ಬೆಂಗಳೂರು-ಚೆನ್ನೈ ರೈಲನ್ನು ಮೈಸೂರು ವರೆಗೂ ಓಡಿಸಲು ಮನವಿ
ಬೆಂಗಳೂರು, ಜು.10: ಚೆನ್ನೈ-ಬೆಂಗಳೂರು ಮಧ್ಯೆ ಸಂಚರಿಸುವ ರೈಲು ಸಂಖ್ಯೆ 12609 ರೈಲನ್ನು ಮೈಸೂರುವರೆಗೂ ವಿಸ್ತರಿಸುವಂತೆ ಮೈಸೂರು ರೈಲ್ವೆ ಬಳಕೆದಾರರ ವೇದಿಕೆ ಒತ್ತಾಯಿಸಿದೆ.
ಚೆನ್ನೈ ಹಾಗೂ ಬೆಂಗಳೂರು ಮಧ್ಯೆ ಸಂಚರಿಸುವ ಚೆನ್ನೈ-ಬೆಂಗಳೂರು ಎಕ್ಸ್ಪ್ರೆಸ್ ರೈಲು ಮೈಸೂರು ರೈಲ್ವೆ ಬಳಕೆದಾರರ ವೇದಿಕೆ ಆಗ್ರಹಿಸಿದ್ದು, ಈ ಕುರಿತು ಟ್ವಿಟ್ಟರ್ನಲ್ಲಿ ಅಭಿಯಾನ ಆರಂಭಿಸಿರುವ ವೇದಿಕೆ ಕಾರ್ಯಕರ್ತರು ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಮೈಸೂರು-ರೇವಾ
ನಡುವೆ
ನೂತನ
ರೈಲು
ಸೇವೆ
ಆರಂಭ
ಸಧ್ಯ ಬೆಂಗಳೂರು ಮತ್ತು ಚೆನ್ನೈ ನಡುವೆ ಸಂಚರಿಸುತ್ತಿರುವ ರೈಲನ್ನು ಮೈಸೂರಿನವರೆಗೂ ವಿಸ್ತರಿಸುವುದು ಅಗತ್ಯವಾಗಿದೆ. ಈ ಮೊದಲು ಸಂಚರಿಸುತ್ತಿದ್ದ ಬೆಂಗಳೂರು, ಕಣ್ಣೂರು ಕಾರವಾರ ರೈಲನ್ನು ಹೊಸ ಮಾರ್ಗಕ್ಕೆ ಬದಲಾಯಿಸಿದ ನಂತರ ಪ್ರತಿ ದಿನ ಮೈಸೂರಿಗೆ ಬೆಂಗಳೂರಿನಿಂದ ಸಂಜೆ ವೇಳೆ ಯಾವ ರೈಲು ಇರಲಿಲ್ಲ.
Pls provide a alternate train by extending 12609/10 Chennai Bengaluru intercity to #Mysuru in the diverted karwar train timings @PiyushGoyal @PiyushGoyalOffc @mepratap @AnanthKumar_BJP @DVSBJP @BSYBJP @AmitShah @narendramodi @drmsbc @GMSWR @DrmMys @RailwaySeva #Karnataka pic.twitter.com/uzFhDm4vVa
— Mysuru Railway Users (@MysuruRailUsers) July 10, 2018
ಸಂಜೆ 7 ಗಂಟೆಯಿಂದ ರಾತ್ರಿ 11.30ರವರೆಗೆ ಬೆಂಗಳೂರು ಮತ್ತು ಮೈಸೂರು ನಡುವೆ ವಾರದ 4 ದಿನಗಳ ಕಾಲ ಯಾವುದೇ ರೈಲಿನ ಸಂಚಾರ ಇರುವುದಿಲ್ಲ ಹೀಗಾಗಿ ಸಾವಿರಾರು ಪ್ರಯಾಣಿಕರು ನಿತ್ಯ ಪರಿತಪಿಸುವಂತಾಗಿದೆ. ಅಲ್ಲದೆ ವೈಟ್ಫೀಲ್ಡ್, ಐಟಿಪಿಎಲ್ ಪ್ರದೇಶಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಮೈಸೂರು ಮಾರ್ಗಕ್ಕೆ ರಾತ್ರಿ ರೈಲೇ ಇಲ್ಲದ ಕಾರಣ ಸಾಕಷ್ಟು ಅನನುಕೂಲ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಚೆನ್ನೈ ರೈಲನ್ನು ಮೈಸೂರಿಗೆ ವಿಸ್ತರಿಸುವ ಮೂಲಕ, ಬೆಂಗಳೂರಿನ ವೈಟ್ಫೀಲ್ಡ್, ಐಟಿಪಿಎಲ್ ಸೇರಿದಂತೆ ಮಾರ್ಗದಲ್ಲಿ ಸಮಚರಿಸುವ ಎಲ್ಲಾ ಪ್ರಯಾಣಿಕರಿಗೆ ನೆರವಾಗಲಿದೆ ಎಂದು ವೇದಿಕೆ ಸದಸ್ಯರು ಕೋರಿದ್ದಾರೆ.