಮ್ಮಿಶ್ರಣ ಭಾರತೀಯ ಏಕತೆಯನ್ನು ಕುಗ್ಗಿಸುವ ಕೆಲಸ ಮಾಡುತ್ತಿವೆ. ಈ ವಿಷಯದ ಬಗ್ಗೆ ಆಳವಾದ ತಿಳುವಳಿಕೆಯೊಂದಿಗೆ ನಾವು ತಾಳ್ಮೆಯಿಂದ ಮುಂದುವರಿಯಬೇಕಾಗುತ್ತದೆ. ಈ ಶಕ್ತಿಗಳ ಪ್ರಭಾವದಿಂದ ದೂರ ಉಳಿಯುವ ಜೊತೆಗೆ, ನಮ್ಮ ಸಂವಿಧಾನದ ಬಗ್ಗೆ ಭಕ್ತಿ ಬೆಳೆಸಿಕೊಂಡು ಸಮಾಜವನ್ನು ಶಾಂತಿಯುತ ವಿಧಾನಗಳ ಮೂಲಕ ಸಂಘಟಿಸುವತ್ತ ಗಮನ ಹರಿಸಬೇಕು. ನಾವು ಸ್ವಯಂ ನಿಯಂತ್ರಣವನ್ನು ನಿರ್ವಹಿಸಿದರೆ, ಪರಸ್ಪರರ ಹಿತಾಸಕ್ತಿಯನ್ನು ಮನಸ್ಸಿನಲ್ಲಿಟ್ಟುಕೊಂಡರೆ ಪರಸ್ಪರ ನಂಬಿಕೆಯ ವಾತಾವರಣವು ಮೇಲುಗೈ ಸಾಧಿಸಬಹುದು. ಇದು ಹಳೆಯ ಸಂಘರ್ಷಗಳ ಪರಿಹಾರಕ್ಕೆ ಸಹಾಯ ಮಾಡುತ್ತದೆ; ವಿರೋಧಾಭಾಸದ ವರ್ತನೆಗಳಿಂದ ಉಂಟಾಗುವ ಅಪನಂಬಿಕೆ ಪರಿಹಾರಗಳನ್ನು ಸಾಧಿಸಲಾಗದ ಮತ್ತು ಸಮಸ್ಯೆಗಳನ್ನು ಅಗ್ರಾಹ್ಯವೆಂದು ತೋರಿಸುತ್ತದೆ. ಪ್ರತಿಗಾಮಿ ಮತ್ತು ಭಯಭೀತ ನಿಲುವು ಮತ್ತು ಅವಿವೇಕದ ವಿರೋಧವು ಅನಿಯಂತ್ರಿತ ಹಿಂಸಾಚಾರಕ್ಕೆ ಕಾರಣವಾಗುತ್ತದೆ ಮತ್ತು ಜನರನ್ನು ಬೇರ್ಪಡಿಸುವ ಕಂದಕ ವಿಸ್ತರಿಸುತ್ತದೆ.

ಭಾಷಣದ ಪೂರ್ಣಪಾಠವನ್ನು ಓದಲು ಕ್ಲಿಕ್ ಮಾಡಿ

English summary
India needs to grow bigger than China in terms of shakti and vypati said Rashtriya Swayamsevak Sangh (RSS) chief Mohan Bhagwat on Vijayadashami Utsav 2020
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X