ನೆಹರೂ ಕಾಲದ 'ಆಯೋಗ' ಕ್ಕೆ ಹೊಸ ಹೆಸರಿಟ್ಟ ಮೋದಿ
ನವದೆಹಲಿ, ಜ.1: ಕಾಂಗ್ರೆಸ್ ಪಕ್ಷದ ವಿರೋಧದ ನಡುವೆಯೂ ಮಾಜಿ ಪ್ರಧಾನಿ ದಿವಂಗತ ನೆಹರೂ ಅವರು ಹುಟ್ಟು ಹಾಕಿದ್ದ ಯೋಜನಾ ಆಯೋಗದ ಸ್ವರೂಪವನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೊನೆಗೂ ಬದಲಿಸಿದೆ. ಕಳೆದ ಎರಡು ತಿಂಗಳಿನಿಂದ ಈ ಬಗ್ಗೆ ಭಾರಿ ಚರ್ಚೆ ನಡೆದಿತ್ತು. ಯೋಜನಾ ಆಯೋಗ ಇನ್ಮುಂದೆ ನೀತಿ ಆಯೋಗ ಎಂದು ಕರೆಯಲ್ಪಡುತ್ತದೆ.
1950ರಲ್ಲಿ
ಸ್ಥಾಪನೆಯಾದ
ಯೋಜನಾ
ಆಯೋಗದಲ್ಲಿ
ಸಾಕಷ್ಟು
ಬದಲಾವಣೆ
ತರಲು
ಮೋದಿ
ಬಯಸಿದ್ದು,
ಅದರಂತೆ,
ಗುರುವಾರ
ಹೊಸ
ವರ್ಷದ
ದಿನ
ಈ
ಬಗ್ಗೆ
ಅಧಿಕೃತ
ಘೋಷಣೆ
ಹೊರ
ಬಿದ್ದಿದೆ.
ಮೂರು
ವಾರಗಳ
ಕೆಳಗೆ
ಎಲ್ಲಾ
ರಾಜ್ಯಗಳ
ಮುಖ್ಯಮಂತ್ರಿಗಳ
ಜೊತೆ
ಸಭೆ
ನಡೆಸಿದ್ದ
ಪ್ರಧಾನಿ
ಮೋದಿ
ಅವರು
'ನೀತಿ
ಆಯೋಗ'
ದ
ಬಗ್ಗೆ
ವಿವರಿಸಿದ್ದರು.
ನಿರೀಕ್ಷೆಯಂತೆ
ಕಾಂಗ್ರೆಸ್
ಆಡಳಿತವಿರುವ
ರಾಜ್ಯಗಳ
ಮುಖ್ಯಮಂತ್ರಿಗಳು
ಇದಕ್ಕೆ
ವಿರೋಧ
ವ್ಯಕ್ತಪಡಿಸಿದ್ದರು.
ಸುಮಾರು 64 ವರ್ಷ ಹಳೆಯ ಆಯೋಗಕ್ಕೆ ಹೊಸ ಸ್ಪರ್ಶ ನೀಡುವ ಸುಳಿವನ್ನು ಕಳೆದ ಸ್ವತಂತ್ರದಿನಾಚರಣೆಯಂದು ಪ್ರಧಾನಿ ಮೋದಿ ನೀಡಿದ್ದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡಾ ಈ ಬದಲಾವಣೆ ಬಯಸಿದ್ದರು ಎಂದು ಮೋದಿ ಅವರು ಡಿ.7ರಂದು ಘೋಷಿಸಿ ಚರ್ಚೆ ಹುಟ್ಟು ಹಾಕಿದ್ದರು.
ದೇಶದ ಆರ್ಥಿಕತೆಯ ಮಾರ್ಗದರ್ಶಿಯಾಗಿರುವ ಈ ಆಯೋಗ ಜವಹಾರಲಾಲ್ ನೆಹರೂ ಅವರ ಕಲ್ಪನೆಯಾಗಿದ್ದು, ಕಾಂಗ್ರೆಸ್ ಇದರಲ್ಲಿ ಬದಲಾವಣೆ ತರಲು ಒಪ್ಪಿಲ್ಲ.ಅದರೆ, ದೇಶದ ಅನೇಕ ಕಾನೂನುಗಳಿಗೆ ತಿದ್ದುಪಡಿ ತರಲು ಹೊರಟಿರುವ ಮೋದಿ ಅವರು ಆಯೋಗಕ್ಕೆ ಹೊಸ ಸ್ವರೂಪ ನೀಡುವುದು ಖಚಿತವಾಗಿದೆ.
ನೀತಿ ಆಯೋಗ: ಪ್ರಧಾನ ಮಂತ್ರಿ ಅವರು ನೀತಿ ಆಯೋಗದ ಅಧ್ಯಕ್ಷರಾಗಲಿದ್ದಾರೆ. ಉಳಿದಂತೆ ಇದಕ್ಕೆ ವಿವಿಧ ಇಲಾಖೆಗಳನ್ನೊಳಗೊಂಡ ಹಿರಿಯ ಅಧಿಕಾರಿಗಳು ಸಮಿತಿಯ ಸದಸ್ಯರಾಗಲಿದ್ದಾರೆ. ಪ್ರಮುಖವಾಗಿ ನೀತಿ ಆಯೋಗ 4 ಇಲಾಖೆಗಳ ಸಹಭಾಗಿತ್ವದಲ್ಲಿ ಕಾರ್ಯ ನಿರ್ವಹಿಸಲಿದೆ. ಅಂತಾರಾಜ್ಯ ಸಭೆ, ನೇರ ಫಲಾನುಭವಿಗಳಿಗೆ ವರ್ಗಾವಣೆ(ಡಿಬಿಟಿ) ಯುಐಡಿಎಐ ಹಾಗೂ ಯೋಜನೆಗಳ ಮೌಲ್ಯಮಾಪನಗಳ ಘಟಕ ನೀತಿ ಆಯೋಗದ ಸುಪರ್ತಿಗೆ ಒಳಪಡಲಿದೆ. ಶೀಘ್ರದಲ್ಲೇ ನೀತಿ ಆಯೋಗದ ರೂಪುರೇಷೆಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಲಿದೆ.(ಏಜೆನ್ಸೀಸ್)