ಭಾರತೀಯ ರಾಯಭಾರ ಕಚೇರಿಯನ್ನು ಜೆರುಸಲೇಂಗೆ ಸ್ಥಳಾಂತರಿಸಿ: ಸ್ವಾಮಿ
ಬೆಂಗಳೂರು, ಡಿಸೆಂಬರ್ 07: 'ಜೆರುಸಲೇಂ ಅನ್ನು ಇಸ್ರೇಲ್ ನ ರಾಜಧಾನಿ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಂತೆ ಈ ಬಗ್ಗೆ ಭಾರಿ ಚರ್ಚೆ ನಡೆದಿದೆ.
ಇಸ್ರೇಲ್ ರಾಜಧಾನಿ ಜೆರುಸಲೇಂ: ಟ್ರಂಪ್ ಘೋಷಣೆಗೆ ಐಸಿಸ್ ಆಕ್ರೋಶ
ಇದೊಂದು ರಾಜಕೀಯ ನಡೆ ವಿಶ್ಲೇಷಿಸಲಾಗಿದೆ. ಐಸಿಸ್ ಹಾಗೂ ಅಲ್ ಖೈದಾ ಎಚ್ಚರಿಕೆಯನ್ನು ನೀಡಿವೆ. ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಟ್ರಂಪ್ ನಡೆಯನ್ನು ಅನುಮೋದಿಸಿ, ಭಾರತೀಯ ರಾಯಭಾರ ಕಚೇರಿಯನ್ನು ಜೆರುಸಲೇಂಗೆ ಸ್ಥಳಾಂತರಿಸುವುದು ಸೂಕ್ತ ಎಂದಿದ್ದಾರೆ.
ಇಸ್ರೇಲ್ ಈ ನಡೆಯನ್ನು ಸ್ವಾಗತಿಸಿದ್ದರೂ ಜಿಹಾದಿಗಳಿಗೆ ಮಾತ್ರ ಇದು ನುಂಗಲಾರದ ಬಿಸಿ ತುಪ್ಪವಾಗಿದೆ. ಟೆಲ್ ಅವಿವ್ ಬದಲು ಇಸ್ರೇಲ್ ರಾಜಧಾನಿಯಾಗಿ ಜೆರುಸಲೇಂ ಅನ್ನು ಯುಎಸ್ ಗುರುತಿಸುತ್ತಿದೆ ಎಂದು ಟ್ರಂಪ್ ಘೋಷಿಸಿದ್ದಾರೆ.
ಇಸ್ರೇಲ್ ನಲ್ಲಿ ಮೋದಿ: ಭಾರತಕ್ಕಾಗಲಿರುವ 10 ಪ್ರಯೋಜನ
ಭಾರತ ಹಾಗೂ ಅಮೆರಿಕದ ರಾಯಭಾರ ಕಚೇರಿಗಳು ಟೆಲ್ ಅವಿವ್ ನಲ್ಲಿವೆ. ಟ್ರಂಪ್ ಅವರ ನಡೆಯಿಂದ ಜೆರುಸಲೇಂಗೆ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿದ್ದು, ಇದಕ್ಕೆ ತಕ್ಕಂತೆ ಭಾರತ ಕೂಡಾ ನಡೆದುಕೊಳ್ಳಬೇಕಿದೆ ಎಂದಿದ್ದಾರೆ.(ಒನ್ಇಂಡಿಯಾ ಸುದ್ದಿ)