ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಣಿಪುರ: ಎನ್ ಕೌಂಟರ್ ಗೆ ಓರ್ವ ಭಯೋತ್ಪಾದಕ ಬಲಿ, 2 ಯೋಧರು ಹುತಾತ್ಮ

|
Google Oneindia Kannada News

ಚಾಂಡೇಲ್(ಮಣಿಪುರ), ನವೆಂಬರ್ 15: ಮಣಿಪುರದ ಚಾಂಡೇಲ್ ಎಂಬಲ್ಲಿ ಭಾರತೀಯ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವಿನ ಗುಂಡಿನ ಚಕಮಕಿಯಲ್ಲಿ ಓರ್ವ ಭಯೋತ್ಪಾದಕನನ್ನು ಬಲಿಹಾಕುವಲ್ಲಿ ಭಾರತೀಯ ಸೇನೆ ಸಫಲವಾಗಿದ್ದರೆ, ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ.

ಜಮ್ಮು ಕಾಶ್ಮೀರ: ಓರ್ವ ಸೈನಿಕ ಹುತಾತ್ಮ, 3 ಭಯೋತ್ಪಾದಕರ ಹತ್ಯೆಜಮ್ಮು ಕಾಶ್ಮೀರ: ಓರ್ವ ಸೈನಿಕ ಹುತಾತ್ಮ, 3 ಭಯೋತ್ಪಾದಕರ ಹತ್ಯೆ

ಇಲ್ಲಿನ ಚಾಮೋಲಿ ಟಾಪ್ ನಲ್ಲಿ ಭಯೋತ್ಪಾದಕರು ಅಡಗಿ ಕುಳಿತಿದ್ದಾರೆಂಬ ಖಚಿತ ಮಾಹಿತಿಯ ಮೇರೆಗೆ ಇಂದು(ನ.15) ನಸುಕಿನಲ್ಲೇ ದಾಳಿ ಆರಂಭಿಸಿದ ಭಾರತೀಯ ಸೈನಿಕರು ಅಡಗಿ ಕುಳಿತಿದ್ದ ಓರ್ವ ಭಯೋತ್ಪಾದಕನನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾದರು. ಎನ್ ಕೌಂಟರ್ ಸಮಯದಲ್ಲಿ ಭಯೋತ್ಪಾದಕರು ಪ್ರತಿದಾಳಿ ನಡೆಸಿದ ಪರಿಣಾಮ ಭಾರತೀಯ ಸೇನೆಯ ಇಬ್ಬರು ಯೋಧರು ಹುತಾತ್ಮರಾದರು.

Manipur ambush: Two jawans, one terrorist killed

ಮೃತ ಸೈನಿಕರು ಮತ್ತು ಭಯೋತ್ಪಾದಕನ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಗುಂಡಿನ ದಾಳಿ ಮುಂದುವರಿದಿದೆ. ಮೃತ ಭಯೋತ್ಪಾದಕನಿಂದ ಕೆಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ನವೆಂಬರ್ 6 ರಂದು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದಿದ್ದ ಎನ್ ಕೌಂಟರ್ ನಲ್ಲಿ ಓರ್ವ ಸೈನಿಕ ಹುತಾತ್ಮರಾಗಿ, ಮೂವರು ಭಯೋತ್ಪಾದಕರನ್ನು ಹತ್ಯೆಗೈದಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
At least two security personnel and one terrorist were killed in an ongoing encounter in Chandel's Sajik Tampak in Manipur on Nov 15th. One AK-47, and two unexploded Improvised explosive devices (IEDs) were also recovered.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X