Breaking; ತ್ರಿಪುರ ಸಿಎಂ ಆಗಿ ಮಾಣಿಕ್ ಸಹಾ ಪ್ರಮಾಣ ವಚನ
ಅಗರ್ತಲ, ಮೇ 15; ತ್ರಿಪುರ ರಾಜ್ಯದ ಮುಖ್ಯಮಂತ್ರಿಯಾಗಿ ಮಾಣಿಕ್ ಸಹಾ ಪ್ರಮಾಣ ವಚನ ಸ್ವೀಕಾರ ಮಾಡಿದರು. ಬಿಜೆಪಿ ಹೈಕಮಾಂಡ್ ಶನಿವಾರ ಮುಖ್ಯಮಂತ್ರಿಯಾಗಿದ್ದ ಬಿಪುಲ್ ಕುಮಾರ್ ದೇಬ್ ರಾಜೀನಾಮೆ ಪಡೆದಿತ್ತು.
ಭಾನುವಾರ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಎನ್. ಎನ್. ಆರ್ಯ ಮಾಣಿಕ್ ಸಹಾಗೆ ಪ್ರಮಾಣ ವಚನ ಬೋಧಿಸಿದರು. ವೃತ್ತಿಯಲ್ಲಿ ದಂತವೈದ್ಯರಾಗಿರುವ ಮಾಣಿಕ್ ಸಹಾ, ತ್ರಿಪುರ ಬಿಜೆಪಿಯ ಅಧ್ಯಕ್ಷರು ಹೌದು.
ಕೇಂದ್ರ ಸಚಿವರಾದ ಮೊದಲ ತ್ರಿಪುರ ನಿವಾಸಿ ಪ್ರತಿಮಾ ಭೌಮಿಕ್
ತ್ರಿಪುರ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಬಿಜೆಪಿ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ. ಮಾಣಿಕ್ ಸಹಾ ಕಳೆದ ತಿಂಗಳು ರಾಜ್ಯಸಭೆ ಸದಸ್ಯರಾಗಿ ಸಹ ಆಯ್ಕೆಯಾಗಿದ್ದರು.
Breaking: ಮಾಣಿಕ್ ಸಾಹ ತ್ರಿಪುರಾ ನೂತನ ಮುಖ್ಯಮಂತ್ರಿ
ಶನಿವಾರ ಸಂಜೆ ನಡೆದ ತ್ರಿಪುರ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿಪುಲ್ ಕುಮಾರ್ ದೇಬ್ ಮಾಣಿಕ್ ಸಹಾ ಹೆಸರು ಘೋಷಣೆ ಮಾಡಿದ್ದರು. ಹೊಸ ಮುಖ್ಯಮಂತ್ರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಘೋಷಣೆ ಮಾಡಿದ್ದರು.
ಕೊನೆಗೂ ಕ್ಷಮೆ ಯಾಚಿಸಿದ ತ್ರಿಪುರ ಮುಖ್ಯಮಂತ್ರಿ ವಿಪ್ಲವ್
ಮಾಣಿಕ್ ಸಹ ಆಯ್ಕೆ ಮಾಡುವಾಗ ರಾಜ್ಯದ ನಾಯಕರ ಅಭಿಪ್ರಾಯ ಸಂಗ್ರಹ ಮಾಡಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಕೆಲವು ನಾಯಕರು ದೂರಿದ್ದಾರೆ. ಇದರಿಂದಾಗಿ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲವೇ? ಎಂಬ ಪ್ರಶ್ನೆ ಎದ್ದಿದೆ.