ಸೇಲಂನಲ್ಲಿ ಭೀಕರ ಅಪಘಾತ: 7 ಜನರ ದುರ್ಮರಣ
ಸೇಲಂ, ಸೆಪ್ಟೆಂಬರ್ 01: ತಮಿಳುನಾಡಿನ ಸೇಲಂನಲ್ಲಿ ಇಂದು(ಸೆ.01) ಸಂಭವಿಸಿದ ಭೀಕರ ಅಪಘಾತದಲ್ಲಿ ಏಳು ಜನ ಮೃತರಾಗಿದ್ದಾರೆ. ಅಪಘಾತದಲ್ಲಿ 50 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ತಮಿಳುನಾಡಿನ ಸೇಲಂನಿಂದ ಧರ್ಮಾಪುರಿಗೆ ಹೊರಟಿದ್ದ ಬಸ್ಸು ಸೇಲಂನಲ್ಲಿ ಅಪಘಾತಕ್ಕೊಳಗಾಗಿದ್ದು, ಈ ದುರಂತ ಸಂಭವಿಸಿದೆ. 40 ಜನರನ್ನು ಹೊತ್ತಿದ್ದ ಖಾಸಗಿ ಬಸ್ ಎದುರಿನಿಂದ ಬರುತ್ತಿದ್ದ ಮತ್ತೊಂದು ಬಸ್ ಮತ್ತು ಲಾರಿಗೆ ಡಿಕ್ಕಿ ಹೊಡೆ ಪರಿಣಾಮ ಈ ಘಟನೆ ನಡೆದಿದ್ದು, ಮೂರೂ ವಾಹನಗಳಲ್ಲಿದ್ದ 50 ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ.
ಕೆಎಸ್ಆರ್ಟಿಸಿ-ಖಾಸಗಿ ಬಸ್ ಅಪಘಾತ: ಮೂವರ ದುರ್ಮರಣ
ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ.
ಇತ್ತೀಚೆಗಷ್ಟೆ ಜಮ್ಮು ಕಾಶ್ಮೀರದ ಕಿಶ್ತ್ವಾರ್ ನಲ್ಲಿ ವೇಗವಾಗಿ ಸಾಗುತ್ತಿದ್ದ ವಾಹನ ನದಿಗೆ ಉರುಳಿದ ಪರಿಣಾಮ 13 ಮಂದಿ ಸಾವಿಗೀಡಾಗಿದ್ದರು.
ಭೀಕರ ಅಪಘಾತದಲ್ಲಿ ಮಹಾರಾಷ್ಟ್ರ ಬಿಜೆಪಿ ಮುಖಂಡ ನಿಧನ
ಆಗಸ್ಟ್ 28 ರಂದು ಶಿರಾ-ತುಮಕೂರು ಹೆದ್ದಾರಿಯಲ್ಲಿ ಕೆಎಸ್ ಆರ್ ಟಿಸಿ ಬಸ್, ಖಾಸಗಿ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತರಾಗಿದ್ದರು.
ರಸ್ತೆ ಅಪಘಾತ: ಎನ್ಟಿಆರ್ ಮಗ ನಂದಮೂರಿ ಹರಿಕೃಷ್ಣ ಸಾವು
ಆಗಸ್ಟ್ 19 ರಂದು ತೆಲಂಗಾಣದ ನಲ್ಗೊಂಡ ಎಂಬಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ತೆಲುಗು ನಟ, ರಾಜಕಾರಣಿ ನಂದಮೂರಿ ಹರಿಕೃಷ್ಣ ಮೃತರಾಗಿದ್ದರು.