ಮುಖ್ಯಮಂತ್ರಿ ಹುದ್ದೆಯಲ್ಲಿದ್ದಾಗಲೇ ಸಾವನ್ನಪ್ಪಿದ 18ನೇ ವ್ಯಕ್ತಿ ಮನೋಹರ್ ಪರಿಕರ್
ಮುಖ್ಯಮಂತ್ರಿ ಹುದ್ದೆಯಲ್ಲಿ ಇರುವಾಗಲೇ ನಿಧನರಾದ ಹದಿನೆಂಟನೇ ಹಾಗೂ ಗೋವಾದ ಎರಡನೇ ಮುಖ್ಯಮಂತ್ರಿ ಮನೋಹರ್ ಪರಿಕರ್. ಹೀಗೆ ಅಧಿಕಾರದಲ್ಲಿ ಇರುವಾಗಲೇ ನಿಧನರಾದ ಭಾರತದ ಮುಖ್ಯಮಂತ್ರಿಗಳ ಪಟ್ಟಿ ಇಲ್ಲಿದೆ.
* ಹುದ್ದೆಯಲ್ಲಿದ್ದಾಗಲೇ ಮೃತಪಟ್ಟ ಭಾರತದ ಹದಿನೆಂಟನೇ ಹಾಗೂ ಗೋವಾದ ಎರಡನೇ ಮುಖ್ಯಮಂತ್ರಿ ಮನೋಹರ್ ಪರಿಕರ್
ರಕ್ಷಣಾ ಸಚಿವರಾಗಿ ಪರಿಕ್ಕರ್ ಮಾಡಬೇಕೆಂದಿದ್ದ ಈ ಕೆಲಸ ಕನಸಾಗಿಯೇ ಉಳಿಯದಿರಲಿ
* ಮಹಾರಾಷ್ಟ್ರ ಗೋಮಂತಕ್ ಪಾರ್ಟಿಯ ನೇತಾರ ದಯಾನಂದ್ ಬಂಡೋಕರ್ 1973ರ ಆಗಸ್ಟ್ ನಲ್ಲಿ ನಿಧನರಾದರು. 1963ರಲ್ಲಿ ಅದ್ಬುತ ಗೆಲುವು ಸಾಧಿಸಿ, ಗೋವಾದ ಮೊದಲ ಮುಖ್ಯಮಂತ್ರಿ ಆಗಿದ್ದರು. 1967 ಹಾಗೂ 1972ರಲ್ಲೂ ಮಹಾರಾಷ್ಟ್ರ ಗೋಮಂತಕ್ ಪಾರ್ಟಿ ಗೆಲುವು ಸಾಧಿಸಿತ್ತು.
* ತಮಿಳುನಾಡಿನ ಮೂವರು ಅಧಿಕಾರಾರೂಢ ಮುಖ್ಯಮಂತ್ರಿಗಳು ಸಾವನ್ನಪ್ಪಿದ್ದಾರೆ. ಮೊದಲನೆಯವರು ಸಿ.ಎನ್.ಅಣ್ಣಾದುರೈ. 1967ರ ತಮಿಳುನಾದು ವಿಧಾನಸಭಾ ಚುನಾವಣೆಯಲ್ಲಿ ಅಣ್ಣಾದುರೈ ಅವರ ನೇತೃತ್ವದಲ್ಲೇ ಕಾಂಗ್ರೆಸ್ ಅನ್ನು ಸೋಲಿಸಲಾಯಿತು. ಮುಖ್ಯಮಂತ್ರಿ ಹುದ್ದೆಗೆ ಏರಿದ ಎರಡು ವರ್ಷದಲ್ಲಿ ಅವರು ನಿಧನರಾದರು.
