ಅವಿಶ್ವಾಸ ನಿರ್ಣಯ : ಲೋಕಸಭೆಯಲ್ಲಿ 12 ಗಂಟೆ ನಡೆದ ಚರ್ಚೆಯ ಮುಖ್ಯಾಂಶ
ನವದೆಹಲಿ, ಜುಲೈ 20: ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡಿಸಲಾಗಿರುವ ಅವಿಶ್ವಾಸ ಗೊತ್ತುವಳಿ ಕುರಿತಂತೆ ಶುಕ್ರವಾರ ಮಧ್ಯಾಹ್ನ ಚರ್ಚೆ, ಭಾಷಣ ನಡೆಯಲಿದೆ. ಅವಿಶ್ವಾಸ ನಿರ್ಣಯ ಮಂಡನೆ ಮೂಲಕ ವಿಪಕ್ಷಗಳು, ಆಡಳಿತಾರೂಢ ಎನ್ಡಿಎ ಸರ್ಕಾರ ಬೀಳಿಸಲು ಸಾಧ್ಯವಿಲ್ಲದಿದ್ದರೂ ಇದು ಪ್ರತಿಷ್ಠೆಯ ನಿರ್ಣಯವಾಗಿದೆ. ರಾಹುಲ್ ಗಾಂಧಿ ಅವರ ಜೂಮ್ಲಾ, ಅಪ್ಪುಗೆ, ಕಣ್ ಮಿಟುಕು ನಡೆ ನಂತರ ಪ್ರಧಾನಿ ಮೋದಿ ಅವರ ಪ್ರತಿಕ್ರಿಯೆಗಾಗಿ ಎಲ್ಲರೂ ಕಾದಿದ್ದಾರೆ.
ಅವಿಶ್ವಾಸ ನಿರ್ಣಯ: ಲೋಕಸಭೆಗೆ ಹಾಜರಾಗದೆ ತಟಸ್ಥವಾಗುಳಿದ ಶಿವಸೇನಾ
ಲೋಕಸಭೆಯಲ್ಲಿ ಎನ್ಡಿಎ ಮೈತ್ರಿಕೂಟ 314 ಸದಸ್ಯ ಬಲ ಹೊಂದಿದೆ. ಬಹುಮತ ಸಾಬೀತು ಪಡಿಸಲು ಮ್ಯಾಜಿಕ್ ನಂಬರ್ 268. 'ಬಿಜೆಪಿ ಕೇವಲ ಎನ್ಡಿಎ ಮೈತ್ರಿಕೂಟದ ಮತಗಳು ಮಾತ್ರವಲ್ಲ, ಬೇರೆ ಪಕ್ಷಗಳಿಂದಲೂ ಮತಗಳನ್ನು ಪಡೆಯಲಿದೆ' ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಂಸತ್ತಿನ ಉಭಯ ಸದನಗಳ ಸಂಖ್ಯಾಬಲ ಎಷ್ಟಿದೆ?
ಟಿಡಿಪಿ ಸಂಸದ ಕೆ.ಶ್ರೀನಿವಾಸ್ ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಅಂಗೀಕರಿಸಿದ್ದಾರೆ. ಸದನದಲ್ಲಿ ಬಿಜೆಪಿ ಅವಿಶ್ವಾಸ ನಿರ್ಣಯದಲ್ಲಿ ಜಯಗಳಿಸುವ ಉತ್ಸಾಹದಲ್ಲಿದೆ.
ಅವಿಶ್ವಾಸ ನಿರ್ಣಯದ ಪರ ಮಾತನಾಡಲು ಬಿಜೆಪಿಗೆ 3 ಗಂಟೆ 33 ನಿಮಿಷದ ಅವಕಾಶ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೊನೆಯಲ್ಲಿ ಮಾತನಾಡಿದರು.
The @PMOIndia must explain why the contract was taken away from HAL at the cost of #karnataka youths and to given a businessman who has never made an aeroplane in his life. #ModiLiesInParliament
— Eshwar Khandre (@eshwar_khandre) July 20, 2018
Aaj poora desh dekh raha tha TV pe aankhon ka khel, kaise aankhen kholi jaa rahi hain, kaise bandh ki jaa rahi hain: PM Modi in Lok Sabha pic.twitter.com/aZlsPGdIGa
— ANI (@ANI) July 20, 2018