ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಾವೋವಾದಿಗಳಿಂದ ನಾಲ್ವರು ಬಿಎಸ್ ಎಫ್ ಜವಾನರ ಹತ್ಯೆ
ಕಂಕೇರ್(ಛತ್ತೀಸ್ ಗಢ), ಏಪ್ರಿಲ್ 04: ಛತ್ತೀಸ್ ಗಢದ ಕಾಂಕೇರ್ ಜಿಲ್ಲೆಯಲ್ಲಿ ಮಾವೋವಾದಿಗಳು ಮತ್ತು ಬಿಎಸ್ ಎಫ್ ಜವಾನರ ನಡುವೆ ನಡೆದ ಎನ್ ಕೌಂಟರ್ ದಾಳಿಯಲ್ಲಿ ನಾಲ್ವರು ಬಿಎಸ್ ಎಫ್ ಯೋಧರು ಹುತಾತ್ಮರಾಗಿದ್ದಾರೆ.
ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಛತ್ತೀಸ್ ಗಢದಲ್ಲಿ ಲೋಕಸಭೆ ಚುನಾವಣೆಗೆ ಕೆಲವೇ ದಿನ ಬಾಕಿ ಉಳಿದಿರುವಾಗ ಈ ಘಟನೆ ನಡೆದಿದ್ದು ಆತಂಕ ಸೃಷ್ಟಿಸಿದೆ.
ಛತ್ತೀಸ್ಗಢದಲ್ಲಿ ಸೇನೆಯಿಂದ ಎನ್ಕೌಂಟರ್ ನಾಲ್ವರು ನಕ್ಸಲರ ಹತ್ಯೆ
ಇದಕ್ಕೂ ಮುನ್ನ ಮಾರ್ಚ್ 26 ರಂದು ಛತ್ತೀಸ್ ಗಢ ರಾಜಧಾನಿ ರಾಯ್ಪುರದಿಂದ 800 ಕಿ.ಮೀ. ದೂರದಲ್ಲಿರುವ ಕರ್ಕನ್ ಗುಡ ಗ್ರಾಮದ ಬಳಿ ಕಾಡಿನಲ್ಲಿ ನಕ್ಸಲರು ಅಡಗಿರುವ ಖಚಿತ ಮಾಹಿತಿ ಲಭ್ಯವಾದ ಕಾರಣ ಸಿಆರ್ ಪಿಎಫ್ ಯೋಧರು ಕಾರ್ಯಾಚರಣೆ ನಡೆಸಿ, ನಾಲ್ವರು ನಕ್ಸಲರನ್ನು ಬಲಿತೆಗೆದುಕೊಂಡಿದ್ದರು.
ಛತ್ತೀಸ್ ಗಢದ 11 ಲೋಕಸಭಾ ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಏಪ್ರಿಲ್ 11, 18, 23 ರಂದು ಚುನಾವಣೆ ನಡೆಯಲಿದೆ. ಮೇ 23 ರಂದು ಫಲಿತಾಂಶ ಹೊರಬೀಳಲಿದೆ.
Comments
English summary
4 Border Security Force (BSF) jawans were killed and two others injured on Thursday after an encounter with Maoists in Kanker district in Chhattisgarh.
Story first published: Thursday, April 4, 2019, 15:21 [IST]