* ತಮಿಳುನಾಡಿನ ಜನಪ್ರಿಯ ನಟ, ಅಲ್ ಇಂಡಿಯನ್ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಸ್ಥಾಪಕ ಎಂ.ಜಿ.ರಾಮಚಂದ್ರನ್ ಅಧಿಕಾರದಲ್ಲಿ ಇದ್ದಾಗಲೇ 1987ರ ಡಿಸೆಂಬರ್ ನಲ್ಲಿ ನಿಧನರಾದರು.
ಮನೋಹರ್ ಪರಿಕ್ಕರ್ ಹೇಳಿದ ಕಲ್ಲಂಗಡಿ ಹಣ್ಣಿನ ಕಥೆ
* ಎಐಎಡಿಎಂಕೆಯಿಂದ ಮತ್ತೊಬ್ಬ ಅಧಿಕಾರಾರೂಢ ಮುಖ್ಯಮಂತ್ರಿ ಜೆ.ಜಯಲಲಿತಾ ಡಿಸೆಂಬರ್ 2016ರಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದರು.
* ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಸ್ಥಾಪಕ, ಮೂರು ಬಾರಿ ಮುಖ್ಯಮಂತ್ರಿ ಆಗಿ ಕಾರ್ಯ ನಿರ್ವಹಿಸಿದ್ದ ಶೇಕ್ ಅಬ್ದುಲ್ಲಾ ತಾವು ನಿಧನರಾಗುವ ತನಕ ಮುಖ್ಯಮಂತ್ರಿಯಾಗಿದ್ದು, 1982ರಲ್ಲಿ ಸಾವನ್ನಪ್ಪಿದರು.
ಗೋವಾದ ದಿವಂಗತ ಮುಖ್ಯಮಂತ್ರಿ ಮನೋಹರ್ ಪರಿಕರ್ ಜೀವನದ ಹೆಜ್ಜೆ ಗುರುತುಗಳು
* ಪಿಡಿಪಿ ಸ್ಥಾಪಕ ಮುಫ್ತಿ ಮೊಹ್ಮದ್ ಸಯೀದ್ ಜನವರಿ 7, 2016ರಲ್ಲಿ ಅಧಿರದಲ್ಲಿ ಇರುವಾಗಲೇ ನಿಧನರಾದರು. ವಿವಿಧ ಸಂದರ್ಭದಲ್ಲಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದರು.
* ಗುಜರಾತ್ ನ ಇಬ್ಬರು ಮುಖ್ಯಮಂತ್ರಿ ಅಧಿಕಾರದಲ್ಲಿ ಇದ್ದಾಗಲೇ ಸಾವನ್ನಪ್ಪಿದ್ದಾರೆ. ಭಾರತ-ಪಾಕಿಸ್ತಾನ ಮಧ್ಯೆ 1965ರಲ್ಲಿ ನಡೆದ ಯುದ್ಧದಲ್ಲಿ ಪಾಕ್ ವಾಯು ಸೇನೆ ವಿಮಾನ ಹೊಡೆದುರುಳಿಸಿ ಬಲ್ವಂತ್ ರಾಯ್ ಮೆಹ್ತಾ ಮರಣ ಹೊಂದಿದರು.
* 1990ರಿಂದ 1994ರಲ್ಲಿ ತಾವು ನಿಧನರಾಗುವ ತನಕ ಗುಜರಾತ್ ಮುಖ್ಯಮಂತ್ರಿ ಆಗಿದ್ದರು ಚಿಮ್ನಾಭಾಯ್ ಪಟೇಲ್. ಮೆಹ್ತಾ ಸೇರಿದಂತೆ ಮೂವರು ಮುಖ್ಯಮಂತ್ರಿಗಳು ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ. ಆ ಮೂವರೂ ಕಾಂಗ್ರೆಸ್ ನವರು.
