ಮೂರನೇ ದಿನವೂ ವಿಚಾರಣೆ: ಮೂರನೇ ದಿನಕ್ಕಾಗಿ ರಾಹುಲ್ ಗಾಂಧಿಗೆ ಇಡಿ ಸಮನ್ಸ್
ನವದೆಹಲಿ, ಜೂನ್ 14: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಂಗಳವಾರವೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿಚಾರಣೆ ನಡೆಸಲಾಯಿತು. ಮೂರನೇ ದಿನವಾದ ಬುಧವಾರವೂ ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಮಂಗಳವಾರ ಕೇಂದ್ರ ದೆಹಲಿಯ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಜಾರಿ ನಿರ್ದೇಶನಾಲಯ (ಇಡಿ) ಪ್ರಧಾನ ಕಚೇರಿಯಲ್ಲಿ ರಾಹುಲ್ ಗಾಂಧಿ ಅನ್ನು ಪ್ರಶ್ನೆ ಮಾಡಲಾಗಿದ್ದು, 9 ಗಂಟೆಗಳವರೆಗೆ ವಿಚಾರಣೆಗೊಳಪಡಿಸಲಾಯಿತು.
ಸೋನಿಯಾ, ರಾಹುಲ್ ಗಾಂಧಿ ಅರೆಬೆತ್ತಲೆ ಫಕೀರರಾ? ಸಿ. ಟಿ. ರವಿ ಪ್ರಶ್ನೆ
ರಾಹುಲ್ ಗಾಂಧಿ ಮತ್ತು ಸಹೋದರಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆ ಮಂಗಳವಾರ ಬೆಳಿಗ್ಗೆ 11:05ರ ಸುಮಾರಿಗೆ ಇಡಿ ಪ್ರಧಾನ ಕಛೇರಿಗೆ ಆಗಮಿಸಿದ್ದರು. ಅವರ ಹೇಳಿಕೆಯನ್ನು ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್ಎ) ಕ್ರಿಮಿನಲ್ ಸೆಕ್ಷನ್ಗಳ ಅಡಿಯಲ್ಲಿ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಾಹ್ನದ
ನಂತರ
ಮತ್ತೆ
ರಾಹುಲ್
ಗಾಂಧಿ
ವಿಚಾರಣೆ:
ಸುಮಾರು
ನಾಲ್ಕು
ಗಂಟೆಗಳ
ಜಾರಿ
ನಿರ್ದೇಶನಾಲಯದ
ಅಧಿಕಾರಿಗಳಿಂದ
ವಿಚಾರಣೆ
ಎದುರಿಸಿದ
ನಂತರ
ರಾಹುಲ್
ಗಾಂಧಿ
ಮಧ್ಯಾಹ್ನ
3:30
ರ
ಸುಮಾರಿಗೆ
ಒಂದು
ಗಂಟೆ
ವಿರಾಮ
ತೆಗೆದುಕೊಂಡು
ಮನೆಗೆ
ತೆರಳಿದರು.
ನಂತರ
ಸಂಜೆ
4:30
ರ
ಸುಮಾರಿಗೆ
ಮತ್ತೆ
ವಿಚಾರಣೆಗೆ
ಹಾಜರಾಗಿದ್ದರು.
ದೆಹಲಿಯಲ್ಲಿ
ಕಾಂಗ್ರೆಸ್
ನಾಯಕರನ್ನು
ಬಂಧಿಸಿದ
ಪೊಲೀಸರು:
ಇದರ
ಮಧ್ಯೆ
ಛತ್ತೀಸ್ಗಢ
ಮುಖ್ಯಮಂತ್ರಿ
ಭೂಪೇಶ್
ಬಾಘೇಲ್,
ಕಾಂಗ್ರೆಸ್
ಪ್ರಧಾನ
ಕಾರ್ಯದರ್ಶಿ
ರಣದೀಪ್
ಸುರ್ಜೆವಾಲಾ
ಮತ್ತು
ಸಂಸದ
ಅಧೀರ್
ರಂಜನ್
ಚೌಧರಿ
ಮತ್ತು
ಕೆಸಿ
ವೇಣುಗೋಪಾಲ್
ಸೇರಿದಂತೆ
ನೂರಾರು
ಕಾಂಗ್ರೆಸ್
ನಾಯಕರು
ಮತ್ತು
ಸದಸ್ಯರನ್ನು
ಅಕ್ರಮ
ಸಭೆ
ಮತ್ತು
ಪೊಲೀಸ್
ಆದೇಶಗಳನ್ನು
ಉಲ್ಲಂಘಿಸಿದ
ಆರೋಪದಲ್ಲಿ
ದೆಹಲಿ
ಪೊಲೀಸರು
ಮಂಗಳವಾರ
ಬಂಧಿಸಿದರು.
ಮನಿ
ಲಾಂಡರಿಂಗ್
ಪ್ರಕರಣ:
ಯಂಗ್
ಇಂಡಿಯನ್
ಪ್ರೈವೇಟ್
ಲಿಮಿಟೆಡ್
ವಿರುದ್ಧ
ಆದಾಯ
ತೆರಿಗೆ
ಇಲಾಖೆಯ
ತನಿಖೆಯನ್ನು
ವಿಚಾರಣಾ
ನ್ಯಾಯಾಲಯವು
ಗಮನಕ್ಕೆ
ತಂದ
ನಂತರ
ಇತ್ತೀಚೆಗೆ
ಏಜೆನ್ಸಿ
ಮನಿ
ಲಾಂಡರಿಂಗ್
ಪ್ರಕರಣವನ್ನು
ದಾಖಲಿಸಿದೆ.
