Breaking: ಮಣಿಪುರ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟ
ಮಣಿಪುರ, ಜನವರಿ 8: ಮಣಿಪುರ ರಾಜ್ಯದ ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ. ಮಣಿಪುರದಲ್ಲಿ ಎರಡು ಹಂತದ ಮತದಾನ ನಡೆಸಲು ಚುನಾವಣಾ ಆಯೋಗ ತೀರ್ಮಾನಿಸಿದೆ.
ಮಣಿಪುರದ ಒಟ್ಟು 60 ವಿಧಾನಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಫೆಬ್ರವರಿ 27ರಂದು ಮೊದಲ ಹಂತದ ಚುನಾವಣೆ ನಡೆದರೆ, ಮಾರ್ಚ್ 3ರಂದು ಎರಡನೇ ಹಾಗೂ ಕೊನೆಯ ಹಂತದ ಚುನಾವಣೆ ನಡೆಯಲಿದೆ. ಮಾರ್ಚ್ 10ರಂದು ಮಣಿಪುರದ ಜೊತೆಗೆ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಮಣಿಪುರದಲ್ಲಿ ಮೊದಲ ಹಂತದ ಚುನಾವಣೆ ಫೆಬ್ರವರಿ 1ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಸಲು ಫೆಬ್ರವರಿ 8 ಕೊನೆಯ ದಿನಾಂಕವಾಗಿರುತ್ತದೆ, ಜನವರಿ 9ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ, ನಾಮಪತ್ರ ಹಿಂಪಡೆಯಲು ಫೆಬ್ರವರಿ 11 ಕೊನೆಯ ದಿನಾಂಕವಾಗಿರುತ್ತದೆ. ಫೆಬ್ರವರಿ 27ರಂದು ಮೊದಲ ಹಂತದ ಮತದಾನ ನಡೆಯಲಿದೆ.
ಇನ್ನು ಎರಡನೇ ಹಂತದ ಚುನಾವಣೆಯಲ್ಲಿ ಫೆಬ್ರವರಿ 4ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಸಲು ಫೆಬ್ರವರಿ 11 ಕೊನೆಯ ದಿನಾಂಕವಾಗಿರುತ್ತದೆ, ಜನವರಿ 14ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ, ನಾಮಪತ್ರ ಹಿಂಪಡೆಯಲು ಫೆಬ್ರವರಿ 16 ಕೊನೆಯ ದಿನಾಂಕವಾಗಿರುತ್ತದೆ. ಮಾರ್ಚ್ 3ರಂದು ಎರಡನೇ ಹಂತದ ಮತದಾನ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಮಣಿಪುರದಲ್ಲಿ ಅಭ್ಯರ್ಥಿಗಳ ವೆಚ್ಚದ ಮಿತಿ 28 ಲಕ್ಷ ರೂ. ಇರುತ್ತದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ತಿಳಿಸಿದರು.
ಕಠಿಣ
ಪರಿಸ್ಥಿತಿಯಲ್ಲೂ
ಚುನಾವಣೆ
ಕಠಿಣ
ಪರಿಸ್ಥಿತಿಯಲ್ಲೂ
ಚುನಾವಣೆ
ನಡೆಸುವುದು
ನಮ್ಮ
ಕರ್ತವ್ಯ.
ಮುನ್ನೆಚ್ಚರಿಕೆ
ನಿಯಮಗಳೊಂದಿಗೆ
ಚುನಾವಣೆ
ನಡೆಸಲು
ತಿರ್ಮಾನಿಸಲಾಗಿದೆ.
ಕೋವಿಡ್
ಸೇಫ್
ಎಲೆಕ್ಷನ್
ನಡೆಸಲಾಗುವುದು.
ಹೆಚ್ಚು
ಜನರು
ಎಲೆಕ್ಷನ್ನಲ್ಲಿ
ಭಾಗಿಯಾಗುವಂತೆ
ಮಾಡಲಾಗುವುದು.
ಈಗಾಗಲೇ
ಸಾಕಷ್ಟು
ಸಭೆಗಳನ್ನು
ನಡೆಸಲಾಗಿದೆ
ಎಂದು
ಚುನಾವಣಾ
ಆಯೋಗದ
ಮುಖ್ಯ
ಆಯುಕ್ತ
ಸುಶೀಲ್
ಚಂದ್ರ
ತಿಳಿಸಿದ್ದಾರೆ.
ಗೃಹ ಇಲಾಖೆ, ಆರೋಗ್ಯ ಇಲಾಖೆ, ರಾಜಕೀಯ ಪಕ್ಷಗಳ ಜೊತೆಗೆ ಸಭೆ ನಡೆಸಿದೆ. ರಾಜ್ಯ ಸರ್ಕಾರದ ಹಲವು ಅಧಿಕಾರಿಗಳ ಜೊತೆಗೆ ಸಭೆ ನಡೆದಿದೆ. ಅವರಿಂದ ಹಲವು ಸಲಹೆಗಳನ್ನು ಪಡೆಯಲಾಗಿದೆ ಎಂದು ಸುಶೀಲ್ ಚಂದ್ರ ಹೇಳಿದರು.
ಎಲ್ಲ ಮತದಾನ ಕೇಂದ್ರಗಳಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ. ಕೆಳ ಮಹಡಿಯಲ್ಲಿ ಮತದಾನ ಕೇಂದ್ರಗಳಿರಲಿವೆ. ಸ್ಯಾನಿಟೈಜರ್ ವ್ಯವಸ್ಥೆ ಮಾಡಲಾಗುವುದು. ಕೋವಿಡ್ ಸೋಂಕಿತರು ಅಂಚೆ ಮತದಾನ ಮಾಡಬಹುದು ಎಂದು ಮಾಹಿತಿ ನೀಡಿದ್ದಾರೆ.
ಚುನಾವಣಾ
ರ್ಯಾಲಿ,
ರೋಡ್
ಶೋ
ಇಲ್ಲ
ಕೋವಿಡ್
ಮುಕ್ತ
ಚುನಾವಣೆ
ನಡೆಸುವ
ಆಶಯ
ವ್ಯಕ್ತಪಡಿಸಿರುವ
ಕೇಂದ್ರ
ಚುನಾವಣಾ
ಆಯೋಗವು,
ಜ.15ರವರೆಗೆ
ಚುನಾವಣಾ
ಮೆರವಣಿಗೆ,
ರೋಡ್
ಶೋ,
ಪಾದಯಾತ್ರೆ,
ಪ್ರಚಾರ
ಸಭೆಗಳಿಗೆ
ನಿರ್ಬಂಧ
ವಿಧಿಸಿದೆ.
ನಾಮಪತ್ರ
ಸಲ್ಲಿಕೆ
ವೇಳೆಯೂ
ಮೆರವಣಿಗೆ
ನಡೆಸುವಂತಿಲ್ಲ
ಎಂದು
ಆಯೋಗ
ಹೇಳಿದೆ.