ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇದಾರನಾಥ, ಬದರಿನಾಥ ದರ್ಶನದಲ್ಲಿ ನರೇಂದ್ರ ಮೋದಿ

|
Google Oneindia Kannada News

ಕೇದರ್‌ನಾಥ, ಮೇ 18: ಲೋಕಸಭಾ ಚುನಾವಣೆ 2019ರ ಸುಧೀರ್ಘ ಪ್ರಚಾರ ಮುಗಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಎರಡು ದಿನಗಳ ಕಾಲ ದೇವರ ದರ್ಶನದಲ್ಲಿ ನಿರತರಾಗಲಿದ್ದಾರೆ.

ಎರಡು ದಿನಗಳ ಕಾಲ ಪ್ರಧಾನಿ ಮೋದಿ ಅವರು ಕೇದರ್‌ನಾಥ ಹಾಗೂ ಬದರಿನಾಥ್ ಕ್ಷೇತ್ರಗಳಿಗೆ ಅಧಿಕೃತ ಪ್ರವಾಸ ಹಮ್ಮಿಕೊಂಡಿದ್ದು, ಶನಿವಾರ ಅವರು ಕೇದರನಾಥ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

'ಡಿವೈಡರ್ ಇನ್ ಚೀಫ್' ಎಂದು ಜರಿದ ಪತ್ರಕರ್ತನ ವಿಶ್ವಾಸಾರ್ಹತೆ ಪ್ರಶ್ನಿಸಿದ ಮೋದಿ'ಡಿವೈಡರ್ ಇನ್ ಚೀಫ್' ಎಂದು ಜರಿದ ಪತ್ರಕರ್ತನ ವಿಶ್ವಾಸಾರ್ಹತೆ ಪ್ರಶ್ನಿಸಿದ ಮೋದಿ

ಇದೊಂದು ಅಧಿಕೃತ ಭೇಟಿ ಆದ್ದರಿಂದ ಚುನಾವಣಾ ಆಯೋಗವು ಪ್ರಧಾನಿ ಕಚೇರಿಗೆ ಚುನಾವಣಾ ನೀತಿ ಸಂಹಿತೆ ಬಗ್ಗೆ ಎಚ್ಚರ ವಹಿಸುವಂತೆ ಎಚ್ಚರಿಕೆ ನೀಡಿದೆ.

Narendra Modi two days visit to Kedarnath and Badarinath

ಮೋದಿ ಅವರು ಎರಡು ದಿನಗಳ ಕಾಲ ಕೇದಾರನಾಥ್ ಮತ್ತು ಬದರಿನಾಥ ಯಾತ್ರಾ ಸ್ಥಳಗಳ ಪ್ರವಾಸ ನಡೆಸಿ, ಭಾನುವಾರ ಸಂಜೆ ವೇಳೆಗೆ ನವದೆಹಲಿ ನಿವಾಸ ತಲುಪಲಿದ್ದಾರೆ.

ಪ್ರಧಾನಿಯಾದ ನಂತರ ನಡೆಸಿದ ಮೊದಲ ಸುದ್ದಿಗೋಷ್ಠಿಯಲ್ಲೂ ಭಾಷಣವೇ ಮಾಡಿದ ಮೋದಿ!ಪ್ರಧಾನಿಯಾದ ನಂತರ ನಡೆಸಿದ ಮೊದಲ ಸುದ್ದಿಗೋಷ್ಠಿಯಲ್ಲೂ ಭಾಷಣವೇ ಮಾಡಿದ ಮೋದಿ!

ಮಾರ್ಚ್‌ 10ರಂದು ಪ್ರಾರಂಭವಾಗಿರುವ ನೀತಿಸಂಹಿತೆಯು ಇನ್ನೂ ಜಾರಿಯಲ್ಲಿದ್ದು, ಫಲಿತಾಂಶ ಬಂದು ಹೊಸ ಲೋಕಸಭೆ ರಚನೆ ಆಗುವವರೆಗೂ ನೀತಿ ಸಂಹಿತೆ ಜಾರಿಯಲ್ಲಿರಲಿದೆ ಎಂದು ಚುನಾವಣಾ ಆಯೋಗವು ಪ್ರಧಾನಿ ಕಾರ್ಯಾಲಯಕ್ಕೆ ಸೂಚನೆ ನೀಡಿದೆ.

English summary
Prime minister Narendra Modi on two days official visit to Kedarnatha and Badarinath. Election commission reminds prime minister office of code of conduct.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X