ಯಂಗ್
ಇಂಡಿಯನ್
ಪ್ರೈವೇಟ್
ಲಿಮಿಟೆಡ್
--
ಪತ್ರಿಕೆಯನ್ನು
ನಡೆಸುತ್ತಿದ್ದ
ಅಸೋಸಿಯೇಟೆಡ್
ಜರ್ನಲ್ಸ್
ಲಿಮಿಟೆಡ್ನ
ಸ್ವಾಧೀನದಲ್ಲಿ
ವಂಚನೆ,
ಪಿತೂರಿ
ಮತ್ತು
ಕ್ರಿಮಿನಲ್
ನಂಬಿಕೆಯ
ಉಲ್ಲಂಘನೆಯ
ಆರೋಪಗಳನ್ನು
ಈ
ಪ್ರಕರಣವು
ಒಳಗೊಂಡಿದೆ.
ಜಾರಿ
ನಿರ್ದೇಶನಾಲಯದ
ವಿಚಾರಣೆ
ಆಡಳಿತಾರೂಢ
ಬಿಜೆಪಿಯ
ಸೇಡಿನ
ರಾಜಕಾರಣದ
ಭಾಗ
ಎಂದು
ಕಾಂಗ್ರೆಸ್
ಕೆಂಡ
ಕಾರಿದೆ.
ನ್ಯಾಷನಲ್
ಹೆರಾಲ್ಡ್
ಪ್ರಕರಣದಲ್ಲಿ
ಅವ್ಯವಹಾರದ
ಆರೋಪ:
ದೇಶದಲ್ಲಿ
ತದನಂತರ
ಪ್ರಕಟಗೊಂಡ
ಇತರ
ಪತ್ರಿಕೆಗಳಿಗೆ
ಪೈಪೋಟಿ
ನೀಡುವುದುಕ್ಕೆ
ಸಾಧ್ಯವಾಗದೇ
ಹಾಗೂ
ಆಧುನಿಕ
ತಂತ್ರಜ್ಞಾನ
ಅಳವಡಿಸಿಕೊಳ್ಳಲಾಗದೇ
ತೀವ್ರ
ವೈಫಲ್ಯವನ್ನು
ಅನುಭವಿಸಿತು.
ಇದರ
ಪರಿಣಾಮವಾಗಿ
ಜಾಹೀರಾತು
ಆದಾಯದ
ಕೊರತೆ
ಸೃಷ್ಟಿಯಾಯಿತು.
ಕಳೆದ
2008ರಲ್ಲಿ
ಮೂರೂ
ಆವೃತ್ತಿಯ
ಪ್ರಕಟಣೆ
ಸ್ಥಗಿತಗೊಳಿಸುತ್ತಿರುವುದಾಗಿ
ಪತ್ರಿಕೆ
ಘೋಷಿಸಿತು.
29.09.2010ರ
ವೇಳೆಗೆ
ಷೇರು
ಹೋಲ್ಡರುಗಳ
ಸಂಖ್ಯೆ
1057ಕ್ಕೆ
ಇಳಿದಿತ್ತು.
ಆ
ಸಮಯದಲ್ಲಿ
ಸಂಸ್ಥೆಯು
90.25
ಕೋಟಿ
ರೂಪಾಯಿ
ಸಾಲವನ್ನು
ಹೊಂದಿತ್ತು.
Recommended Video
ನ್ಯಾಷನಲ್
ಹೆರಾಲ್ಡ್
ಮತ್ತು
ಕಾಂಗ್ರೆಸ್
ನಡುವಿನ
ನಂಟು:
ತೀವ್ರ
ಆರ್ಥಿಕ
ಸಂಕಷ್ಟದಲ್ಲಿದ್ದ
ನ್ಯಾಷನಲ್
ಹೆರಾಲ್ಡ್
ಸಂಸ್ಥೆಗೆ
ವೈಐಎಲ್
90.25
ಕೋಟಿ
ರೂಪಾಯಿ
ಬಡ್ಡಿರಹಿತ
ಸಾಲವನ್ನು
ನೀಡಿತ್ತು.
ಇದರಲ್ಲಿ
ಎಐಸಿಸಿ
ಖಜಾನೆಯಿಂದ
ಐವತ್ತು
ಲಕ್ಷ
ರೂಪಾಯಿ
ನೇರವಾಗಿ
ವರ್ಗಾವಣೆಯಾಗಿತ್ತು
ಎಂಬ
ಆರೋಪವಿದೆ.
ಅಲ್ಲದೇ,
ಹೆರಾಲ್ಡ್
ಒಡೆತನದಲ್ಲಿದ್ದ
'ಹೆರಾಲ್ಡ್
ಹೌಸ್'
ನವೀಕರಣಕ್ಕೆ
ಒಂದು
ಕೋಟಿ
ರೂಪಾಯಿ
ನೀಡಿತ್ತು
ಎಂದು
ಹೇಳಲಾಗುತ್ತಿದೆ.