ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಟೆಲಿಕಾಂ ಹಗರಣ : ಮಾರನ್ ಬ್ರದರ್ಸ್ ಗೆ ಶುಭ ಸುದ್ದಿ
ಬಹುಕೋಟಿ ಟೆಲಿಕಾಂ ಹಗರಣದಲ್ಲಿ ಬಂಧನ ಭೀತಿಯಿಂದ ಸದ್ಯಕ್ಕೆ ಪಾರಾಗಿರುವ ಮಾಜಿ ಕೇಂದ್ರ ಟೆಲಿಕಾಂ ಸಚಿವ ದಯಾನಿಧಿ ಮಾರನ್ ಹಾಗೂ ಅವರ ಸೋದರ ಕಲಾನಿಧಿ ಮಾರನ್ ಗೆ ಗುರುವಾರ ಶುಭ ಸುದ್ದಿ ಸಿಕ್ಕಿದೆ.
ಬೆಂಗಳೂರು, ಫೆಬ್ರವರಿ 02: ಬಹುಕೋಟಿ ಟೆಲಿಕಾಂ ಹಗರಣದಲ್ಲಿ ಬಂಧನ ಭೀತಿಯಿಂದ ಪಾರಾಗಿರುವ ಮಾಜಿ ಕೇಂದ್ರ ಟೆಲಿಕಾಂ ಸಚಿವ ದಯಾನಿಧಿ ಮಾರನ್ ಹಾಗೂ ಅವರ ಸೋದರ ಕಲಾನಿಧಿ ಮಾರನ್ ಗೆ ಗುರುವಾರ ಶುಭ ಸುದ್ದಿ ಸಿಕ್ಕಿದೆ.
ಆದರೆ, ಮುಂದಿನ ಆದೇಶದ ತನಕ ಏರ್ ಸೆಲ್-ಮ್ಯಾಕ್ಸಿಸ್ ನಡುವಿನ 65 ಕೋಟಿ ರು ಡೀಲ್ ನಿಂದ ಯಾವುದೇ ಆದಾಯ ಪಡೆಯದಂತೆ ಮ್ಯಾಕ್ಸಿಸ್ ಸಂಸ್ಥೆಗೆ ಸುಪ್ರೀಂಕೋರ್ಟ್ ಇತ್ತೀಚೆಗೆ ನಿರ್ಬಂಧ ಹೇರಿದೆ.
ಏರ್ಸೆಲ್-ಮ್ಯಾಕ್ಸಿಸ್ ಪ್ರಕರಣದ ಆರೋಪದಲ್ಲಿ ಸಿಲುಕಿದ್ದ ಮಾಜಿ ದೂರಸಂಪರ್ಕ ಖಾತೆ ಸಚಿವ ದಯಾನಿಧಿ ಮಾರನ್ ಸೇರಿದಂತೆ ಎಲ್ಲಾ 6 ಮಂದಿಗೆ ವಿಶೇಷ ನ್ಯಾಯಾಲಯದಿಂದ ಗುರುವಾರ ಬಿಗ್ ರಿಲೀಫ್ ಸಿಕ್ಕಿದೆ.
ಕಾಂಗ್ರೆಸ್ ಆಡಳಿತದ ಸಮಯದಲ್ಲಿ ಮಲೇಷಿಯಾ ಉದ್ದಿಮೆದಾರ ಟಿ.ಎ.ಆನಂದ ಕೃಷ್ಣನ್ ಅವರಿಗೆ ಏರ್ಸೆಲ್ ಕೊಳ್ಳಲು, ಅದರ ಮಾಜಿ ಒಡೆಯ ಶಿವಶಂಕರನ್ ಮೇಲೆ ಒತ್ತಡ ಹೇರಲು ಮಾರನ್ ಸಹಕರಿಸಿದ್ದರು ಎಂದು ಸಿಬಿಐ ಆರೋಪಪಟ್ಟಿ ದಾಖಲಿಸಿತ್ತು.
Comments
dayanidhi maran 2g scam aircel scam supreme court cbi ದಯಾನಿಧಿ ಮಾರನ್ ಟೆಲಿಕಾಂ ಏರ್ ಸೆಲ್ ಹಗರಣ ಸುಪ್ರೀಂಕೋರ್ಟ್ ಸಿಬಿಐ
English summary
Former telecom minister Dayanidhi Maran and his brother Kalanithi Maranhave been discharged in the Aircel-Maxis case. The Patiala House court discharged in both the brothers in cases that were probed by the Central Bureau of Investigation and the Enforcement Directorate.
Story first published: Thursday, February 2, 2017, 17:54 [IST]