ಆಯುಧ ಪೂಜೆ ಸಂಭ್ರಮದಲ್ಲಿ ನರೇಂದ್ರ ಮೋದಿ
ಅಹಮದಾಬಾದ್, ಅ.13 : ದೇಶದೆಲ್ಲಡೆ ಭಾನುವಾರ ಮಹಾನವಮಿಯ ಆಯುಧ ಪೂಜೆ ಸಂಭ್ರಮ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅಹಮದಾಬಾದ್ ನಲ್ಲಿ ಆಯುಧ ಪೂಜೆ ನೆರವೇರಿಸಿ ಗುಜರಾತ್ ಮತ್ತು ದೇಶದ ಜನರಿಗೆ ವಿಜಯದಶಮಿ ಶುಭಾಶಯ ಕೋರಿದರು.
ಭಾನುವಾರ ಬೆಳಗ್ಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪೊಲೀಸ್ ಮತ್ತು ರಕ್ಷಣಾ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಆಯುಧ ಪೂಜೆ ನೆರವೇರಿಸಿದರು. ಪೊಲೀಸ್ ಅಧಿಕಾರಿಗಳೊಂದಿಗೆ ಅವರು ಈ ಸಂದರ್ಭದಲ್ಲಿ ಸಂವಾದ ನಡೆದಿದರು. ಗುಜರಾತ್ ಮತ್ತು ದೇಶದ ಎಲ್ಲಾ ಜನತೆಗೆ ವಿಜಯದಶಮಿಯ ಶುಭಾಶಯಗಳನ್ನು ಕೋರಿದರು.
ಖಡ್ಗಕ್ಕೆ ಪೂಜೆ
ಆಯುಧ ಪೂಜೆಯಲ್ಲಿ ತೊಡಗಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಖಡ್ಗಕ್ಕೆ ಪೂಜೆ ಸಲ್ಲಿಸಿದರು.
ಎಲ್ಲರಿಗೂ ಶುಭಾಶಯ
ಆಯುಧ ಪೂಜೆಯಲ್ಲಿ ಪಾಲ್ಗೊಂಡಿದ್ದ ನರೇಂದ್ರ ಮೋದಿ ದೇಶದ ಜನರಿಗೆ ವಿಜಯದಶಮಿ ಶುಭಾಶಯ ಕೋರಿದರು.
ಪೊಲೀಸರೊಂದಿಗೆ ಸಂವಾದ
ಭಾನುವಾರ ಆಯುಧ ಪೂಜೆಯ ನಂತರ ನರೇಂದ್ರ ಮೋದಿ ಪೊಲೀಸರು ಮತ್ತು ರಕ್ಷಣಾ ಇಲಾಖೆಯ ನೌಕರರ ಜೊತೆ ಸಂವಾದ ನಡೆಸಿದರು.
ಸಮಸ್ಯೆಗಳ ಬಗ್ಗೆ ಚರ್ಚೆ
ಆಯುಧ ಪೂಜೆಯ ಬಳಿಕ ಪೊಲೀಸರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಇಲಾಖೆಯ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು.
ಆಧುನಿಕ ಉಪಕರಣಗಳಿಗೂ ಪೂಜೆ
ನರೇಂದ್ರ ಮೋದಿ ಆಯುಧ ಪೂಜೆಯಂದು ಪೊಲೀಸರು ಬಳಸುವ ಆಧುನಿಕ ಗನ್ ಸೇರಿದಂತೆ ವಿವಿಧ ಆಯುಧಗಳಿಗೂ ಪೂಜೆ ಸಲ್ಲಿಸಿದರು.