ನಕ್ಸಲರ ದಾಳಿ ಹಿಂದೆ ಜೆಎನ್ ಯು ವಿವಿಯ ಪಿತೂರಿ?
ಛತ್ತೀಸ್ ಗಢದ ಈ ದುಷ್ಕೃತ್ಯಕ್ಕೆ ನವದೆಹಲಿಯಲ್ಲಿರುವ ಜವಾಹರ ಲಾಲ್ ವಿಶ್ವವಿದ್ಯಾಲಯದ ಪಾತ್ರವೂ ಇದೆ ಎನ್ನುತ್ತಿವೆ ಕೆಲ ಮೂಲಗಳು.
ನವದೆಹಲಿ, ಏಪ್ರಿಲ್ 25: ಸೋಮವಾರ (ಏಪ್ರಿಲ್ 24) ಛತ್ತೀಸ್ ಗಢದ ಸುಕ್ಮಾ ನಗರದಲ್ಲಿ ನಕ್ಸಲರು ಹಾಗೂ ಸಿಆರ್ ಪಿಎಫ್ ಯೋಧರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 26 ಯೋಧರು ಮೃತಪಟ್ಟ ಘಟನೆ ಇಡೀ ದೇಶವನ್ನು ಬೆಚ್ಚಿಬೀಳಿಸಿದೆ.
ಅದರ ಹಿಂದಿನ ಕಾರಣಗಳೇನೇ ಇರಲಿ, ನಕ್ಸಲರ ಈ ದುಷ್ಕೃತ್ಯಕ್ಕೆ ನವದೆಹಲಿಯಲ್ಲಿರುವ ಜವಾಹರ ಲಾಲ್ ವಿಶ್ವವಿದ್ಯಾಲಯದ ಪಾತ್ರವೂ ಇದೆ ಎನ್ನುತ್ತಿವೆ ಕೆಲ ಮೂಲಗಳು.[ನಕ್ಸಲೀಯರ ಇತ್ತೀಚಿನ ಹತ್ಯಾಕಾಂಡ : ಟೈಮ್ ಲೈನ್]
ಅಚ್ಚರಿಯೆನಿಸಿದರೂ ಇದು ಸತ್ಯ. ಹೆಚ್ಚೇನಿಲ್ಲ, ಕಳೆದ ವರ್ಷವಷ್ಟೇ ಜವಾಹರ ಲಾಲ್ ವಿಶ್ವವಿದ್ಯಾಲಯದಲ್ಲಿ ಭಾರತ ವಿರೋಧಿ ಪ್ರತಿಭಟನೆಗಳು ನಡೆದಿದ್ದು ನಿಮಗೆ ನೆನಪಿರಬಹುದು. ಭಾರತ್ ಮುರ್ದಾಬಾದ್ ಎಂಬಂಥ ಘೋಷಣೆಗಳೂ ಅಲ್ಲಿ ಮೊಳಗಿದ್ದವು.
ಆದರೆ, ದೂರದ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯಕ್ಕೂ ಛತ್ತೀಸ್ ಗಢದಲ್ಲಿನ ನಕ್ಸಲರ ದಾಳಿಗೂ ವ್ಯತ್ಯಾಸವೇನು ಎಂಬುದಕ್ಕೆ ಕೆಲ ಮೂಲಗಳು ಕೊಡುವ ಉತ್ತರ ಹೀಗಿದೆ.
2016ರಲ್ಲಿ ಇದೇ ಜೆಎನ್ ಯು ನ ಪ್ರೊಫೆಸರ್ ಗಳು, ನಕ್ಸಲ್ ಪೀಡಿತವಾಗಿರುವ ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿರುವ ಕೆಲ ಗ್ರಾಮಗಳಿಗೆ ಬಂದು ಸರ್ಕಾರದ ವಿರುದ್ಧ ಉಪನ್ಯಾಸಗಳನ್ನು ನೀಡಿ ಹೋಗುತ್ತಿದ್ದರು.[ಹುತಾತ್ಮರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ: ರಾಜ್ ನಾಥ್ ಸಿಂಗ್]
ಈ ಸರ್ಕಾರಗಳಿಂದ ಏನೂ ಪ್ರಯೋಜನವಿಲ್ಲ. ಹಾಗಾಗಿ, ನೀವು ನಕ್ಸಲರಿಗೆ ಸಹಾಯ ಮಾಡಬೇಕೆಂದು ದಿನವೂ ಹೇಳುತ್ತಿದ್ದುದಾಗಿ ಆಗ ಕೆಲವಾರು ಗ್ರಾಮಸ್ಥರು ಆಗಲೇ ದೂರಿದ್ದರು.
ಇವು ಎಷ್ಟರ ಮಟ್ಟಿಗೆ ಹೆಚ್ಚಾಗಿತ್ತೆಂದರೆ, ಗ್ರಾಮಸ್ಥರು ಇಂಥ ದೇಶದ್ರೋಹಿ ಉಪನ್ಯಾಸಗಳಿಂದ ರೋಸಿ ಹೋಗಿ, ಜೆಎನ್ ಯುನ ಕೆಲ ಪ್ರೊಫೆಸರ್ ಗಳು ಇಲ್ಲಿಗೆ ಬಂದು ನಮಗೆ ದೇಶ ವಿರೋಧಿ ಬೋಧನೆ ಮಾಡುತ್ತಿದ್ದಾರೆಂದು ದೂರು ಕೊಟ್ಟಿದ್ದರು. ದರ್ಬಾ ಪೊಲೀಸ್ ಠಾಣೆಯಲ್ಲಿ ಈ ದೂರುಗಳು ದಾಖಲಾಗಿವೆ.