ಆರೋಪವನ್ನು ಹೊಗಳಿಕೆ ಎಂದು ರಾಹುಲ್ಗೆ ಹೇಳಿದ ಸಿಎಂ!
ಪುದುಚೇರಿ, ಫೆಬ್ರವರಿ 17; ಮಹಿಳೆ ಮಾಡಿದ ಆರೋಪವನ್ನು ಹೊಗಳಿಕೆ ಎಂದು ರಾಹುಲ್ ಗಾಂಧಿಗೆ ಭಾಷಾಂತರ ಮಾಡಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಪುದುಚೇರಿ ಮುಖ್ಯಮಂತ್ರಿಗಳ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಹುಲ್ ಗಾಂಧಿ ಎರಡು ದಿನಗಳ ಪುದುಚೇರಿ ಪ್ರವಾಸದಲ್ಲಿದ್ದಾರೆ. ಬುಧವಾರ ಅವರು ಮೀನುಗಾರರ ಜೊತೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ವಿ. ನಾರಾಯಣ ಸ್ವಾಮಿ ಭಾಷಾಂತರ ಮಾಡುತ್ತಿದ್ದರು.
ತಂದೆಯನ್ನು ಹತ್ಯೆ ಮಾಡಿದವರ ಬಗ್ಗೆ ದ್ವೇಷವಿಲ್ಲ; ರಾಹುಲ್ ಗಾಂಧಿ
"ನಮಗೆ ಸಮುದ್ರವೇ ಎಲ್ಲಾ ಚಂಡಮಾರುತದ ಸಮಯದಲ್ಲಿ ನಮಗೆ ಯಾರೂ ಸಹ ಸಹಾಯ ಮಾಡಿಲ್ಲ. ಅವರು (ವಿ. ನಾರಾಯಣಸ್ವಾಮಿ) ಸಹ ಆಗ ಇಲ್ಲಿಗೆ ಭೇಟಿ ನೀಡಿಲ್ಲ" ಎಂದು ಮಹಿಳೆ ರಾಹುಲ್ ಗಾಂಧಿಗೆ ಹೇಳಿದರು.
ಪುದುಚೇರಿ ಸರ್ಕಾರದ ಬಿಕ್ಕಟ್ಟಿನ ನಡುವೆ ರಾಜ್ಯಪಾಲೆ ಕಿರಣ್ ಬೇಡಿ ವಜಾ!
ಆದರೆ, ಇದನ್ನು ಭಾಷಾಂತರ ಮಾಡುವಾಗ ವಿ. ನಾರಾಯಣ ಸ್ವಾಮಿ, "ಮಹಿಳೆ ನಮ್ಮನ್ನು ಹೊಗಳುತ್ತಿದ್ದಾಳೆ. ನಿವಾರ್ ಚಂಡಮಾರುತ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಿದ್ದೆ. ಅದಕ್ಕೆ ಧನ್ಯವಾದ ಹೇಳುತ್ತಿದ್ದೇಳೆ" ಎಂದು ಹೇಳಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ವಜಾ ಬಗ್ಗೆ ಪುದುಚೇರಿ ಸಿಎಂ ಮಾತು?
ಮಹಿಳೆ ಮಾತನಾಡಿರುವ, ನಾರಾಯಣ ಸ್ವಾಮಿ ಭಾಷಾಂತರ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಜೆಪಿ ನಾಯಕರು ಈ ವಿಡಿಯೋವನ್ನು ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ನಾರಾಯಣ ಸ್ವಾಮಿ ಟೀಕಿಸಿದ್ದಾರೆ.
ಬಿಜೆಪಿ ಚುನಾವಣಾ ಉಸ್ತುವಾರಿ ಸಿ. ಟಿ. ರವಿ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮುಂತಾದ ನಾಯಕರು ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.
Aandavan 🙏
— C T Ravi 🇮🇳 ಸಿ ಟಿ ರವಿ (@CTRavi_BJP) February 17, 2021
CONgress leaders seem to be competing with Rahul Gandhi in telling lies !
Elderly Woman in Tamil: Government did not help us during cyclone.
Puducherry CM Narayanaswamy to Rahul: She is thanking me for visiting her during cyclone and providing relief 😂 pic.twitter.com/G503woWDQA
ಬುಧವಾರ ರಾಹುಲ್ ಗಾಂಧಿ ಮೀನುಗಾರರ ಜೊತೆ ಸಂವಾದ ನಡೆಸಿದರು. ಬಳಿಕ ಮಹಿಳಾ ಕಾಲೇಜು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.