ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗುರ್ಮೆಹರ್ ಗೆ ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಬಹಿರಂಗ ಪತ್ರ
ಇತ್ತೀಚೆಗೆ ಫೇಸ್ ಬುಕ್ ನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿರುದ್ಧ ಆಂದೋಲ ಮಾಡಿ ವಿವಾದ ಮೈಮೇಲೆಳೆದುಕೊಂಡಿದ್ದ ದೆಹಲಿ ವಿದ್ಯಾರ್ಥಿನಿ ಗುರ್ಮೆಹರ್ ಕೌರ್.
ನವದೆಹಲಿ, ಮಾರ್ಚ್ 4: ಇತ್ತೀಚೆಗೆ, ಭಾರತೀಯ ಜನತಾ ಪಾರ್ಟಿಯ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವಿರುದ್ಧ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಜನಾಂದೋಲನ ಆರಂಭಿಸಿದ್ದ ಹುತಾತ್ಮ ಯೋಧ ಮಂಗಲ್ ದೀಪ್ ಸಿಂಗ್ ಪುತ್ರಿ ಗುರ್ಮೆಹರ್ ಕೌರ್ ವಿರುದ್ಧ ಉದ್ಯಮಿ ಹಾಗೂ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಬಹಿರಂಗಪತ್ರವೊಂದನ್ನು ಬರೆದಿದ್ದಾರೆ.
ಫೇಸ್ ಬುಕ್ ಮೂಲಕ ತಮ್ಮಲ್ಲಿನ ಆಲೋಚನೆಗಳನ್ನು ಯಾವುದೇ ಮುಲಾಜಿಲ್ಲದೆ, ಅಂಜಿಕೆಯಿಲ್ಲದೆ ಜಗಜ್ಜಾಹೀರು ಮಾಡಿರುವುದನ್ನು ಮೆಚ್ಚಿಕೊಂಡಿರುವ ರಾಜೀವ್ ಚಂದ್ರಶೇಖರ್, ಯುವ ಮನಸ್ಸುಗಳಲ್ಲಿನ ಈ ಧೈರ್ಯವನ್ನು ಕೊಂಡಾಡಿದ್ದಾರೆ.
ಆದರೆ, ಅದೇ ವೇಳೆ, ವಿಚಾರಗಳನ್ನು ಅರ್ಥೈಸುವ ನಿಟ್ಟಿನಲ್ಲಿ ಗುರ್ಮೆಹರ್ ಕೌರ್ ಸೇರಿದಂತೆ ಇಂದಿನ ಯುವ ಜನತೆಯು ಎಡವುತ್ತಿರುವುದು ಎಲ್ಲಿ ಎಂಬುದನ್ನು ಗುರ್ಮೆಹರ್ ಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನೂ ಅವರು ಮಾಡಿದ್ದಾರೆ. ಆ ಪತ್ರದ ಹೈಲೈಟ್ಸ್ ಇಲ್ಲಿದೆ.
Comments
English summary
Rajyasabha member Rajiv Chandrashekhar writes to Gurmeher Kaur who recently started an campaign against ABVP, a student wing of BJP. In his letter, he appreciates Kaur's courage to speak was she believe, but also tries to open her eyes about the false believes she has regarding Pakistan.
Story first published: Saturday, March 4, 2017, 14:24 [IST]