ಯುವಜನರಲ್ಲಿ, ದೇಶಪ್ರೇಮ,ಶಿಸ್ತು ಮೂಡಿಸುವ ಎನ್-ಯೆಸ್ ಯೋಜನೆ
ಬೆಂಗಳೂರು, ಜು.18: ಯುವ ಸಮುದಾಯದಲ್ಲಿ ದೇಶಪ್ರೇಮ ಅದರ ಜತೆಗೆ ಶಿಸ್ತುಬದ್ಧ ಕ್ರಮವನ್ನು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ 10 ಲಕ್ಷ ಯುವಕರು ಮತ್ತು ಯವಕರಿಗೆ ರಾಷ್ಟ್ರೀಯ ಯುವ ಸಬಲೀಕರಣ ಯೋಜನೆ ಅನ್ವಯ 10 ಮತ್ತು 12ನೇ ತರಗತಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಒಂದು ವರ್ಷದ ಪ್ರೋತ್ಸಾಹ ಧನ ನೀಡಲು ಉದ್ದೇಶಿಸಲಾಗಿದೆ.
ಈ ಯೋಜನೆಯ ಫಲಾನುಭವಿಗಳು ರಕ್ಷಣಾ ಪಡೆ, ಅರೆಸೈನಿಕ ಪಡೆ ಮತ್ತು ಪೊಲೀಸ್ ಇಲಾಖೆ ಸೇರುವುದಕ್ಕೆ ಅಗತ್ಯ ಅರ್ಹತೆಗಳನ್ನು ಪಡೆಯಲಿದ್ದಾರೆ. ನೇಮಕಾತಿ ವೇಳೆ ಈ ತರಬೇತಿ ಪಡೆದವರಿಗೆ ಆದ್ಯತೆ ನೀಡಲಾಗುತ್ತದೆ. ಯುವ ಸಮುದಾಯದಲ್ಲಿ ದೇಶಪ್ರೇಮ, ಶಿಸ್ತು, ಅತ್ಮಾಭಿಮಾನ ಹೆಚ್ಚಿಸುವ ಯೋಜನೆ ಇದಾಗಿದೆ.
ಜಮ್ಮು-ಕಾಶ್ಮೀರ: ಇಬ್ಬರು ಉಗ್ರರನ್ನು ಬಲಿಪಡೆದ ಭಾರತೀಯ ಸೇನೆ
2022ರಲ್ಲಿ ನವಭಾರತ ನಿರ್ಮಾಣದ ಪ್ರಧಾನಿ ಸಂಕಲ್ಪಕ್ಕೆ ಪೂರಕ ಯುವ ಪಡೆ ರಚನೆಯಾಗಲಿದೆ. ವಿಪತ್ತು ನಿರ್ವಹಣೆ, ಐಟಿ ಮತ್ತು ವೃತ್ತಿಪರ ಕೌಶಲಗಳ ತರಬೇತಿ, ಯೋಗ ಕಲಿಕೆ, ಸನಾತನ ಭಾರತದ ಸಿದ್ಧಾಂತಗಳ ಬಗ್ಗೆ ತಿಳಿವಳಿಕೆ ನೀಡಲಾಗುತ್ತದೆ.
ಎನ್-ಬೈಇಎಸ್ ಯೋಜನೆ ಜಾರಿಗೆ ರೂಪುರೇಷೆ ಸಿದ್ಧಪಡಿಸಲೆಂದು ಜೂನ್ ತಿಂಗಳ ಕೊನೆಯ ವಾರದಲ್ಲಿ ಪ್ರಧಾನಿ ಕಾರ್ಯಾಲಯದಲ್ಲಿ ಸಭೆ ನಡೆದಿತ್ತು. ಸಭೆಯಲ್ಲಿ ಭಾಗಿಯಾಗಿದ್ದ ರಕ್ಷಣಾ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ಯೋಜನೆ ಸಂಬಂಧ ಭಾಗವಹಿಸಿದ್ದ ಅಧಿಕಾರಿಗಳಿಗೆ ಪರಿಚಯ ನೀಡಿದ್ದಾರೆ, ಹಲವು ಅಧಿಕಾರಿಗಳು ಹೊಸ ಯೋಜನೆ ಬದಲಿಗೆ ಎನ್ಸಿಸಿ ಹೆಚ್ಚು ಬಲಪಡಿಸಿ ಎಂದು ಸಲಹೆ ನೀಡಿದ್ದಾರೆ.