ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರದ ಸ್ಥಿತಿಗೆ ಕಾಂಗ್ರೆಸ್ ಕಾರಣ ಎಂದ ಸಚಿವ ರಿಜಿಜುಗೆ ಅವಾಜು

|
Google Oneindia Kannada News

"ಸರ್ದಾರ್ ಪಟೇಲ್ ಉಳಿದ ಎಲ್ಲ ಭಾಗದ್ದು ಪರಿಹರಿಸಿದರು. ನೆಹರೂ ಕಾಶ್ಮೀರವನ್ನು ವಹಿಸಿಕೊಂಡರು ಮತ್ತು ಹೆಚ್ಚು ತೊಂದರೆ ಸೃಷ್ಟಿಸಿದರು. 1,60,000ಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರನ್ನು ಬಲವಂತವಾಗಿ ಹೊರ ಹಾಕುವಾಗ ಸಾವಿರಾರು ಮಂದಿಯನ್ನು ಕೊಲ್ಲಲಾಯಿತು, ಹತ್ಯೆ ಮಾಡಲಾಯಿತು. ನಿಮ್ಮ ಕುಟುಂಬ ಮತ್ತು ಪಕ್ಷ ಕಾಶ್ಮೀರವನ್ನು ಹಾಳು ಮಾಡಿದೆ. ಮತ್ತು ನೀವೀಗ ಬಿಜೆಪಿ ಮೇಲೆ ಆರೋಪ ಮಾಡುತ್ತೀರಿ"

-ಹೀಗೊಂದು ಟ್ವೀಟ್ ಮಾಡಿದ್ದಾರೆ ಗೃಹ ಖಾತೆ ರಾಜ್ಯ ಸಚಿವ ಕಿರೇನ್ ರಿಜಿಜು. "ಅವಕಾಶವಾದಿ ಬಿಜೆಪಿ-ಪಿಡಿಪಿ ಮೈತ್ರಿಯು ಜಮ್ಮು ಮತ್ತು ಕಾಶ್ಮೀರದಲ್ಲಿ ಬೆಂಕಿ ಹಾಕಿದವು. ನಮ್ಮ ಯೋಧರೂ ಸೇರಿ ಹಲವು ಮುಗ್ಧರ ಸಾವಿಗೆ ಕಾರಣವಾದರು. ವ್ಯೂಹಾತ್ಮಕವಾಗಿ ಯೋಚಿಸಿದರೆ ಇದರಿಂದ ಭಾರತಕ್ಕೆ ಭಾರೀ ನಷ್ಟವಾಗಿದೆ. ಯುಪಿಎ ಸರಕಾರದ ವರ್ಷಗಳ ಶ್ರಮ ಹಾಳುಗೆಡವಿದರು..." ಎಂದು ರಾಹುಲ್ ಗಾಂಧಿ ಮಾಡಿದ ಟ್ವೀಟಿಗೆ ರಿಜಿಜು ಟ್ವೀಟ್ ಪ್ರತಿಕ್ರಿಯೆ ನೀಡಿದ್ದಾರೆ.

Minister of State for Home Affairs Kiren Rijuju tweet back fire

ಜಮ್ಮು-ಕಾಶ್ಮೀರಕ್ಕೆ ಮಾತ್ರ ರಾಜ್ಯಪಾಲರ ಆಳ್ವಿಕೆ ಏಕೆ?ಜಮ್ಮು-ಕಾಶ್ಮೀರಕ್ಕೆ ಮಾತ್ರ ರಾಜ್ಯಪಾಲರ ಆಳ್ವಿಕೆ ಏಕೆ?

ಇನ್ನು ಕಾಶ್ಮೀರಿ ಪಂಡಿತರ ಹತ್ಯೆ ಬಗ್ಗೆ ಪ್ರಸ್ತಾವ ಮಾಡಿರುವ ಸಚಿವ ರಿಜಿಜುಗೆ ಟ್ವೀಟ್ ಪ್ರತಿಕ್ರಿಯೆ ಬಂದಿದ್ದು, ಕಾಶ್ಮೀರಿ ಪಂಡಿತರ ಹತ್ಯೆಯಾದಾಗ ವಿ.ಪಿ.ಸಿಂಗ್ ಸರಕಾರ ಕೇಂದ್ರದಲ್ಲಿತ್ತು. ಅದನ್ನು ಬಿಜೆಪಿ ಬೆಂಬಲಿಸಿತ್ತು. ಬಿಜೆಪಿಯ ಖಾಸಾ ವ್ಯಕ್ತಿ ಜಗ್ ಮೋಹನ್ ರಾಜ್ಯಪಾಲರಾಗಿದ್ದರು ಎಂದು ತಿರುಗೇಟು ನೀಡಲಾಗಿದೆ.

ಸರ್ಕಾರ ಬಿದ್ದುಹೋದರೂ ಸೇನಾ ಕಾರ್ಯಾಚರಣೆಗೆ ಅಡ್ಡಿಯಿಲ್ಲ: ಸೇನೆಸರ್ಕಾರ ಬಿದ್ದುಹೋದರೂ ಸೇನಾ ಕಾರ್ಯಾಚರಣೆಗೆ ಅಡ್ಡಿಯಿಲ್ಲ: ಸೇನೆ

ಇನ್ನು ನಿಮಿತ್ ಎಂಬುವವರು ಪ್ರತಿಕ್ರಿಯಿಸಿದ್ದು, ಪ್ರತಿಯೊಂದಕ್ಕೂ ನೆಹರೂ- ನೆಹರೂ ಅಂತಾ ಇರಿ. ನಿಮಗೆ ಜನರು ಮತ ಕೊಟ್ಟಿದ್ದು ಏನು ಯೋಗ ಮಾಡುವುದಕ್ಕಾ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಿರೇನ್ ರಿಜಿಜು ಟ್ವೀಟ್ ಗೆ ಬಹುತೇಕ ಪ್ರತಿಕ್ರಿಯೆಗಳು ಬಿಜೆಪಿ ಸರಕಾರ ಹಾಗೂ ಅದರ ಸಾಧನೆಯನ್ನು ಪ್ರಶ್ನೆ ಮಾಡುವಂತೆಯೇ ಇವೆ.

English summary
Allegation in twitter against Congress for current scenario in Jammu and Kashmir by minister of state for home affairs Kiren Rijuju back fire. People questioning BJP achievements and governance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X