ಟ್ವಿಟ್ಟರ್ನಲ್ಲಿ ಮೆಹಬೂಬ ಮುಫ್ತಿ-ಒಮರ್ ಅಬ್ದುಲ್ಲಾ ಕಿತ್ತಾಟ
ಶ್ರೀನಗರ, ಆಗಸ್ಟ್ 8: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಒಮರ್ ಅಬ್ದುಲ್ಲಾ ರಾಜ್ಯಸಭೆಯ ಉಪಾಧ್ಯಕ್ಷರ ಹುದ್ದೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಟ ನಡೆಸಿದ್ದಾರೆ.
ರಾಜ್ಯಸಭೆಯ ಉಪಾಧ್ಯಕ್ಷರ ಹುದ್ದೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡಕ್ಕೂ ಏಕಕಾಲದಲ್ಲಿ ಹೇಗೆ ಬೆಂಬಲ ನೀಡುತ್ತೀರಿ ಎಂದು ಒಮರ್ ಪ್ರಶ್ನಿಸಿದ್ದರು.
ವಾಜಪೇಯಿ ನೆನೆದು ಮೋದಿ ವಿರುದ್ಧ ಹರಿಹಾಯ್ದ ಮೆಹಬೂಬ ಮುಫ್ತಿ
'ಮೆಹಬೂಬ ಅವರು ರಾಜ್ಯಸಭೆಯ ಉಪಾಧ್ಯಕ್ಷರ ಹುದ್ದೆಯೆ ಯುಪಿಎ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಹೇಳಿದ್ದರು. ಅದೇ ವೇಳೆಗೆ ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟವನ್ನು ಬೆಂಬಲಿಸುವುದಾಗಿಯೂ ಹೇಳಿದ್ದಾರೆ. ಅದು ನಿಜಕ್ಕೂ ಹೇಗೆ ಕೆಲಸ ಮಾಡುತ್ತದೆ? ಎಂದು ಅಬ್ದುಲ್ಲಾ ಟ್ವೀಟ್ ಮಾಡಿದ್ದರು.
ಇದು ಕಪೋಲಕಲ್ಪಿತ ಸುದ್ದಿ ಎಂದು ಮೆಹಬೂಬ ಹರಿಹಾಯ್ದಿದ್ದಾರೆ. ಸಾಮಾನ್ಯವಾಗಿ ಸುಳ್ಳು ಮತ್ತು ಕಪೋಲಕಲ್ಪಿತ ಸುದ್ದಿಗಳನ್ನು ಕೆಲವು ಶಂಕಾಸ್ಪದ ಸುದ್ದಿ ವಾಹಿನಿಗಳು ಪ್ರಸಾರ ಮಾಡುತ್ತವೆ.
ಆದರೆ, ಒಮರ್ ಅಬ್ದುಲ್ಲಾ ಅವರಂತಹ ರಾಜಕಾರಣಿಗಳು ಸಂಪೂರ್ಣ ಕಥೆ ಕಟ್ಟಿ ಸುಳ್ಳುಗಳನ್ನು ಹೆಣೆದಾಗ ಅಚ್ಚರಿಯಾಗುತ್ತದೆ. ಸತ್ಯಕ್ಕೆ ಹಾನಿಯುಂಟುಮಾಡುವ ಅಪಾಯಕಾರಿ ಪ್ರಚಾರ ಹಾಗೂ ಜನರನ್ನು ಹಾದಿತಪ್ಪಿಸುವ ಪ್ರಯತ್ನವಿದು ಎಂದು ಮೆಹಬೂಬ ಪ್ರತಿಕ್ರಿಯೆಯ ಟ್ವೀಟ್ ಮಾಡಿದ್ದರು.
ಸುಷ್ಮಾ ಸ್ವರಾಜ್ ಟ್ರೋಲ್: ಟ್ವಿಟ್ಟಿಗರಿಗೆ ಛೀಮಾರಿ ಹಾಕಿದ ಒಮರ್ ಅಬ್ದುಲ್ಲಾ
ಅಲ್ಲದೆ, ಒಮರ್ ಅಬ್ದುಲ್ಲಾ ಅವರ ಟ್ವೀಟ್ಗೆ ಸುಳ್ಳು ಹೇಳುವಂತೆ ಮುಖಭಾವದ ಎಮೋಜಿಯನ್ನು (ಉದ್ದ ಮೂಗಿನ) ಬಳಸಿ ಪ್ರತಿಕ್ರಿಯೆ ನೀಡಿದ್ದರು.
Usually fake news & falsehoods are peddled by dubious news channels. But its baffling when a politician like @OmarAbdullah fabricates stories based on pure fiction. Such dangerous propaganda is detrimental to the truth & an attempt to mislead people.https://t.co/39wAb1rzIS
— Mehbooba Mufti (@MehboobaMufti) 7 August 2018
ಆದರೆ, ಇಷ್ಟಕ್ಕೆ ಸುಮ್ಮನಾಗದ ಒಮರ್ ಅಬ್ದುಲ್ಲಾ ಅದನ್ನು ತಮಾಷೆ ಮಾಡಿದ್ದರು. 'ನಿಮ್ಮ ಖಾತೆಯನ್ನು ನಿರ್ವಹಿಸುವವರಿಗೆ ಹ್ಯಾಟ್ಸಾಫ್. ಅವರು ವಾಸ್ತವವಾಗಿ ಹಾಸ್ಯದ ಮನೋಭಾವ ಹೊಂದಿದ್ದಾರೆ. ಒಳ್ಳೆಯ ಎಮೋಜಿ ಬಳಸಿದ್ದಾರೆ' ಎಂದು ವಿನೋದವಾಗಿ ಹೇಳಿದ್ದಾರೆ.
ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ಮೆಹಬೂಬ, ತಾವೇ ತಮ್ಮ ಖಾತೆಯನ್ನು ನಿಭಾಯಿಸುತ್ತಿರುವುದಾಗಿ ಹೇಳಿದ್ದಾರೆ.
'ಮತ್ತೆ ಸುಳ್ಳು ಸುದ್ದಿ!?? ಅದಕ್ಕೆ ತಮಗೇ ಕಾಂಪ್ಲಿಮೆಂಟ್ ನೀಡಿ ಒಮರ್' ಎಂದು ಟ್ವೀಟ್ ಮಾಡಿದ್ದಾರೆ.