ಕರ್ನಾಟಕ ಕರಾವಳಿಯಲ್ಲಿ ವರುಣನ ಅಬ್ಬರಕ್ಕಿಲ್ಲ ಬಿಡುವು!
Recommended Video
ಬೆಂಗಳೂರು, ಜುಲೈ 18: ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಳೆಯ ಆರ್ಭಟಕ್ಕೆ ಬಿಡುವೆಂಬುದೇ ಇಲ್ಲ. ಇಂದು(ಜು.18) ಸಹ ಈ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆ, ಬಿಡುವು ಪಡೆಯುವ ಲಕ್ಷಣವೇನು ಕಾಣುತ್ತಿಲ್ಲ.
ಕರಾವಳಿ ಮತ್ತು ದಕ್ಷಿಣ ಕರ್ನಾಟಕದಲ್ಲಿ ಭಾರೀ ಮಳೆ ಸಾಧ್ಯತೆ
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಹಾಸನ, ಕೊಡಗು, ಚಿಕ್ಕಮಗಳೂರು, ಬೆಂಗಳೂರು, ಚಿತ್ರದುರ್ಗ, ಚಾಮಾರಾಜನಗರ, ಚಿಕ್ಕಮಂಗಳೂರು, ಹಾಸನ, ಕೋಲಾರ, ಮೈಸೂರು, ತುಮಕೂರುಗಳಲ್ಲಿ ಇಂದು ಭಾರೀ ಮಳೆ ಬೀಳುವ ಸಾಧ್ಯತೆ ಇದೆ.
ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ವಿಜಯಪುರ, ಬೀದರ್, ಬಳ್ಳಾರಿ, ಧಾರವಾಡ, ಹಾವೇರಿ, ಗದಗ, ಕಲಬುರಗಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲೂ ಸ್ವಲ್ಪ ಮಳೆಯಾಗಲಿದೆ.
ರಾಜಧಾನಿ
ಬೆಂಗಳೂರಿನಲ್ಲಿ
ಎಂದಿನಂತೆ
ಮೋಡ
ಕವಿದ
ವಾತಾವರಣವಿದ್ದು,
ಅಲ್ಲಲ್ಲಿ
ಕೊಂಚ
ಮಳೆ
ಬೀಳುವ
ಸಾಧ್ಯತೆ
ಇದೆ.
ಮಹಾರಾಷ್ಟ್ರದಲ್ಲಿ
ಮತ್ತೆ
ವರುಣನ
ಆರ್ಭಟ
ಮುಂದುವರಿಯಲಿದೆ.
ಗೋವಾ
ಮತ್ತು
ಕೊಂಕಣ
ಸೀಮೆಯಲ್ಲಿ
ಭಾರೀ
ಮಳೆಯಾಗಲಿದೆ.
ವಿದರ್ಭ,
ಛತ್ತೀಸ್
ಗಢ,
ಗುಜರಾತ್,
ಮಧ್ಯಪ್ರದೇಶ,
ಮಹಾರಾಷ್ಟ್ರ,
ಮರಾಠಾವಾಡ,
ತೆಲಂಗಾಣ,
ಪಂಜಾಬ್,
ಉತ್ತರಾಖಂಡ,
ಉತ್ತರ
ಪ್ರದೇಶ,
ಮಧ್ಯಪ್ರದೇಶ,
ಪಶ್ಚಿಮಬಂಗಾಳ,
ಸಿಕ್ಕಿಂ,
ನಾಗಾಲ್ಯಾಂಡ್,
ರಾಜಸ್ಥಾನ,
ಒಡಿಶಾ,
ಅಸ್ಸಾಂ
ಮತ್ತು
ಮೇಘಾಲಯಗಳಲ್ಲೂ
ಭಾರೀ
ಬೀಳಲಿದೆ.
ರಾಜಸ್ಥಾನ, ಸೌರಾಷ್ಟ್ರಗಳಲ್ಲೂ ಧಾರಾಕಾರ ಮಳೆ ಸುರಿಯಲಿದೆ. ತಮಿಳುನಾಡು ಮತ್ತು ಕೇರಳದಲ್ಲಿ ಸಹ ಭಾರೀ ಮಳೆಯಾಗಲಿದೆ.