ಹುಬ್ಬಳ್ಳಿ ನನಗೆ ಎರಡನೇ ತವರು ಮನೆ ಇದ್ದಂತೆ ಎಂದಿದ್ದ ಪರಿಕ್ಕರ್
* ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿ ಆಗಿದ್ದ ವೈ.ಎಸ್.ರಾಜಶೇಖರ ರೆಡ್ಡಿ 2009ರ ಸೆಪ್ಟೆಂಬರ್ ನಲ್ಲಿ ವಿಮಾನ ದುರಂತದಲ್ಲಿ ದುರ್ಮರಣಕ್ಕೆ ಈಡಾದರು. ವಿಧಾನಸಭೆ ಚುನಾವಣೆಯಲ್ಲಿ ಅದ್ಭುತ ಗೆಲುವು ಸಾಧಿಸಿದ ಕೆಲ ತಿಂಗಳಲ್ಲಿ ಸಾವನ್ನಪ್ಪಿದರು.
* ಅರುಣಾಚಲ ಪ್ರದೇಶದ ದೋರ್ಜಿ ಖಂಡು ಮೇ 2011ರಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೀಡಾದರು.
* ಪಂಜಾಬ್ ನ ಮುಖ್ಯಮಂತ್ರಿ ಬೇಅಂತ್ ಸಿಂಗ್ ಚಂಡೀಗಢದಲ್ಲಿನ ರಾಜ್ಯ ಕಾರ್ಯಾಲಯದಲ್ಲಿ ಸಿಖ್ ಉಗ್ರವಾದಿಗಳಿಂದ 1995ರಲ್ಲಿ ಹತ್ಯೆಗೀಡಾದರು.
* ಮಹಾರಾಷ್ಟ್ರದ ಎರಡನೇ ಮುಖ್ಯಮಂತ್ರಿ ಮಾರುತ್ ರಾವ್ ಕನ್ನಮ್ ವರ್ (1962-63) ಮುಖ್ಯಮಂತ್ರಿ ಆಗಿದ್ದಾಗಲೇ ನಿಧನರಾದರು.
* ಸ್ವಾತಂತ್ರ್ಯ ಹೋರಾಟಗಾರ ಬಿಧನ್ ಚಂದ್ರ ರಾಯ್ ಪಶ್ಚಿಮ ಬಂಗಾಲಕ್ಕೆ 1952ರಿಂದ ಅವರು ನಿಧನರಾಗುವ 1962ರ ತನಕ ಮುಖ್ಯಮಂತ್ರಿಯಾಗಿದ್ದರು.
* ಬರ್ಕತ್ ಉಲ್ಲಾ ಖಾನ್ 1971ರಿಂದ 1973ರಲ್ಲಿ ನಿಧನರಾಗುವ ತನಕ ರಾಜಸ್ತಾನದ ಮುಖ್ಯಮಂತ್ರಿಯಾಗಿದ್ದರು.
* ಕಾಂಗ್ರೆಸ್ ನ ಶ್ರೀಕೃಷ್ಣ ಸಿಂಗ್ ಬಿಹಾರದ ಮೊದಲ ಮುಖ್ಯಮಂತ್ರಿಯಾಗಿ 1952ರಿಂದ ಅವರು ನಿಧನರಾಗುವ 1961ರ ತನಕ ಇದ್ದರು.
* ಕೇಂದ್ರ ಪ್ರಾಂತ್ಯದ ಮುಖ್ಯಮಂತ್ರಿ ಆಗಿದ್ದಾಗಲೇ ಡಿಸೆಂಬರ್ 1956ರಲ್ಲಿ ನಿಧನರಾದವರು ರವಿಶಂಕರ್ ಶುಕ್ಲಾ.
* ಗೋಪಿನಾಥ್ ಬೋರ್ಡೋಲಾಯ್ ಆಸ್ಸಾಂನ ಮುಖ್ಯಸ್ಥರಾಗಿದ್ದವರು 1950ರ ಆಗಸ್ಟ್ ನಲ್ಲಿ ನಿಧನರಾದರು. ಆ ಸ್ಥಾನವನ್ನು ಎರಡು ಸಲ ಅಲಂಕರಿಸಿದ್ದರು.